ಭೋವಿ ಸಮುದಾಯಕ್ಕೆ ಅವಮಾನ ಮಾಡಿಲ್ಲ: ಸಿದ್ದರಾಮೇಶ್ವರ ಶ್ರೀಗಳ ಭೇಟಿಯಾದ ಹಾಸ್ಯನಟ ಹುಲಿ ಕಾರ್ತಿಕ್

Date:

Advertisements

“ಅಂದಿನ ನಮ್ಮ ಶೋನಲ್ಲಿ ಹೊಂಡ ಎನ್ನುವ ಶಬ್ದ ಅತಿಯಾದ ಧ್ವನಿವರ್ಧಕ ಅಥವಾ ಸಭಾಂಗಣದ ಅತಿಯಾದ ಶಬ್ದದಿಂದ ಅಪಾರ್ಥವಾಗಿ ಬಿಂಬಿತವಾಗಿದೆ. ನಮ್ಮ ಉದ್ದೇಶ ಎಲ್ಲರನ್ನೂ ನಗಿಸುವುದಷ್ಟೇ. ಯಾರನ್ನೂ ನೋಯಿಸುವುದಲ್ಲ. ಸರಿಯಾಗಿ ಕೇಳದೆ ಸಮುದಾಯಕ್ಕೆ ಅವಮಾನವಾಗಿದೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಬಳಕೆಯಾದ ಶಬ್ದವೇ ಬೇರೆ ಇದೆ” ಎಂದು ಹಾಸ್ಯನಟ ಹುಲಿ ಕಾರ್ತಿಕ್ ಭೋವಿಪೀಠದ ಸಿದ್ದರಾಮೇಶ್ವರ ಶ್ರೀಗಳಿಗೆ ಖಚಿತಪಡಿಸಿದರು.

ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಒಂದರಲ್ಲಿ ಭೋವಿ ಸಮುದಾಯಕ್ಕೆ ಅವಮಾನ ಆಗುವಂತೆ ಮಾತನಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾದ ಹಿನ್ನೆಲೆಯಲ್ಲಿ ಹಾಸ್ಯನಟ ಹುಲಿ ಕಾರ್ತಿಕ್, ಶಿವು, ನಂದೀಶ್ ಮತ್ತಿತರರು ಚಿತ್ರದುರ್ಗ ಸಮೀಪದ ಭೋವಿ ಗುರುಪೀಠಕ್ಕೆ ಆಗಮಿಸಿ, ಪೀಠದ ಶ್ರೀಗಳನ್ನು ಭೇಟಿಯಾಗಿ ಈ ಕುರಿತಂತೆ ಮಾಹಿತಿ ನೀಡಿ ಮಾತುಕತೆ ನಡೆಸಿದರು.

WhatsApp Image 2024 10 11 at 5.02.45 PM

ಭೋವಿ ಜನಾಂಗಕ್ಕೆ ಯಾವಾಗಲೂ ನೋವಾಗುವಂತೆ ಮಾತನಾಡಿಲ್ಲ. ಒಂದು ವೇಳೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾವೆಲ್ಲ ಬಡವರ ಮಕ್ಕಳಾಗಿದ್ದು, ಈಗ ಕಷ್ಟಪಟ್ಟು ಸ್ವಲ್ಪ ಸ್ವಲ್ಪವೇ ಮೇಲೆ ಬರುತ್ತಿದ್ದೇವೆ. ಈಗ ತಾನೆ ಅವಕಾಶಗಳು ಒಂದೊಂದಾಗಿ ಬರುತ್ತಿವೆ. ಇಂಥ ಹೊತ್ತಿನಲ್ಲಿ ದೂರು ದಾಖಲಾಗಿರುವುದು ಕಷ್ಟವಾಗುತ್ತಿದೆ ಎಂದು ನಟ ಹುಲಿ ಕಾರ್ತಿಕ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

Advertisements

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮೇಶ್ವರ ಶ್ರೀಗಳು, ಕಲಾವಿದರಲ್ಲಿ ಜಾತಿ ಧರ್ಮ ಭೇದವಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡಲಾಗುತ್ತದೆ. ಬಡವರ ಮಕ್ಕಳು ಕಷ್ಟಪಟ್ಟು ಬೆಳೆಯುತ್ತಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು. ವಡ್ಡ ಎನ್ನುವ ಶಬ್ದ ಪ್ರಯೋಗವಾಗಿದೆ ಎಂದು ನಮ್ಮ ಸಮಾಜದ ಕೆಲವು ಶಿಷ್ಯರು ದೂರು ದಾಖಲಿಸಿದ್ದಾರೆ. ಇದಕ್ಕೆ ಮನನೊಂದಿರುವ ನಟ ಹುಲಿ ಕಾರ್ತಿಕ್ ಹಾಗೂ ಇತರರು ನಮ್ಮನ್ನು ಭೇಟಿಯಾಗಿ ನೋವು ಹಂಚಿಕೊಂಡು, ಅಂದಿನ ವಿಚಾರವನ್ನು ವಿವರಿಸಿದ್ದಾರೆ. ಇದನ್ನು ದೊಡ್ಡದು ಮಾಡುವುದು ಬೇಡ. ಇಲ್ಲಿಗೆ ಬಿಟ್ಟುಬಿಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದೇವೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಉಡುಪಿ | ಅಂಬೇಡ್ಕರ್, ದಲಿತರಿಗೆ ಅವಮಾನಿಸಿದ ಸಂಘಪರಿವಾರದ ಮುಖಂಡ ಉಮೇಶ್ ನಾಯ್ಕ: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

“ಕಾರ್ತಿಕ್ ನಿಷ್ಕಲ್ಮಷ ಹೃದಯದವರು. ಬಡತನದಿಂದ ಬಂದವರು, ಬಡವರ ಮಕ್ಕಳು ಬೆಳೆಯಬೇಕು, ಬಾಳಬೇಕು, ಮೆರೆಯಬೇಕು ಎನ್ನುವುದು ನಮ್ಮ ಗುರುಪೀಠದ ಆಶಯವಾಗಿದೆ. ಇಂತಹ ಪ್ರತಿಭೆಗಳಿಗೆ ನಮ್ಮ ಗುರುಪೀಠ ಪ್ರೋತ್ಸಾಹ ನೀಡುತ್ತದೆಯೇ ಹೊರತು ಚಿವುಟುವ ಕೆಲಸ ಮಾಡುವುದಿಲ್ಲ. ಅವರ ಜೊತೆಗೆ ನಮ್ಮ ಮಠ ಇದೆ” ಎಂದು ಧೈರ್ಯ ತುಂಬಿದರು.

ಈ ವೇಳೆ ಹುಲಿ ಕಾರ್ತಿಕ್ ಶ್ರೀಗಳನ್ನು ಭೇಟಿಯಾದ ನಂತರ ಮಾತನಾಡಿ, “ಶ್ರೀಗಳನ್ನು ಭೇಟಿ ಮಾಡಿದ್ದು, ನಮ್ಮ ಮನಸ್ಸಿನಲ್ಲಿದ್ದ ನೋವು ಮಾಯವಾಗಿ ಮನಸ್ಸು ಹಗುರವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ವಿವಿಧ ಮಠಾಧೀಶರು, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ವಿ.ಎಸ್.ಹಳ್ಳಿ ಚಂದ್ರಶೇಖ‌ರ್, ರಾಘವೇಂದ್ರ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X