ಚಿಕ್ಕನಾಯಕನಹಳ್ಳಿ | ಸರ್ವ ರೋಗಕ್ಕೂ ಸಹಜ ಕೃಷಿ ಮದ್ದು: ಮಲ್ಲಿಕಾರ್ಜುನ ಭಟ್ರಳ್ಳಿ

Date:

Advertisements

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ, ವಡೇರಹಳ್ಳಿ, ದುಗಡಿಹಳ್ಳಿ, ಗೋಡೆಕೆರೆ, ಮೇಲನಹಳ್ಳಿ ಗ್ರಾಮಗಳ ತೆಂಗು ಬೆಳೆಗಾರ ರೈತರ ತೋಟಗಳಲ್ಲಿ ಸಹಜ ಕೃಷಿ ಅನುಷ್ಠಾನ ತರಬೇತಿ-ಪ್ರಾತ್ಯಕ್ಷಿಕೆ ನಡೆಸಲಾಯಿತು.

ಹೊನ್ನೇಬಾಗಿ ಗ್ರಾಮ ಪಂಚಾಯತಿಯ ಮೇಲನಹಳ್ಳಿ ಗ್ರಾಮದ ಹರೀಶ್ ಮಲ್ಲಿಕಾರ್ಜುನಯ್ಯನವರ ತೆಂಗಿನ ತೋಟದಲ್ಲಿ ಸೇರಿದ್ದ ರೈತರಿಗಾಗಿ ರೈತ ಮಿತ್ರರಾದ ಮಲ್ಲಿಕಾರ್ಜುನ ಭಟ್ರಳ್ಳಿ ಮತ್ತು ತರಬೇನಹಳ್ಳಿ ಷಡಾಕ್ಷರಿ ಸಹಜ ಕೃಷಿ ಅನುಷ್ಠಾನದ ತರಬೇತಿ-ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಮಂದಿ ರೈತರು ಈ ತರಬೇತಿ-ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.

ಕೃಷಿ 1 1

“ರೋಗ-ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡಬಲ್ಲ ಈ ಮಾದರಿಯ ಸಹಜಕೃಷಿಯೇ ಸರ್ವ ರೋಗಕ್ಕೂ ಮದ್ದು ಎಂಬುದಕ್ಕೆ ತಾಲೂಕಿನ ರೈತರೇ ಮೊದಲ ಸಾಕ್ಷಿಯಾಗಲಿದ್ದಾರೆ” ಎಂದು ಮಲ್ಲಿಕಾರ್ಜುನ ಭಟ್ರಳ್ಳಿ ವಿವರಿಸಿದರು.

Advertisements

ಕೃಷಿ 2 1

“ಸಹಜ ಕೃಷಿ ಅನುಷ್ಠಾನ ಯೋಜನೆಯ ಮಾದರಿಯಲ್ಲಿ ತೆಂಗು ಬೆಳೆಯುವುದರಿಂದ ಮುಂದಿನ 4 ವರ್ಷಗಳಲ್ಲಿ ತಾಲೂಕಿನ ತೆಂಗು ತೋಟ ಮತ್ತು ತೆಂಗು ಬೆಳೆಗಾರ ಭವಿಷ್ಯದ ಕೃಷಿಗೆ ಆಮೂಲಾಗ್ರ ಬದಲಾವಣೆಯನ್ನು ತರಬಹುದು. ದಿನನಿತ್ಯ ಸುಸ್ತು ಮತ್ತು ಸೋಲನ್ನೇ ಉಂಡಿರುವ ರೈತ ಸಮಾಜ ತಮ್ಮ ತೋಟಗಳಲ್ಲಿ ಸಹಜಕೃಷಿ ಅನುಷ್ಠಾನ ಮಾದರಿಯಲ್ಲಿ ಅತ್ಯುತ್ತಮವಾದ ಬೆಳೆ ತೆಗೆಯಲು ಸಾಧ್ಯವಿದೆ” ಎಂದು ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಹರೀಶ್ ಮಲ್ಲಿಕಾರ್ಜುನಯ್ಯ, ನವೀನ್, ಬೆಟ್ಟಪ್ಪ, ತರಬೇನಳ್ಳಿ ಷಡಕ್ಷರಿ ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.

ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X