ಧಾರವಾಡ | ಕುಂದಗೋಳ ತಾಲೂಕಿನಲ್ಲಿ ಸಮಸ್ಯೆಗಳದ್ದೇ ಕಾರುಬಾರು; ಕ್ಯಾರೇ ಎನ್ನದ ಅಧಿಕಾರಿಗಳು!

Date:

Advertisements
  • ಅಭಿವೃದ್ಧಿ ಕಡೆಗೆ ಗಮನ ಹರಿಸದ ಅಧಿಕಾರಿಗಳ ಮೇಲೆ ಸ್ಥಳೀಯರ ಹಿಡಿಶಾಪ
  • ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೇ ಅಧಿಕಾರಿಗಳು?

ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದರೆ ಕುಂದಗೋಳ. ಈ ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳದ್ದೇ ದರ್ಬಾರು ಎಂದರೂ ತಪ್ಪಾಗಲಾರದು. ಅನ್ಯ ತಾಲೂಕುಗಳಿಗೆ ಹೋಲಿಸಿದರೆ ಕುಂದಗೋಳ ತಾಲೂಕಿನಲ್ಲಿ ಹಲವು ಸಮಸ್ಯೆಗಳು ಎದ್ದು ಕಾಣುತ್ತವೆ.

ತಾಲೂಕಿನ ದೇವನೂರು ಗ್ರಾಮ‌ ಪಂಚಾಯತಿ ವ್ಯಾಪ್ತಿಗೆ ಬರುವ ಬಿಳೆಬಾಳ, ತಾಲೂಕು‌ ಕೇಂದ್ರದಿಂದ 5 ಕಿ.ಮೀ ದೂರದಲ್ಲಿದೆ. 2011 ರ‌ ಜನಗಣತಿ ಪ್ರಕಾರ 1515 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಒಟ್ಟು 140ಕ್ಕೂ ಹೆಚ್ಚು ಮನೆಗಳಿದ್ದು, ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತಿದೆ. ಒಟ್ಟು 5 ಪಂಚಾಯತ್ ಸದಸ್ಯರ ಪೈಕಿ 4 ಜನ ಸದಸ್ಯರು ಬಿಳೆಬಾಳದವರೇ ಆಗಿದ್ದರೂ, ಬಿಳೆಬಾಳ ಗ್ರಾಮವು ಕೆಲವು ಸಮಸ್ಯೆಗಳ ಆಗರವಾಗಿದೆ.

ಗ್ರಾಮದ ಅಗಸಿ ಅಂಗಳದಲ್ಲಿ ಸಣ್ಣ ಕೊಳ್ಳವೊಂದು ಕಲುಷಿತ ನೀರಿನಿಂದ ಕೂಡಿಕೊಂಡಿದೆ. ಮತ್ತು ಹನುಮಂತ ದೇವರ ಗುಡಿ, ದುರ್ಗಮ್ಮ ಗುಡಿ, ಭರಮದೇವರ ಗುಡಿ ಹಾಗೂ ಮೆಹಬೂಬ ಸುಬುಹಾನಿ ದರ್ಗಾ ಆವರಿಸಿಕೊಂಡ ಪ್ರದೇಶದ ಮಧ್ಯದಲ್ಲಿ ಹಲವು ಓಣಿಗಳಿಂದ ಬರುವ ಕಲುಷಿತ ನೀರು ಒಂದೇ ಕಡೆಗೆ ಶೇಖರಣೆ ಆಗುತ್ತದೆ. ಅದರ ಸುತ್ತಮುತ್ತಲು ಹತ್ತಾರು ಕುಟುಂಬಗಳು ವಾಸಮಾಡುತ್ತವೆ. ಶೇಖರಣೆಯಾಗಿ ನಿಂತ ಕೊಳಚೆ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಜನ ರೋಗಾಣುಗಳಿಂದ‌ ಬಳಲುವ ದುಸ್ಥಿತಿ ಬಂದೊದಗಿದೆ.

