ದಾವಣಗೆರೆ | ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಬೇಕು

Date:

Advertisements

ಕರ್ನಾಟಕವನ್ನು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಉಳಿಸಿಕೊಳ್ಳಬೇಕಿದೆ ಎಂದು ಸೌಹಾರ್ದ ಕರ್ನಾಟಕ ವೇದಿಕೆ ಹೇಳಿದೆ.

ಗಾಂಧಿ ಹುತಾತ್ಮ ದಿನದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸೌಹಾರ್ದ ಕರ್ನಾಟಕ ವೇದಿಕೆಯಡಿ ಎಲ್ಲ ಪ್ರಗತಿಪರ, ಕನ್ನಡಪರ, ಜನಪರ, ಸಾಹಿತ್ಉಯ ಸಂಘಟನೆಗಳು ಸೌಹಾರ್ದ ಮಾನವ ಸರಪಳಿ ರಚಿಸಿ, ಸೌಹಾರ್ದ ಸಂದೇಶ ಸಾರಿವೆ.

“ಕಣ್ಣಿಗೆ ಕಣ್ಣು ಎಂಬ ನೀತಿಯು ಜಗತ್ತನ್ನೇ ಕುರುಡಾಗಿಸುತ್ತದೆ ಎಂದು ಗಾಂಧೀಜಿಯವರು ಹೇಳಿದ್ದರು. ನಮ್ಮ ದೇಶ ಸೌಹಾರ್ದ ಪರಂಪರೆಗೆ ಹೆಸರಾಗಿದೆ. ಬಸವಣ್ಣನವರು ‘ಇವನಾರವ ಎನ್ನದೆ ಎಲ್ಲರನ್ನು ಇವ ನಮ್ಮವರೆಂದು’ ಅಪ್ಪಿಕೊಳ್ಳುವ ತತ್ವ ಸಾರಿದ್ದಾರೆ. ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ದೇವರನ್ನು ಹುಡುಕುವುದಕ್ಕಿಂತ ಮಾನವರಲ್ಲಿರುವ ಪ್ರೀತಿ, ಸ್ನೇಹಗಳನ್ನು ಗುರುತಿಸಿ ಎಂದು ಹೇಳುತ್ತಾರೆ. ನಮ್ಮ ನಾಡು ಸಾಧು, ಸೂಫಿ ಸಂತರ, ಶರಣರು ಸೌಹಾರ್ದತೆಯ ಸಿದ್ಧಾಂತವನ್ನು ದೇಶಕ್ಕೆ ಸಾರಿದ್ದಾರೆ” ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ

Advertisements

“ನಾವು ಧರ್ಮಗಳಿಗೂ ಸಮದೃಷ್ಟಿಯಿಂದ ಕಾಣುವ ಪರಧರ್ಮಗಳ ಬಗ್ಗೆ ಗೌರವ ನೀಡಬೆಕು. ದೇಶದ ಏಕತೆ, ಸಮಾನತೆ, ಸಹೋದರತೆ, ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಎಲ್ಲ ಧರ್ಮೀಯರು ಒಟ್ಟಾಗಿ ಶ್ರಮಿಸಬೇಕಿದೆ” ಎಂದರು.

ಕಾರ್ಯಕ್ರಮದಲ್ಲಿ ಜೆ. ಕಲೀಂಬಾಷ, ನಿಜಗುಣ ಹವಳಪ್ಪ, ಕೊಟ್ರಪ್ಪ ಹೆಚ್.ಕೆ. ಪಿ.ಜೆ.ಮಹಾಂತೇಶ, ಗೋವಿಂದರೆಡ್ಡಿ ನಂದಿಗಾವಿ , ಪ್ರೀತಂ ಬಾಬು, ರಮೇಶ ಮಾನೆ, ಸೈಯದ್ ರಹಮಾನ್ ಬಾಂಬೆ, ಇಲಿಯಾಜ್ ಅಹಮ್ಮದ್, ಬಿ.ಮಗ್ಗುಂ, ಸೈಯದ್ ಅಹಮ್ಮದ್, ಎಲ್. ಬಿ. ಹನುಮಂತಪ್ಪ, ಆಬೀದ್ ಅಲಿ, ಸಿ.ಎನ್. ಹುಲಿಗೇಶ್, ಸುಬ್ರಮಣ್ಯ ನಾಡಿಗೇರ್, ಅನ್ವ‌ರ್ ಪಾಷಾ, ಅಜೀಜುರ್ ರಹ್ಯಾನ್, ರೇವಣಸಿದ್ದಪ್ಪ, ನಾಗರಾಜ ಮೆಹಲ್ವಾಡ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X