ಧಾರವಾಡ | ಬಸವಣ್ಣ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಹೋರಾಡಿದ ಏಕೈಕ ಮಹಾಪುರುಷ: ರಂಜಾನ್ ದರ್ಗಾ

Date:

Advertisements

ಬುದ್ಧನ ಕಾಲಕ್ಕೆ ವರ್ಣಾಶ್ರಮ ವ್ಯವಸ್ಥೆಯನ್ನು ಅಲ್ಲಗಳೆಯುವುದೇ ದೊಡ್ಡ ಕ್ರಾಂತಿಯಾಗಿತ್ತು. ಅಂತಹ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಹೋರಾಡಿದ ಏಕೈಕ ಮಹಾಪುರುಷ ಬಸವಣ್ಣ ಎಂದು ಶರಣ ಸಾಹಿತಿ, ಚಿಂತಕ ರಂಜಾನ್ ದರ್ಗಾ ಹೇಳಿದರು.

ಧಾರವಾಡದಲ್ಲಿ ನಡೆದ ‘ಕಾಯಕ ಮತ್ತು ದಾಸೋಹ: ಸಾಮಾಜಿಕ‌ ನ್ಯಾಯದ ಶ್ರೇಷ್ಠ ಪರಿಕಲ್ಪನೆ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಜೈನ, ಬೌದ್ಧ, ಲಿಂಗಾಯತ ಮತ್ತು ಸಿಖ್ ಧರ್ಮಗಳು ಈ ದೇಶದಲ್ಲಿ ಜನ್ಮತಾಳಿದವು. ಈ ನಾಲ್ಕೂ ಧರ್ಮಗಳು ಅವೈದಿಕವಾಗಿವೆ. ಚಾತುರ್ವರ್ಣ, ಅಸ್ಪೃಶ್ಯತೆ, ಜಾತಿಯತೆಯನ್ನು ವಿರೋಧ ಮಾಡುವ ಹೋರಾಟಗಳಿಗೆ ಈ ದೇಶದಲ್ಲಿ 3 ಸಾವಿರ ವರ್ಷದ ಇತಿಹಾಸವಿದೆ. ಆದರೆ; ಯಾರೂ ಯಾಕೆ ಬದಲಾಗಿಲ್ಲ ಎನ್ನುವುದೇ ದೊಡ್ಡ ಪ್ರಶ್ನಯಾಗಿದೆ” ಎಂದರು.

“ಅವೈದಿಕತೆಯಲ್ಲಿ ಜಾತಿಯತೆ, ಅಸ್ಪೃಶ್ಯತೆ, ಹೆಣ್ಣು ಗಂಡಿನ ಭೇದವಿಲ್ಲ. ಇಂತಹ ಸಂವಿಧಾನ ನಮಗೆ ಸಿಗಬೇಕಾದರೆ 3 ಸಾವಿರ ವರ್ಷಗಳ ಮಾನವ ಕುಲದ ಶ್ರಮವಿದೆ ಎನ್ನುವುದನ್ನು ನಾವು ಮರೆಯಬಾರದು. ಬಸವಣ್ಣನವರ ಧರ್ಮ ಸರಳ ಮತ್ತು ವೈಜ್ಞಾನಿಕವಾಗಿದೆ. ಮನಸ್ಸಿನ ಶುದ್ಧೀಕರಣ, ಮನಸ್ಸಿನ ವಿಕಸನ ಮತ್ತು ಮನಸ್ಸಿನ ಪ್ರಾಯೋಗಿಕ ಚಿಂತನೆಯುಳ್ಳ ಮೂರು ವಿಧದ ಅಂಶಗಳುಳ್ಳ ಧರ್ಮವಾಗಿದೆ. ಇಡೀ ಬಸವಧರ್ಮ ರೈತಾಪಿ ಸಂಸ್ಕೃತಿಯ ಮೇಲೆ ನಿಂತಿದೆ. ಅಷ್ಟಾವರಣಗಳು ನಮ್ಮ ಮನಸ್ಸು ಐಹಿಕ ಆಸೆಗಳಿಗೆ ಒಳಗಾಗದಂತೆ ತಡೆಯುತ್ತವೆ. ಇದಕ್ಕೆ ರೈತರು ಬೀಜೋಪಚಾರ ಅನ್ನುತ್ತಾರೆ. ಷಟ್‌ಸ್ಥಲಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ. ಕಾಯಕವು ಬಸವಧರ್ಮದ ತಳಪಾಯವಾಗಿದೆ. ಬಸವಣ್ಣನವರ ಧರ್ಮವು ನಿಸರ್ಗದ ಧರ್ಮವಾಗಿದೆ. ಕಾಯಕವು ಸೃಷ್ಟಿಗೆ ಪೂರಕವಾಗಿರಬೇಕು” ಎಂದರು.

