ಚಿತ್ರದುರ್ಗ | ರಸ್ತೆ ಪಾಲಾಗಿವೆ ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳು

Date:

Advertisements

ಬಡ ರೋಗಿಗಳಿಗೆ, ಅಗತ್ಯವುಳ್ಳವರಿಗೆ ಬಳಕೆಯಾಗಬೇಕಾದ ಲಕ್ಷಾಂತರ ರೂಪಾಯಿ ಮೌಲ್ಯದ ಮಾತ್ರೆಗಳು, ಬಳಕೆಯಾಗದೇ ಆಸ್ಪತ್ರೆಲ್ಲಿ ಹಾಗೆಯೇ ಉಳಿದಿದ್ದು, ಇದೀಗ ರಸ್ತೆ ಬದಿಯ ತಿಪ್ಪೆ ಸೇರಿವೆ.

ಚಿತ್ರದುರ್ಗಯ ಪ್ರಾದೇಶಿಕ ಸಾರಿಗೆ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಅವಧಿ ಮೀರಿದ ಲಕ್ಷಾಂತರ ರೂ. ಮೌಲ್ಯದ ಮಾತ್ರಗಳು ಮತ್ತು ಔಷಧಿಗಳು ಪತ್ತೆಯಾಗಿವೆ. ಅಲ್ಲದೆ, ಕೆಲವು ಮಾತ್ರಗಳ ಅವಧಿ ಇನ್ನೂ ಒಂದು ವರ್ಷವಿದ್ದರೂ ಕೂಡ, ಅವುಗಳೂ ತಿಪ್ಪೆ ಸೇರಿವೆ.

ಶೀತ, ಕೆಮ್ಮು, ಅಲರ್ಜಿಯಂತಹ ಸಮಸ್ಯೆಗಳಿಗೆ ನೀಡಲಾಗುವ ಸಿಟ್ರಿಜನ್‌ ಮಾತ್ರೆಗಳು ಅಧಿಕವಾಗಿ ತಿಪ್ಪೆಯಲ್ಲಿ ಬಿದ್ದಿವೆ. ಅವುಗಳ ಮೇಲೆ, ಕರ್ನಾಟಕ ಸರ್ಕಾರ, ನಾಟ್ ಫಾರ್ ಸೇಲ್ (ಮಾರಾಟಕ್ಕಲ್ಲ) ಎಂದು ಬರೆಯಲಾಗಿದೆ. ಅವುಗಳಲ್ಲಿ ಹಲವು ಮಾತ್ರಗಳ ಅವಧಿ 2024ರವರೆಗೆ ಇದ್ದರೂ, ಅವುಗಳನ್ನು ಎಸೆಯಲಾಗಿದೆ. ಸರ್ಕಾರ ಬಡ ರೋಗಿಗಳಿಗೆ ಉಚಿತವಾಗಿ ವಿತರಣೆಗಾಗಿ ಕೊಟ್ಟಿದ್ದ ಮಾತ್ರೆಗಳನ್ನು ರಸ್ತೆ ಬದಿಯ ಕಸ ಮಾಡಲಾಗಿದೆ.

Advertisements

“ಸರ್ಕಾರದ ಮಾತ್ರೆಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿರುವುದರ ಹಿಂದೆ, ಹೊಸದಾಗಿ ಮಾತ್ರೆಗಳನ್ನು ಖರೀದಿಸಿ, ಮಾತ್ರೆ ತಯಾಕರು ಹಾಗೂ ಸರಬರಾಜು ದಾರರಿಗೆ ಅನುಕೂಲ ಮಾಡಿಕೊಡುವ ದುರುದ್ದೇವೆ ಇರುವಂತೆ ಕಾಣುತ್ತಿದೆ” ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

“ಈ ಹಿಂದೆಯೂ ಅವಧಿ ಮೀರಿದ ಮಾತ್ರೆಗಳನ್ನು ಬಿಸಾಡಲಾಗಿತ್ತು. ನಿಯಮಗಳ ಪ್ರಕಾರ, ಅಂತಹ ಮಾತ್ರೆಗಳನ್ನು ಯಾರಿಗೂ ಸಿಗದಂತೆ ಗುಂಡಿಯಲ್ಲಿ ಮುಚ್ಚಬೇಕು. ಆದರೆ, ಈ ರೀತಿ ರಸ್ತೆ ಬದಿಯಲ್ಲಿ ಬಿಸಾಡಿರುವುದು ಹಲವು ರೀತಿಯ ಅನುಮಾನಗಳನ್ನು ಹುಟ್ಟುಹಾಕುತ್ತಿವೆ” ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.

“ಮಾತ್ರೆಗಳನ್ನು ಯಾರು ಬಿಸಾಡಿದರು, ಯಾಕೆ ಬಿಸಾಡಿದರು ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸಬೇಕು. ದುರುದ್ದೇಶದಿಂದ ಬಿಸಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನಗರ ವಾಸಿಗಳು ಆಗ್ರಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X