ಧರ್ಮಸ್ಥಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೊದಲ ಬಾರಿಗೆ ದೂರುದಾರ ಗುರುತಿಸಿದ್ದ 13 ಸ್ಥಳಗಳ ಪೈಕಿ 12ರಲ್ಲಿ ಶೋಧ ನಡೆದಿತ್ತು. ಆದರೆ 13ನೇ ಸ್ಥಳ ಶೋಧ ಮಾಡಿರಲಿಲ್ಲ. ಇಂದಿನಿಂದ 13ನೇ ಪಾಯಿಂಟ್ನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇಂದು ಬೆಳಿಗ್ಗೆ 11:30 ಆಸುಪಾಸಿನಿಂದ 13ನೇ ಪಾಯಿಂಟ್ನಲ್ಲಿ ಶೋಧ ಆರಂಭವಾಗಿದೆ. ಜಿಆರ್ಪಿ ಕಾರ್ಯಾಚರಣೆ ನಡೆಯುತ್ತಿದೆ. ಹಾಗೆಯೇ 13ನೇ ಪಾಯಿಂಟ್ ಪಕ್ಕದಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು
ಈವರೆಗೆ ಎರಡು ಸ್ಥಳಗಳಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಪಾಯಿಂಟ್ ನಂಬರ್ ಆರು ಮತ್ತು ಪಾಯಿಂಟ್ ನಂಬರ್ 11ರ ಸಮೀಪದಲ್ಲಿ ಹಲವು ವರ್ಷಗಳು ಹಳೆಯ ಅವಶೇಷ ಪತ್ತೆಯಾಗಿದೆ. 13ನೇ ಸ್ಥಳದಲ್ಲಿ ಹಲವು ಶವಗಳನ್ನು ಅಕ್ರಮವಾಗಿ ಹೂತಿರುವುದಾಗಿ ದೂರುದಾರ ಹೇಳಿದ್ದಾನೆ ಎನ್ನಲಾಗಿದೆ. ಆದ್ದರಿಂದ ಈ ಸ್ಥಳದಲ್ಲಿ ಶೋಧವು ಹೆಚ್ಚು ಗಮನ ಸೆಳೆದಿದೆ.
