ಬೆಳಗಾವಿ ಜಿಲ್ಲೆಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮದೇಯ ವ್ಯಕ್ತಿ ಕೊಲೆ ಬೆದರಿಕೆ ಹಾಕಿರುವುದನ್ನು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ, ಲಿಂಗಾಯತ ಮಠಾಧಿಪತಿ ಒಕ್ಕೂಟ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಖಂಡಿಸಿದ್ದಾರೆ.
ನಿಜಗುಣಾನಂದ ಸ್ವಾಮಿಗಳಿಗೆ ಬೆಂಬಲ ನೀಡಿ ಪತ್ರ ಬರೆದಿರುವ ಅವರು, “ನಿಜಗುಣಾನ೦ದ ಸ್ವಾಮಿಗಳು ನಮ್ಮ ನಾಡಿನ ಪ್ರಗತಿಪರ ಚಿ೦ತನೆಯ ಧ್ವನಿಯಾಗಿದ್ದಾರೆ. ಬಸವಾದಿ ಶರಣರ ಹಾಗೂ ಬುದ್ಧ, ಘುಲೆ, ಅ೦ಬೇಡ್ಡರ್ ಅವರ ಚಿ೦ತನೆಗಳನ್ನು ನಿರ್ಭಿಡೆಯಿ೦ದ ಜನ-ಮನದಲ್ಲಿ ಬಿತ್ತುತ್ತ ವೈಚಾರಿಕ ಪ್ರಜ್ಞೆ ಬೆಳೆಸುತ್ತಿದ್ದಾರೆ. ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ” ಎಂದು ಹೇಳಿದ್ದಾರೆ.
“ಅವರ ಪ್ರಗತಿಪರ ಚಿಂತನೆಗಳಗೆ ವಿರುದ್ಧವಾಗಿರುವ ಪಟ್ಟಭದ್ರರು ಇದನ್ನು ವಿರೋಧಿಸುವುದಕ್ಕಾಗಿ ಸ್ವಾಮೀಜಿಯವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ. ಇ೦ತಹ ಕೃತ್ಯಗಳಿಗೆ ಶರಣರ ವಾರಸುದಾರರು ಎ೦ದಿಗೂ ಅಂಜುವುದಿಲ್ಲ. ಪಟ್ಟಭದ್ರರು ಬೆದರಿಸುವ ಮೂಲಕ ಪ್ರಗತಿಪರ ಚಿ೦ತನೆಗಳನ್ನು ಅಡಗಿಸಬೇಕೆಂದು ಇ೦ತಹ ಹುನ್ನಾರು ಮಾಡುತ್ತಲೇ ಇರುತ್ತಾರೆ. ಅದಕ್ಕೆ ನಿಜಗುಣಾನ೦ದ ಸ್ವಾಮಿಗಳು ಹೆದರಬೇಕಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.
“ನಿಜಗುಣಾನಂದರ ಜೊತೆ ನಾಡಿನ ಬಸವಪರ ಚಿ೦ತನೆಯ ಅನೇಕ ಸಂಘಟನೆಗಳು ಇವೆ. ಪೂಜ್ಯರಿಗೆ ಬೆದರಿಕೆ ಹಾಕುತ್ತಿರುವುದು ಯಾರೆ೦ದು ಸರ್ಕಾರ ಶೀಘ್ರದಲ್ಲೇ ಪತ್ತೆ ಹಚ್ಚಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಜೊತೆಗೆ ನಾಡಿನ ಪ್ರಜ್ಞಾವಂತ ಸಮಾಜ ಸ್ವಾಮೀಜಿಯವರ ಚಿ೦ತನೆಗಳಿಗೆ ಬೆಂಬಲ ನೀಡಬೇಕೆಂದು ಆಶಿಸುತ್ತೇವೆ” ಎಂದು ಅವರು ಹೇಳಿದ್ದಾರೆ.