ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಶರಣರ ಹೆಸರಿಡುವಂತೆ ಆಗ್ರಹಿಸಿ ಶ್ರೀ ಮಡಿವಾಳ ಮಾಚಿದೇವ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣೆಗೆ ನಡೆಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ದಸಂಸ ಮುಖಂಡರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “12 ನೇ ಶತಮಾನದ ಶರಣರ ಅಗ್ರಗಣ್ಯ ಬಳಗದಲ್ಲಿ ಶರಣ ಮಡಿವಾಳ ಮಾಚಿದೇವರ ಹೆಸರು ಪ್ರಕಾಶ ಮಾನವಾಗಿ ಕಂಗೊಳಿಸುತ್ತದೆ. ಬಸವಣ್ಣನವರ ವೈಚಾರಿಕ ಪ್ರಜ್ಞೆಗೆ ಮಾರು ಹೋಗಿ ಕಾಯಕ ಸಿದ್ಧಾಂತದ ಮೌಲ್ಯವನ್ನು ಹೆಚ್ಚಿಸಿದರು” ಎಂದು ಸ್ಮರಿಸಿದರು

“ಶರಣ ಮಡಿವಾಳ ಮಾಚಯ್ಯನವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಮೂಲಕ ಸಮಾಜದ ಒಟ್ಟು ಮೈಲಿಗೆಯನ್ನು ತೊಡೆದು ಹಾಕಿದ ದಿಟ್ಟ ವಚನಕಾರ ‘ವೀರಗಣಾಚಾರಿಯಾಗಿ’ ಕಲ್ಯಾಣ ಕ್ರಾಂತಿಯಲ್ಲಿ ಜೀವನವನ್ನೇ ಪಣಕ್ಕಿಟ್ಟು ವಚನ ಸಾಹಿತ್ಯವನ್ನು ಸಂರಕ್ಷಿಸಿದ ಮಾಚಿದೇವರ ಕೊಡುಗೆ ಅನುಪಮ ಹಾಗೂ ಚಿರಸ್ಮರಣೀಯವಾದುದು. ಹಾಗಾಗಿ ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ “ಶ್ರೀಮಡಿವಾಳ ಮಾಚಿದೇವ” ವೃತ್ತ ಎಂದು ನಾಮಕರಣ ಮಾಡಬೇಕು” ಎಂದು ಒತ್ತಾಯಿಸಿದರ
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಪೀಠಗಳು, ವಿರಕ್ತರು,ಶರಣರು ಒಗ್ಗೂಡಿದರೆ ವೀರಶೈವ ಲಿಂಗಾಯತ ಸಮಾಜ ಸದೃಢವಾಗಲಿದೆ; ಪಂಚಾಚಾರ್ಯರು
ಮನವಿ ಸಲ್ಲಿಸುವ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, ಮಡಿವಾಳ ಮಾಚಿದೇವ ಸಮಿತಿ ಅಧ್ಯಕ್ಷ ರಾಮಪ್ಪ, ಲೋಕೇಶಪ್ಪ, ನಿಂಗಪ್ಪ ಎಂ.ಎನ್, ಮಾರುತಿ, ಮಂಜುನಾಥ, ಮಲ್ಲಪ್ಪ, ಹನುಮಂತಪ್ಪ, ಕೆಂಚಪ್ಪ, ಆನಂದಪ್ಪ, ಪ್ರಕಾಶ್, ಅಜ್ಜಯ್ಯ, ದಿವಾಕರ, ದಿಲೀಪ್, ವಾಸು, ಗುಡ್ಡಪ್ಪ, ಕೆಂಚಪ್ಪ ಸೇರಿದಂತೆ ಇತರರು ಹಾಜರಿದ್ದರು.
ಬೂಡಾಲು ರಸ್ತೆಯ ರಿಂಗ್ ರೋಡ್ ಗೆ ಹೆಸರು ಸೂಕ್ತ