ದಾವಣಗೆರೆ | ತೋಟಕ್ಕೆ ಹರಿಯದ ಭದ್ರಾ ನಾಲೆ ನೀರು, ಯುವ ರೈತ ಆತ್ಮಹತ್ಯೆ, ಸಮರ್ಪಕ ನೀರೊದಗಿಸಲು ಒತ್ತಾಯ

Date:

Advertisements

ಭದ್ರಾ ಜಲಾಶಯದಿಂದ ಮೂರನೇ ಬಾರಿಗೆ ಸರದಿಯಲ್ಲಿ ನೀರು ಹರಿಸಿದರೂ ಅನೇಕ ಕಡೆ ತಲುಪದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನಾದರೂ ಸಮರ್ಪಕ ನೀರೊದಗಿಸುವಂತೆ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ರೈತರ ನಿಯೋಗವು ಜಿಲ್ಲಾ ಆಡಳಿತಕ್ಕೆ ಒತ್ತಾಯಿಸಿದೆ.

ದಾವಣಗೆರೆ ನಗರದಲ್ಲಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶರನ್ನು ಭೇಟಿ ಮಾಡಿದ ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ತೇಜಸ್ವಿ ಪಟೇಲ್ ನೇತೃತ್ವದ ರೈತ ನಿಯೋಗವು, ದಾವಣಗೆರೆ ತಾ. ಜಡಗನಹಳ್ಳಿ ಗ್ರಾಮದ 21 ವರ್ಷದ ಯುವ ರೈತ ಗುರುರಾಜ ಭದ್ರಾ ನಾಲೆಗೆ ನೀರು ಬರದೇ, ತಮ್ಮ ತೋಟ ಒಣಗಿರುವುದನ್ನು ನೋಡಿ ನೋವಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಷಾದಿಸಿದರು.

ಜಡಗನಹಳ್ಳಿ ಗ್ರಾಮದ ಯುವ ರೈತ ಗುರುರಾಜಗೆ ವಿವಾಹ ನಿಶ್ಚಿಯವಾಗಿತ್ತು. ಆದರೆ, ಭದ್ರಾ ಜಲಾಶಯದಿಂದ ನಾಲೆಗೆ ಮೂರನೇ ಸಲ ನೀರು ಬಿಟ್ಟರೂ ಸಹ ತಮ್ಮ ಭಾಗಕ್ಕೆ ನೀರು ಬರದೇ, ತಮ್ಮ ತಂದೆ ಮಹೇಶ್ವರಪ್ಪ ಕಷ್ಟಪಟ್ಟು ಬೆಳೆಸಿದ್ದ ತೋಟವು ಸಂಪೂರ್ಣ ಒಣಗಿದ್ದರಿಂದ ತೀವ್ರವಾಗಿ ನೊಂದಿದ್ದ ಗುರುರಾಜ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಭದ್ರಾ ನಾಲೆಗಳ ನೀರು ಹರಿಸುವ ವೇಳಾಪಟ್ಟಿಯನ್ನು ಇನ್ನೂ ಕನಿಷ್ಠ 3-4 ದಿನಗಳ ಕಾಲ ವಿಸ್ತರಿಸಬೇಕು ಎಂದರು.

Advertisements

ತೋಟ ಒಣಗಿದ್ದರಿಂದ ನೊಂದು ಸಾವಿಗೆ ಶರಣಾದ ಗುರುರಾಜನ ಸಾವೇ ಕೊನೆಯಾಗಲಿ. ಮತ್ತೆ ಯಾವೊಬ್ಬ ರೈತರು ಸಹ ನೀರು ಬಂದಿಲ್ಲವೆಂದು ಕೊರಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಈ ಎಲ್ಲಾ ಸಮಸ್ಯೆ ಅರಿತು, ತಕ್ಷಣವೇ ಇನ್ನೂ 4 ದಿನಗಳ ಕಾಲ ನೀರು ಹರಿಸುವಿಕೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ತೇಜಸ್ವಿ ಪಟೇಲ್ ಆಗ್ರಹಿಸಿದರು.

ಕಾರಿಗನೂರು, ತ್ಯಾವಣಿಗೆ, ಜಡಗನಹಳ್ಳಿ, ಮುಕ್ತನಹಳ್ಳಿ, ಸಂಕ್ಷೀಪುರ, ನಾಗರಸನಹಳ್ಳಿ, ಬಲ್ಲೂರು, ಶಿರಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಎಂ.ಬಿ. ಗುತ್ಯಪ್ಪ, ಗ್ರಾಮಗಳ ಬಸವರಾಜ, ಜಿ.ಪಿ.ಜಗದೀಶಪ್ಪ, ಆರ್‌. ಎಂ.ಹರೀಶ, ಟಿ.ಬಸಪ್ಪ, ಎ.ಎಚ್‌. ಚನ್ನಬಸಪ್ಪ, ಎಂ.ಟಿ. ಚಿಕ್ಕಪ್ಪ, ಎಂ.ಬಿ. ನಿಂಗಪ್ಪ, ರೇವಣಸಿದ್ದಪ್ಪ, ಕರಿಬಸಪ್ಪ, ಸುಭಾನ್ ಸಾಬ್, ಮಹಾಂತೇಶ, ಎಂ.ಜೆ. ರೇವಣಸಿದ್ದಪ್ಪ, ಎಂ.ಬಿ. ನಾಗರಾಜಪ್ಪ, ಎಂ.ಪಿ.ಸಿದ್ದಲಿಂಗಪ್ಪ, ಎಂ.ಟಿ. ಗುಡ್ಡಪ್ಪ, ಕುಮಾರಪ್ಪ, ಎಂ.ಪಿ. ಬಸವರಾಜ, ಎನ್. ಹನುಮಂತಪ್ಪ, ಎಂ.ಎಚ್. ನೀಲಗಿರಿಯಪ್ಪ, ಎಂ.ಎಸ್. ಗುದ್ದೇಶ, ಎಂ.ಎನ್‌. ಮಂಜು ಇತರ ರೈತರು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X