ಮಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮೃತದೇಹವೊಂದು ಕೊಳೆತುಹೋಗಿತ್ತು. ಪ್ರಕರಣದಲ್ಲಿ ಮೃತರ ಸಂಬಂಧಕರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆಸ್ಪತ್ರೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
2019ರ ಅಕ್ಟೋಬರ್ 25ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವಿಲ್ಸನ್ ಅಲನ್ ಫೆರ್ನಾಂಡಿಸ್ ಎಂಬವರು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಶವಾಗಾರದಲ್ಲಿ ಇರಿಸುವುದಕ್ಕಾಗಿಯೂ 2,250 ರೂ. ಹಣವನ್ನು ಆಸ್ಪತ್ರೆ ಪಡೆದುಕೊಂಡಿತ್ತು. ಆದರೆ, ರೆಫ್ರಿಜಿರೇಟರ್ ಹಾಳಾಗಿದೆ, ಮೃತದೇಹವನ್ನು ತೆಗೆದುಕೊಂಡು ಹೋಗಿ ಎಂದು ಅದೇ ಅಕ್ಟೋಬರ್ 27ರಂದು ಆಸ್ಪತ್ರೆಯವರು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ವೇಳೆಗಾಗಲೇ ಮೃತದೇಹ ಸಂಪೂರ್ಣವಾಗಿ ಕೊಳೆತಿತ್ತು ಎಂದು ವರದಿಯಾಗಿದೆ.
ಮೃತದೇಹ ಕೊಳೆತಿದ್ದರಿಂದ ಅಂತಿಕ ಗೌರವ ಸಲ್ಲಿಸಲು ಸಾಧ್ಯವಾಗದೆ ಕುಟುಂಬ ಮಾನಸಿತವಾಗಿ ನೊಂದಿತ್ತು. ಆಸ್ಪತ್ರೆಯ ವಿರುದ್ಧ ಪೊಲೀಸಸ್ ಠಾಣೆಯಲ್ಲಿ ಮೃತರ ಸಹೋದರ ನೆಲ್ಸರ್ ದೂರು ನೀಡಿದ್ದರು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತದೇಹ ಕೊಳೆತಿದೆ ಎಂದು ಆರೋಪಿಸಿದ್ದರು. ಆದರೆ, ದೂರಿಗೆ ಪ್ರತಿಕ್ರಿಯಿಸಿದ್ದ ಆಸ್ಪತ್ರೆ, “ಆಸ್ಪತ್ರೆಯಿಂದ ಸೂಚನೆ ನೀಡಿದ ತಕ್ಷಣ ಮೃತದೇಹ ತೆಗೆದುಕೊಂಡು ಹೋಗಿದ್ದರೆ ಕೊಳೆಯುತ್ತಿರಲಿಲ್ಲ” ಎಂದು ಉತ್ತರಿಸಿತ್ತು.
ಆಸ್ಪತ್ರೆಯ ಬೇಜವಾಬ್ದಾರಿ ಹೇಳಿಕೆಯಿಂದ ಸಿಟ್ಟಾದ ಕುಟುಂಬವು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿಸಿರವು ಆಯೋಗವು ಆಸ್ಪತ್ರೆಗೆ 5 ಲಕ್ಷ ರೂ. ದಂಡ ವಿಧಿಸಿದ್ದು, ಅದನ್ನು ಮೃತರ ಕುಟುಂಬಕ್ಕೆ ನೀಡಬೇಕೆಂದು ಆದೇಶಿಸಿದೆ.
ಒಂದು ತಿಂಗಳೊಳಗೆ ಪರಿಹಾರದ ಹಣವನ್ನು ಪಾವತಿಸದಿದ್ದಾರೆ, ಆ ಮೋತ್ತಕ್ಕೆ ಶೇ.8ರಷ್ಟು ಬಡ್ಡಿದರದಲ್ಲಿ ಬಡ್ಡಿಹಣವನ್ನೂ ಸೇರಿಸಿ ನೀಡಬೇಕೆಂದು ಸೂಚನೆ ನೀಡಿದೆ.