ವೀರಶೈವ – ಲಿಂಗಾಯತ ಸಮುದಾಯ ಒಗ್ಗೂಡಿಸುವುದು ನಮ್ಮ ಗುರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Date:

Advertisements

ಒಳಪಂಗಡಗಳು ಒಂದಾಗ ಬೇಕು. ಎಲ್ಲಿಯವರೆಗೆ ಒಳಪಂಡಗದಲ್ಲಿ ರಕ್ತ ಸಂಬಂಧ ಬೆಳೆಸುವುದಿಲ್ಲವೋ, ಅಲ್ಲಿಯವರೆಗೆ ಒಂದಾಗಲು ಸಾಧ್ಯವಿಲ್ಲ. ಒಳಪಂಗಡಗಳಲ್ಲಿ ಸಂಬಂಧ ಬೆಳೆಸಿದಾಗ ಸಮಾಜ ಬಲಿಷ್ಠವಾಗಲು ಸಾಧ್ಯ. ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವುದು ನಮ್ಮ ಗುರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಅವರು ಮಾತನಾಡಿದರು. “ವೀರಶೈವ ಲಿಂಗಾಯತ ಸಮಾಜ ಕರ್ನಾಟಕದಲ್ಲಿ ಬಲಿಷ್ಟವಾಗಿದೆ. ಮಾತ್ರವಲ್ಲ ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಲಿಂಗಾಯತರಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಜನ ಒಳ ಪಂಗಡಗಳಲ್ಲಿ ವಿವಾಹ ಸಂಬಂಧ ಬೆಸೆಯಬೇಕು. ಆಗ ಮಾತ್ರ ಸಮುದಾಯ ಸಂಘಟನೆ ಸಾಧ್ಯ” ಎಂದರು.

“ವೀರಶೈವ ಲಿಂಗಾಯಿತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಈ ಬಗ್ಗೆ ಒಂದು ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕು. ಎಲ್ಲ ಪಂಗಡಗಳು ಸೇರಬೇಕು” ಎಂದರು.

Advertisements

“ದೇಶದಲ್ಲಿ ಜಾತಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಯುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಜನ ಸಂಖ್ಯೆ ಎಷ್ಟು ಇದೆ. ಶೈಕ್ಷಣಿಕ ಪ್ರಗತಿ ಎಷ್ಟಿದೆ ಸಾಮಾಜಿಕ ಸ್ಥಿತಿ ಹೇಗಿದೆ. ಇದರ ಬಗ್ಗೆ ಅಧ್ಯಯನ ಬೇಕಿದೆ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಬೇಕಿದೆ. ಬಸವಣ್ಣನವರು ನೀಡಿದ ಸಂದೇಶವನ್ನು ನಾವೆಲ್ಲರೂ ಪಾಲನೆ ಮಾಡೋಣ” ಎಂದು ಕರೆ ಕೊಟ್ಟರು.

ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, “ಅಖಿಲ ಭಾರತ ವೀರಶೈವ ಮಹಾಸಭಾ ರಚಿಸಿ, ಎಲ್ಲ ವೀರಶೈವರನ್ನು ಒಂದೆಡೆ ಮಾಡಿದ ಮಹಾನ್ ವ್ಯಕ್ತಿ ಹಾನಗಲ್ ಕುಮಾರಸ್ವಾಮಿಗಳು. ಈ ಸಮಾಜಕ್ಕೆ ದಿಕ್ಕೂಚಿ ಕೊಡಬೇಕಾಗಿಲ್ಲ. ಎಲ್ಲರಿಗೂ ಕೂಡ ಅದರ ಅರಿವಿದೆ. ಆದರೆ, ಆಚರಣೆ ಇಲ್ಲ. ಆಚರಣೆಗೆ ಬಾರದ ಕಾರಣ ಸಮಾಜ ದುರ್ಬಲವಾಗಿದೆ” ಎಂದು ತಿಳಿಸಿದರು.

