ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೊ ಅಥವಾ ಬಿಡಬೇಕೊ ಎನ್ನುವುದು ಅವರ ಪಕ್ಷದ ನಿರ್ಧಾರವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರ ಭೂ ಬಳಕೆ ಪ್ರಕರಣಕ್ಕೆ ಸಂಬಂಧಿಸಿದವರ ‘ದಾಖಲೆಗಳು ಮಾತನಾಡುತ್ತಿವೆ’ ಎಂಬ 32 ಪುಟಗಳ ಕಿರು ಹೊತ್ತಿಗೆಯನ್ನು ಧಾರವಾಡದಲ್ಲಿ ಬಿಡುಗಡೆ ಮಾಡಿ, ಮಾತನಾಡಿದರು.

“ಸಿಎಂ ರಾಜೀನಾಮೆ ವಿಚಾರ ಅವರ ಪಕ್ಷಕ್ಕೆ ಬಿಟ್ಟಿದ್ದು, ಸೈಟ್ ಸಿದ್ದರಾಮಯ್ಯನವರ ಹೆಸರಿನಲ್ಲಿ ಇರಲಿಲ್ಲ ಪತ್ನಿ ಹೆಸರಿನಲ್ಲಿದೆ ಎಂದು ಮೊದಲಿನಿಂದಲೂ ಸ್ವಚ್ಛವಾಗಿದ್ದೇನೆ ಎಂತಲೂ ಹೇಳುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಸೈಟ್ಗಳನ್ನು ವಾಪಸ್ ಕೊಡಬೇಕು. ಮುಡಾ ವಿಷಯದಲ್ಲಿ ಸಿಎಂ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರೇನು ಸಾಚಾನ?” ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, “ಇಲ್ಲಿ ಎಲ್ಲರೂ ನುಂಗಣ್ಣರೆ. ನಮ್ಮದು ನೀವು ತೆಗೆಯಬೇಡಿ ನಿಮ್ಮದು ನಾವು ತೆಗೆಯಲ್ಲ ಎಂಬ ರೀತಿಯ ಹೊಂದಾಣಿಕೆ ರಾಜಕಾರಣ ಇಲ್ಲಿದೆ, ಇದು ಬಹಳ ಅಪಾಯಕಾರಿ” ಎಂದರು.
ಈ ವೇಳೆ ಲಕ್ಷ್ಮಣ್ ಬಕ್ಕಾಯಿ, ಶಮೀಮ್ ಮುಲ್ಲಾ ಉಪಸ್ಥಿತರಿದ್ದರು.
