ದಕ್ಷಿಣ ಕನ್ನಡ | ಗುಡಿಸು ಅಂದ್ರೆ ಗುಡಿಸುವೆ, ಒರಸು ಅಂದ್ರೆ ಒರಸುವೆ: ನಳಿನ್ ಕುಮಾರ್ ಕಟೀಲ್

Date:

Advertisements

ಲೋಕಸಭಾ ಚುಣಾವಣೆಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಮಂಗಳವಾರ (ಮಾ.12) ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕರಾಗಿ ಮಾತನಾಡಿದ್ದಾರೆ.‌ “ಟಿಕೆಟ್ ಮಿಸ್ ಆದ್ರೆ ನನಗೆ ಏನು ಬೇಸರ ಇಲ್ಲ. ಪಕ್ಷದ ಕೆಲಸ ಮಾಡ್ತೇನೆ. ಪಕ್ಷ ಗುಡಿಸು ಅಂದ್ರೆ ಗುಡಿಸುತ್ತೇನೆ, ಒರಸು ಅಂದ್ರೆ ಒರಸುತ್ತೇನೆ, ನನಗೆ ಯಾವ ಬೇಸರವೂ ಇಲ್ಲ” ಎಂದಿದ್ದಾರೆ.

“ಟಿಕೆಟ್ ನಿರಾಕರಣೆಯಾದರೆ ನನಗಂತು ಅಸಮಾಧಾನ ಇಲ್ಲ. ಅಸಮಾಧಾನ ಯಾಕೆ? ಪಕ್ಷ ನನಗೆ ಮೂರು ಅವಧಿ ಅವಕಾಶ ನೀಡಿದೆ. 15 ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದೆ” ಎಂದರು.‌

“ನಮ್ಮ ಪಾರ್ಟಿಯಲ್ಲಿ ತುಳಿಯುವ ಕೆಲಸ ನಡೆಯಲ್ಲ. ಬೆಳೆಸುವ ಕೆಲಸ ನಡೆಯುತ್ತೆ, ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ಕೆಲಸ ಮಾಡಿಕೊಂಡಿದ್ದೆ, ಬಿಜೆಪಿಯ ಕೆಲಸ ಮಾಡೋ ಅಂದ್ರು, ಆಕೆಲಸ ಮಾಡಿದ್ದೇನೆ. ಯಾವ ಪಾರ್ಟಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ರಾಜ್ಯಾಧ್ಯಕ್ಷ ಮಾಡ್ತಾರೆ? ನನಗೆ ಇಂತಹ ಅವಕಾಶ ಪಕ್ಷ ಕೊಟ್ಟಿದೆ.‌ ಅದರ ಬಗ್ಗೆ ತೃಪ್ತಿ ಇದೆ” ಎಂದು ನಳಿನ್ ಹೇಳಿದರು.‌

Advertisements

“ಅವಕಾಶ ಸಿಕ್ಕಾಗ ನನಗೆ ನ್ಯಾಯ, ಸಿಕ್ಕಿದೆ ಅವಕಾಶ ಸಿಗ್ಲಿಲ್ಲ ಅಂದಾಗ ಅನ್ಯಾಯ ಆಗಿದೆ ಅನ್ನುವ ಜಾಯಮಾನ  ನನ್ನದಲ್ಲ. ಪಾರ್ಟಿ ಏನು ಹೇಳುತ್ತೋ ಆ ಕೆಲಸ ಮಾಡುವವರು ನಾವು, ಗುಡಿಸಿ ಅಂದರೆ ಗುಡಿಸುವವರರು, ಒರೆಸಿ ಎಂದರೆ ಒರೆಸುವವರು. ರಾಷ್ಟ್ರೀಯ ನಾಯಕರ ಚಿಂತನೆಗಳಿಗೆ, ಅವರ ನಿರ್ಧಾರಕ್ಕೆ ನಾನು ಬದ್ಧ” ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X