Advertisements

ಲೇಖಕಿ ವಿನಯಾ ವಕ್ಕುಂದ ಮಾತನಾಡಿ, “ವಚನ ಚಳವಳಿಯು ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಅಳವಡಿಸಲು ಪ್ರಯತ್ನಿಸಿತು. ಒಂದು ಕಾಲದ ಸಮಸ್ಯೆಗಳಿಗೆ ಉತ್ತರ ಕೊಡುವ ಸಲುವಾಗಿ ಚಳವಳಿಗಳು ಜನ್ಮ ತಾಳುತ್ತವೆ. ಆ ನಿಟ್ಟಿನಲ್ಲಿ ಬಸವಣ್ಣ ವಚನ ಚಳವಳಿಯ ರೂವಾರಿಯಾಗಿ ನಿಲ್ಲುತ್ತಾರೆ. ವಚನ ಸಾಹಿತ್ಯವನ್ನು ಸಾಂಪ್ರದಾಯಿಕ ಓದು, ನಿರಾಕರಣೆ ಓದು ಮತ್ತು ವೈಚಾರಿಕ ಓದು ಎನ್ನುವ ಮೂರು ವಿಧದಲ್ಲಿ ಓದಲಾಗುತ್ತದೆ. ವಚನ ಮತ್ತು ವಚನಕಾರರನ್ನು ಧರ್ಮದ ಚೌಕಟ್ಟಿನಿಂದ ಇಚೇಗೆ ತಂದು ಇಂದಿನ ಅಗತ್ಯಗಳಿಗೆ ಅನುಸಂಧಾನಗೊಳಿಸುವ ಪರಿವರ್ತಿತ ನೆಲೆಯಾಗಿ ಗಮನಿಸಬೇಕಿದೆ” ಎಂದರು.

ಇದನ್ನೂ ಓದಿ: ಧಾರವಾಡ | ಭಾರಿ ಮಳೆಗೆ ಪ್ರವಾಹ ಸೃಷ್ಟಿ; ನಡುಗಡ್ಡೆಯ ಮನೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ

ಡಾ. ಅವಿನಾಶ ಕವಿ ಮಾತನಾಡಿ, “ಬಸವ ಕ್ರಾಂತಿಯು ಕನ್ನಡ ನಾಡಿನಲ್ಲಿ ಅಪೂರ್ವ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ನೈತಿಕ, ವೈಚಾರಿಕ, ಸಾಂಸ್ಕೃತಿಕ ಚಿಂತನೆಗಳ ಮೂಲಕ ಹೊಸ ಧರ್ಮ ಮತ್ತು ಹೊಸ ಸಾಹಿತ್ಯ ಪ್ರಕಾರದ ಮಹಾಮಾರ್ಗಕ್ಕೆ ನಾಂದಿ ಹಾಡಿತು. ಈ ಕ್ರಾಂತಿಯು ದುಡಿಯುವ ವರ್ಗದ ಕ್ರಾಂತಿಯಾಗಿ ಹೊರಹೊಮ್ಮಿದ್ದು ವಿಶೇಷವೆನಿಸುತ್ತದೆ. ಬಸವಾದಿ ಶರಣರು ಭಾರತೀಯ ದರ್ಶನಗಳಲ್ಲಿ ವಿನೂತನವಾದ ಸೈದ್ಧಾಂತಿಕ ದರ್ಶನ ನೀಡಿದವರು. ವ್ಯಕ್ತಿಯ ಶುದ್ಧೀಕರಣ, ಸಮಾಜದ ಸಬಲಿಕರಣ, ವ್ಯಕ್ತಿತ್ವದ ಉನ್ನತೀಕರಣ ಹಾಗೂ ಮಾನವತೆಯ ಏಕೀಕರಣ ಬಸವಾದಿ ಶರಣರ ಒಟ್ಟಾರೆ ಆಶಯವಾಗಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X