“ಸರ್ವಜ್ಞನ ಪ್ರಕಾರ ಸಮಾಜದಲ್ಲಿ 3 ಜನ ಶತ್ರುಗಳಿದ್ದಾರೆ – ಬುದ್ದಿ ಕಲಿಸದ ತಂದೆ, ತಿದ್ದಿ ಕಲಿಸದ ಗುರು, ಬಿದ್ದರೂ ಎತ್ತದ ತಾಯಿ – ಈ ಮೂವರು ಸಮಾಜದ ಪಾಲಿಗೆ ಶತ್ರುಗಳು. ಸಮಾಜ ದಿಕ್ಕುತಪ್ಪಿ ಹೋಗುವಾಗ ಸಮಾಜಕ್ಕೆ ಬುದ್ದಿ ಹೇಳದ ಮಠಾಧಿಪತಿಗಳು ಸಹ ಶತ್ರುಗಳೇ, ಸಮಾಜದಲ್ಲಿ ಏನಾದರೂ ನೇರವಾಗಿ ಹೇಳಿದರೆ ತಿಳಿದುಕೊಳ್ಳುವುದಿಲ್ಲ. ಮುಚ್ಚಿ ಹೇಳಿದರೆ ಅರ್ಥ ಆಗುವುದಿಲ್ಲ. ನೇರವಾದ ಮಾತುಗಳನ್ನು ಮಠಾಧೀಪತಿಗಳೇ ಹೇಳ ಬೇಕು. ಇಲ್ಲವಾದಲ್ಲಿ ಸಮಾಜ ದಾರಿ ತಪ್ಪಿ ಹೋಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ?: ಮೋದಿ- ಅಮಿತ್‌ ಶಾ ಲೂಟಿ ಮಾಡುವ ಜೋಡೆತ್ತುಗಳು: ಮುಖ್ಯಮಂತ್ರಿ ಚಂದ್ರು

“ಹಾನಗಲ್ಲ ಕುಮಾರಸ್ವಾಮಿಗಳನ್ನು ನಾವು ಮಾದರಿಯನ್ನಾಗಿ ಇಟ್ಟುಕೊಂಡರೆ ನಾವು ಸಮಾಜ ಕಟ್ಟುವುದು ಹೇಗೆಂದು ತಿಳಿದುಕೊಳ್ಳಬಹುದು. ಅವರು ಮಠಮುಖಿ ಸ್ವಾಮಿಗಳಾಗಲಿಲ್ಲ. ಸಮಾಜಮುಖಿ ಸ್ವಾಮಿಗಳಾದರು. ಇನ್ನೂ ನಾವುಗಳು ಮಠಮುಖಿ ಸ್ವಾಮಿಗಳಾಗಿದ್ದು, ಸಮಾಜ ಮುಖಿ ಸ್ವಾಮಿಗಳಾಗಬೇಕು. ಸಮಾಜ ಬೆಳೆಸುವ ಉದ್ದೇಶದಿಂದ ನಾವು ಮುಂದೆ ಬರಬೇಕು. ಇನ್ನು ರಾಜಕೀಯ ನಾಯಕರು ಸಮಾಜಮುಖಿ ಆಗದೇ ಪಕ್ಷಮುಖಿ ಆಗಿದ್ದಾರೆ. ಅವರಿಗೆ ಸಮಾಜ ಬೇಕಾಗಿಲ್ಲ. ಪಕ್ಷ ಮುಖಿ ಆಗಿದ್ದಾರೆ. ಪಕ್ಷದ ಮೇಲೆ ಇರುವ ಅಭಿಮಾನ ಶೇ.50ರಷ್ಟು ಸಮಾಜದ ಮೇಲೆ ಇದ್ದಿದ್ದರೆ ಇಂದಿನ ಮೈದಾನ ತುಂಬಿ ತುಳುಕುತ್ತಿತ್ತು. 75 ಜನ ಲಿಂಗಾಯುತ ಶಾಸಕರಿದ್ದರೂ ಈ ಮೈದಾನ ತುಂಬಿಲ್ಲ ಇದು ನಮ್ಮ ಸಮಾಜಕ್ಕೆ ಆಗಬೇಕಾದ ಅವಮಾನ” ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಹಲವು ಶಾಸಕರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X