ಚಿತ್ರದುರ್ಗ | ಶಾಸಕರಿಗೆ ವೇತನ ಹೆಚ್ಚಳ ಕಾಯ್ದೆ, ತಿರಸ್ಕರಿಸಲು ರೈತ ಸಂಘ ಆಗ್ರಹ.

Date:

Advertisements

ವಿಧಾನ ಸಭೆಯಲ್ಲಿ ಚರ್ಚಿಸದೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳಿಗೆ ಸಂಬಳ, ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ದುಪ್ಪಟ್ಟು ಸಂಬಳ ( ಈಗಿರುವ ಸಂಬಳಕ್ಕೆ ಎರಡು ಪಟ್ಟು) ಅನುಮೋದನೆಗೆ ಕಳುಹಿಸಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಾಯ್ದೆ ತಿರಸ್ಕರಿಸಲು ಮನವಿ ಸಲ್ಲಿಸಿ ಒತ್ತಾಯಿಸಿದರು.

1001719751
ಮೊಳಕಾಲ್ಮೂರು ತಾಲೂಕು ಕಛೇರಿ

ಈ ವೇಳೆ ಮಾತನಾಡಿದ ಮುಖಂಡರು, “ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಕಾಯ್ದೆಯನ್ನು ಸದನದಲ್ಲಿ ಚರ್ಚಿಸದೇ ಕಾಂಗ್ರೆಸ್, ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಪಕ್ಷಗಳು ಪರ-ವಿರೋಧವಿಲ್ಲದೇ ಸಂಬಳ ಹೆಚ್ಚುವರಿಗೆ ಅನುಮೋದನೆ ನೀಡಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ ಖಂಡಿಸುತ್ತಾ ರಾಜ್ಯ ಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೇ ವಾಪಾಸ್ ಕಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನ ಸಾಮಾನ್ಯರ ಮೇಲೆ ಸ್ಟಾಂಪ್. ಸರ್ವೇ, ಭೂದಾಖಲೆ, ರಿಜಿಸ್ಟ್ರೇಷನ್, ಕಂದಾಯ, ಪಹಣಿ, ಬಸ್ಸಿನ ದರ, ವಿದ್ಯುತ್, ನೀರಿನ ದರ, ಮುಂತಾದ ವಸ್ತುಗಳ ಮೇಲೆ ನಾಲ್ಕುಪಟ್ಟು ತೆರಿಗೆ ಹಾಕಿ ಆ ಹಣದಲ್ಲಿ ಸಂಬಳ ಭತ್ಯೆ ಹೆಚ್ಚಿಸಿಕೊಂಡು, ಮೋಜು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

“ಈ ಬಾರಿ ಅಧಿವೇಶನ ಪ್ರಾರಂಭದಿಂದ ಮೇಲ್ಮನೆ, ಕೆಳ ಮನೆಯಲ್ಲಿ ಜನರ ಸಮಸ್ಯೆಗಳ ಮತ್ತು ಸಾರ್ವಜನಿಕರಿಗೆ ಆಗತ್ಯ ಸೌಲಭ್ಯಕ್ಕೆ ಚರ್ಚೆ ಮಾಡಲು ಸದನದಲ್ಲಿ 20- 30 ಜನ ಶಾಸಕರು ಇರುತ್ತಾರೆ. ಉಳಿದ ಶಾಸಕರು ಸಭೆಗೆ ಗೈರು ಹಾಜರಿಯಾಗಿ ಅವರ ಸ್ವಂತ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್ ಗೆ ಶಾಸಕರು ಅವಮಾನ ಮಾಡುತ್ತಿದ್ದು ಇವರಿಗೆ ಸಂಬಳ, ಸಾರಿಗೆ ಹೆಚ್ಚು ಮಾಡಿಕೊಳ್ಳುವ ನೈತಿಕತೆ ಇಲ್ಲ. ಸಭಾಧ್ಯಕ್ಷರು ಸದನದಲ್ಲಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದೆ. ಆದ್ದರಿಂದ ಶಾಸಕರು, ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದರಿಂದ ಸರ್ಕಾರವನ್ನು ವಜಾಮಾಡಬೇಕೆಂದು ಒತ್ತಾಯಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

Advertisements
1001719754
ಮನವಿ ಸ್ವೀಕರಿಸಿದ ತಹಶೀಲ್ದಾರರು

“ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಒದಗಿಸಿಲ್ಲ. ವಿಧವಾ ವೇತನ, ಮಾನಾಸನ ಕೊಟ್ಟಿಲ್ಲ, ರೈತರಿಗೆ ವಿದ್ಯುತ್‌ ಸರಬರಾಜು ಹಾಗೂ ಅಕ್ರಮ-ಸಕ್ರಮ ಗಳಂತ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರ ಮೋಜು ಮಸ್ತಿಯ ಜೀವನಕ್ಕೆ ಸದನದಲ್ಲಿ ಚರ್ಚೆಯಿಲ್ಲದೆ, ಎಲ್ಲಾ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿ ಸಂಬಳ ಸಾರಿಗೆ, ಇತರೆ ಭತ್ಯೆ ಎರಡು ಪಟ್ಟು ಜಾಸ್ತಿ ಮಾಡಿಕೊಂಡು ಮತದಾರರಿಗೆ ನಾಡಿನ ಜನತೆಗೆ ದ್ರೋಹ ಬಗೆಯುತ್ತಿರುವ ಸದನವನ್ನು ವಜಾಮಾಡಬೇಕೆಂದು” ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಮರ್ಲಹಳ್ಳಿ ರವಿಕುಮಾರ್, ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ, ಗುಂಡೂರು ತಿಮ್ಮಪ್ಪ, ಚಂದ್ರಪ್ಪ, ದೊಡ್ಡಸೂರಯ್ಯ, ದೊಡ್ಡಯ್ಯ, ಮುತ್ತುಗರಳ್ಳಿ ವಿಜಯಣ್ಣ ಈಶ್ವರಪ್ಪ ಕೆಟಿ, ರಾಜಣ್ಣ, ಈರಣ್ಣ, ಪಿ ಟಿ ಹಳ್ಳಿ ನಿಂಗಣ್ಣ ಹಾಗೂ ಇತರರು ಭಾಗವಹಿಸಿದ್ದರು.‌

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X