ಗಾಳಿಯ ಗುಣಮಟ್ಟ ಉತ್ತಮಗೊಳಿಸಲು ಸರ್ಕಾರದ ಎಲ್ಲ ಇಲಾಖೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕ್ರಿಯಾ ಯೋಜನೆ ರೂಪಿಸಬೇಕು ಎಂದು ದಾವಣಗೆರೆ ಪಾಲಿಕೆ ಆಯುಕ್ತೆ ರೇಣುಕಾ ಕರೆ ನೀಡಿದರು.
ನಗರದ ಪಾರ್ವತಿ ಪರ್ಲ್ಸ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಿ-ಸ್ಪೆಪ್ ಇವರ ಸಹಯೋಗದಲ್ಲಿ ಕೈಗಾರಿಕಾ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರ್ಟಿಒ, ಕೆಎಸ್ಆರ್ಟಿ ಹಾಗೂ ಇತರೆ ಇಲಾಖಾ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯಕ್ರಮದಡಿ ನಗರದ ವಾಯುಗುಣಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ನಗರದಲ್ಲಿ 10 ಪಿಎಂ ಗಾತ್ರದ ಧೂಳಿನ ಕಣಗಳನ್ನು ನಿಯಂತ್ರಿಸಲು ಯಾಂತ್ರೀಕೃತ ರಸ್ತೆಗುಡಿಸುವಿಕೆ ಯಂತ್ರಗಳನ್ನು ಖರೀದಿಸಿ ಉಪಯೋಗಿಸಲಾಗುತ್ತಿದ್ದು, ನಗರದ ಹಸಿರೀಕರಣ, ರಸ್ತೆಗಳಲ್ಲಿ ಎಂಡ್ ಟು ಎಂಡ್ ಪೇವರ್ ಆಳವಡಿಕೆ, ಇತರೆ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಮಂಡಕ್ಕಿ ಭಟ್ಟಿಗಳಲ್ಲಿ ವಿದ್ಯುತ್, ಎಲ್ಪಿಜಿ, ಸಿಎನ್ಜಿಯಂತಹ ಬದಲಿ ಇಂಧನ ಉಪಯೋಗಿಸಿ ಆಧುನಿಕ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಕಾರ್ಯಾಚರಿಸುವಂತೆ ಮಾಡಿ ವಾಯುಗುಣಮಟ್ಟ ಉತ್ತಮಗೊಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆತ್ಮಹತ್ಯೆಗಾಗಿ ಭೀಮಾ ನದಿಗೆ ಹಾರಿದ ಮಹಿಳೆ ಬಚಾವ್: ರಕ್ಷಣೆಗೆ ಹೋದ ಇಬ್ಬರು ನೀರುಪಾಲು!
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ನಿರ್ದೇಶಕ ಜಿ ಚಂದ್ರಬಾಬು, ಯೋಜನಾ ನಿರ್ದೇಶಕ ಡಾ ಎನ್ ಮಹಾಂತೇಶ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಡಾ ಹೆಚ್ ಲಕ್ಷ್ಮೀಕಾಂತ್, ರಾಜಶೇಖರ್ ಪುರಾಣಿಕ್ ಹಾಗೂ ಇತರರು ಇದ್ದರು.
