ಮಾವಿನ ಹಣ್ಣಿಗೆ ಬಂಪರ್ ಬೆಲೆ ಇದ್ದರೂ ಮಳೆ ಗಾಳಿಯ ಆತಂಕದಲ್ಲಿ ರೈತರು!

Date:

Advertisements

ಈ ವರ್ಷದ ಮಾವಿನ ಹಣ್ಣಿನ ಸೀಜ಼ನ್ ಶುರುವಾಗಿದ್ದು, ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿವೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಬೆಲೆ ಇದ್ದರೂ ಕೂಡ ಮಳೆ ಗಾಳಿಯಿಂದಾಗಿ ಮಾವಿನ ಹಣ್ಣಿನ ಹೂವುಗಳು ಉದುರುತ್ತವೆಂಬ ಆತಂಕದಲ್ಲಿ ರೈತರು ಕೊರಗುವಂತಾಗಿದೆ.

ವಾರಗಳ ಹಿಂದೆ ಸುರಿದ ಮಳೆ ಗಾಳಿಯಿಂದ ಮಾವಿನ ಹೂವುಗಳು ಉದುರಿವೆ. ಇದರಿಂದ ಸ್ವಲ್ಪಮಟ್ಟಿಗೆ ಹಣ್ಣಿನ ಇಳುವರಿ ಕಡಿಮೆಯಾಗಿದೆ.

ರಾಮದುರ್ಗ ತಾಲೂಕಿನ ಹಣ್ಣು ಬೆಳೆಗಾರ ಫಕೀರಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈ ವರ್ಷ ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ. ನಾವು ಒಂದು ಎಕರೆಯಲ್ಲಿ ಮಾವಿನ ಹಣ್ಣಿನ ಮರಗಳನ್ನು ಬೆಳೆಸಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ. ಆದರೆ ವಾರದ ಹಿಂದಿನ ಮಳೆ ಗಾಳಿಯಿಂದ ಹೂವುಗಳು ಉದುರಿದ್ದರಿಂದ ಸ್ವಲ್ಪಮಟ್ಟಿಗೆ ಹಾನಿಯಾಗಿದೆ” ಎಂದು ತಿಳಿಸಿದರು.

Advertisements

ಅಥಣಿ ತಾಲೂಕಿನ ಕುಲಹಳ್ಳಿ ಗ್ರಾಮದ ಮಾವಿನ ಬೆಳೆಗಾರ ಅಡಿವೆಪ್ಪ ಮಾತನಾಡಿ, “ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಾವಿನ ಹಣ್ಣುಗಳು ಅವುಗಳ ತಳಿಗಳ ಮೇಲೆ ಅವುಗಳ ಬೆಲೆ ನಿಗದಿಯಾಗುತ್ತದೆ. ಕೆಲವು ಹಣ್ಣುಗಳಿಗೆ ಒಂದು ಕೆಜಿಗೆ ₹80 ರಿಂದ ₹100 ಇದ್ದರೆ, ಇನ್ನೂ ಕೆಲವು ಹಣ್ಣುಗಳಿಗೆ ₹150ರಿಂದ ₹180ರವರೆಗೆ ಬೆಲೆ ಇದೆ. ಅಪೂಸ್ ಮಾವಿನ ಹಣ್ಣಿಗೆ ₹250ರಿಂದ ₹300ರವರೆಗೆ ಬೆಲೆಯಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು; ಸಿಂಧಗಿಯ 26 ಗ್ರಾಮಗಳಿಗೆ ಅನುಕೂಲ

ಮಾವಿನ ಹಣ್ಣಿನ ಮಾರಾಟಗಾರ ಅನಿಲ ಮಾತನಾಡಿ, “ರೈತರು ಬೆಳೆದ ಮಾವಿನ ಹಣ್ಣುಗಳ ಸಾಗಾಟವು ಸ್ವಲ್ಪ ಕಷ್ಟವಿದೆ ಮತ್ತು ಮಾವಿನ ಹಣ್ಣಿಗೆ ಬೇಡಿಕೆಯೂ ಇದೆ. ಕೆಲವು ಸಾರಿ ಮಾವಿನ ಹಣ್ಣುಗಳ ಮಾರಟವಾಗಿದ್ದಿದ್ದರೆ ಹಾನಿಯಾಗುತ್ತವೆ. ಉತ್ತಮ ಬೇಡಿಕೆ ಇರುವುದರಿಂದ ಆತಂಕವಿಲ್ಲ” ಎಂದು ತಿಳಿಸಿದರು

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X