ಡಾ. ಬಾಬು ಜಗಜೀವನರಾಮ್ ಅವರು ರಾಷ್ಟ್ರದ ಪ್ರಗತಿಗೆ ಒತ್ತುಕೊಡುವ ಕೊಡುವ ಮೂಲಕ ಹಲವಾರು ಸಾಮಾಜಿಕ ಚಳುವಳಿಯನ್ನು ಕಟ್ಟಿ ಹೋರಾಡಿದವರು. ಅಷ್ಟೇ ಅಲ್ಲದೇ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದರಲ್ಲಿಯೂ ಕೂಡ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಪ್ರೊ. ಪ್ರಕಾಶ ಎಸ್. ಕಾಂಬ್ಳೆ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಕವಿವಿ ಧಾರವಾಡ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಮಾಲೆ, ಜ್ಞಾನ ಭಿತ್ತಿ -2 ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಅವರು ಆಧುನಿಕ ಭಾರತದ ಆರ್ಥಿಕ ಹಾಗೂ ಸಮಗ್ರ ಅಭಿರುದ್ಧಿಯಲ್ಲಿ ಡಾ. ಬಾಬುಜಗಜೀವನರಾಮ್ ಅವರ ಚಿಂತನೆ ಎಂಬ ವಿಷಯದ ಮೇಲೆ ಉನ್ಯಾಸ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಅರವಿಂದ ಕವಿವಿಯ ಪಾದ್ಯಾಪಕ ಎ. ಮೂಲಿಮನಿ ಅವರು, ಡಾ. ಬಾಬು ಜಗಜೀವನರಾಮ್ ಅವರು ದೇಶದ ಆರ್ಥಿಕ ಚಿಂತನೆಯ ಮೂಲಕ ಶೋಷಿತ ಸಮುದಾಯಗಳ ಬದುಕನ್ನು ಅವಲೋಕಿಸಿ ಎಲ್ಲಾ ಕ್ಷೇತ್ರದಲ್ಲಿಯೂ ಮೀಸಲಾತಿ ದೊರೆಯಬೇಕು ಅಂದಾಗ ಮಾತ್ರ ದೇಶವನ್ನು ಒಗ್ಗೂಡಿಸಲು ಸಾಧ್ಯ ಎಂದು ಚಿಂತನೆ ಮಾಡಿದವರೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಚ್. ಎಚ್. ಭರಡಿ ಅವರು ಎಲ್ಲಾ ಸಾಮಾಜಿಕ ಹೋರಾಟಗಾರರ ಚಳುವಳಿ ಮತ್ತು ಜೀವನ ಚರಿತೆಯೊಂದಿಗೆ ಡಾ. ಬಾಬು ಜಗಜೀವನರಾಮ್ ಅವರ ಬದುಕನ್ನೂ ಕೂಡ ತಿಳಿಯುವುದು ತುಂಬಾ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕರಾಗಿದ್ದ ಡಾ. ಬಾಬು ಜಗಜೀವನರಾಮ್ ಅಧ್ಯಯನ ವಿಭಾಗದ ಡಾ. ಶಿವಶರಣ ಸಿ. ಟಿ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಪಕ ಡಾ. ಎನ್. ಎಸ್. ಮುಗದುರ, ಡಾ. ಬಾಬು ಜಗಜೀವನರಾಮ್ ಅಧ್ಯಯನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಡಾ. ಜಯಶ್ರೀ ದೇಶಮಾನೆ ಹಾಗೂ ಸಮಾಜಸೇವಕರಾದ ಉಮಾ ಎಸ್. ಚೌಹಾಣ್ ಮತ್ತು ಕವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.