Advertisements
WhatsApp Image 2024 08 10 at 4.13.13 PM

ಇಲ್ಲಿ ನಿಂತ ಕಲುಷಿತ ನೀರು ಮುಂದೆ ಊರು ದಾಟಲು ಅಡ್ಡವಾಗಿ ಹೊಲವೊಂದಿದೆ. ಆ ಹೊಲದ ಮಾಲೀಕರು ಈ ಗಲೀಜು ನೀರನ್ನು ತಡೆ ಹಿಡಿಯಲು ಅಡ್ಡವಾಗಿ ಒಡ್ಡನ್ನು ಹಾಕಿದ್ದಾರೆ. ಮತ್ತು ಇದೇ ಹೊಲದಲ್ಲಿ ಒಂದು ಅಂಗನವಾಡಿಯೂ ಇದ್ದು ಕಲುಷಿತ ನೀರು ನಿಂತ ಕಾರಣ ಮಕ್ಕಳನ್ನೂ ದಾಟಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಚಿಣ್ಣರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ದನ‌ ಮೇಯಿಸುವವರು, ವ್ಯವಸಾಯಕ್ಕೆ ಹೋಗುವವರು, ಸ್ಥಳಿಯ ನಿವಾಸಿಗಳು ಇದೇ ಗಲೀಜು‌ ನೀರಿನಲ್ಲೆ ಓಡಾಡುವ ಪರಿಸ್ಥಿತಿ ಬಂದಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಜೀವನ ಕಳೆಯುತ್ತಿದ್ದಾರೆ.

ದರ್ಗಾಕ್ಕೆ ಹೋಗುವ ಭಕ್ತರು ಇದೇ ಗಲೀಜಿನಲ್ಲೇ ಹೋಗಬೇಕು. ಹೆಣ್ಣು ಮಕ್ಕಳು, ವೃದ್ಧರು ಜೀವಹಿಡಿದು ಹೋಗುವ ವಾತಾವರಣ ಸೃಷ್ಟಿಯಾಗಿದೆ. ಹಲವು ಬಾರಿ ಪಿಡಿಓ, ಸಿಇಓ, ಶಾಸಕರು ಸ್ಥಳಿಕ್ಕೆ ಭೇಟಿ ಕೊಟ್ಟು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರಾದರೂ, ಈವರೆಗೆ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ಹಂಚಿಕೊಳ್ಳುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ನಾವೂ ಮನುಷ್ಯರಲ್ಲವೆ? ಹೀಗೆ ಗಲೀಜು ನೀರಿನ ನಡುವೆ ಬದುಕಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.

WhatsApp Image 2024 08 10 at 4.13.12 PM

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ್ ಮಾತನಾಡಿ, “ಈ ಸಮಸ್ಯೆಯ ಕುರಿತು ಈಗಾಗಲೆ ನನ್ನ ಗಮನಕ್ಕೆ ಬಂದಿದೆ ಮತ್ತು ಈ ಸಮಸ್ಯೆ ಬಗೆಹರಿಸಲು ಈಗಾಗಲೆ 36 ಲಕ್ಷದ ಯೋಜನೆಯ ಹಾಕಲಾಗಿದೆ. ಆದಷ್ಟು ಬೇಗ ಬಗೆಹರಿಸುತ್ತೇವೆ” ಎಂದರು.

ಗ್ರಾಪಂ ಅಧ್ಯಕ್ಷ ಈರಪ್ಪ ಸನದಿ, “ಈಗಾಗಲೆ ಜನಸಂಪರ್ಕ ಸಭೆಯಲ್ಲಿಯೂ ಮನವಿ‌ ಸಲ್ಲಿಸಲಾಗಿದೆ ಮತ್ತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ” ಎಂದಿದ್ದಾರೆ. ಬಾಬುಸಾಬ ಕಿಲ್ಲೆದಾರ್, ಇಸ್ಮಾಯಿಲ್ ಸಾಬ ಕಿಲ್ಲೆದಾರ್, ಶಂಕರ ಚಲವಾದಿ ಇನ್ನಿತರರು ಮಾತನಾಡಿ ಮಾಹಿತಿ ಮತ್ತು ಸಮಸ್ಯೆ ಹೇಳಿಕೊಂಡರು.

ಕಳೆದ ಎರಡು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಇನ್ನಾದರೂ ಮುಕ್ತಿ ಸಿಗುವುದೆ? ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೆ? ಕಾದುನೋಡಬೇಕಿದೆ.

WhatsApp Image 2024 08 10 at 4.13.11 PM
IMG 20240805 WA0207
ಶರಣಪ್ಪ ಗೊಲ್ಲರ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X