ರಾಮನಗರ | ವೈದ್ಯಕೀಯ ಪ್ರಮಾಣಪತ್ರಕ್ಕೆ ₹100 ಲಂಚ ಕೇಳಿದ ಜಿಲ್ಲಾಸ್ಪತ್ರೆ ವೈದ್ಯ ಬಿ ಜಿ ಕುಮಾರಸ್ವಾಮಿ; ಆರೋಪ

Date:

Advertisements

ಡಿಎಲ್ ನವೀಕರಣ ಮಾಡಿಸಲು ವೈದ್ಯಕೀಯ ಪ್ರಮಾಣಪತ್ರ ಕೋರಿ ಜಯದೇವ್‌ ಎಂಬುವವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದು, ಪ್ರಮಾಣಪತ್ರಕ್ಕೆ ಸಹಿಮಾಡಿ ವಿತರಿಸುವ ವೇಳೆ ವೈದ್ಯಾಧಿಕಾರಿ ಡಾ. ಬಿ ಜಿ ಕುಮಾರಸ್ವಾಮಿ ₹100 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

ಮಾಗಡಿ ಜಯದೇವ ಎಂಬುವವರು ಆರೋಪ ಮಾಡಿದ್ದು, ಪ್ರಮಾಣ ಪತ್ರಕ್ಕೆ ₹100 ಲಂಚ ಕೇಳಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

IMG 20241216 WA0017 1

“27 ವರ್ಷಗಳ ಸರ್ವೀಸ್‌ನಲ್ಲಿ ಯಾರ ಕೈಲೂ ಸರ್ಕಾರಕ್ಕೆ ಹಣ ಕಟ್ಟಿಸಿಲ್ಲ. ಗೆಜೆಟೆಡ್ ಆಫೀಸರ್‌ಗೆ ₹100 ಬೆಲೆ ಇಲ್ಲವೇ?, ಮೇಲಿನಿಂದ ಕೆಳಗಿನವರೆಗೆ ಎಲ್ಲರೂ ಲಂಚ ತೆಗೆದುಕೊಳ್ಳುತ್ತಾರೆ. ನಾನು ಮಾತ್ರ ಹರಿಶ್ಚಂದ್ರನಂತೆ ಕುಳಿತುಕೊಂಡಿರುವುದು ಸರಿಯೇ?” ಎಂಬಿತ್ಯಾದಿ ನಡೆಯುವ ಸಂಭಾಷಣೆ ಆಡಿಯೋದಲ್ಲಿ ದಾಖಲಾಗಿದೆ.

Advertisements

“ಹಿರಿಯ ತಜ್ಞರು ಹಾಗೂ ವೈದ್ಯರೂ ಆಗಿರುವಂತಹ ಡಾ. ಬಿ ಜಿ ಕುಮಾರಸ್ವಾಮಿ ಸಾರ್ವಜನಿಕರ ಬಳಿ ನಿತ್ಯವೂ ₹100 ರಿಂದ ₹500 ರೂಪಾಯಿಗಳವರೆಗೆ ಬಹಿರಂಗವಾಗಿ, ನಿಸ್ಸಂಕೋಚವಾಗಿ ಡಿಮ್ಯಾಂಡ್ ಮಾಡಿ ಲಂಚ ಕೇಳುತ್ತಾರೆ. ಇವರು ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿ. ಸರ್ಕಾರ ₹2 ಲಕ್ಷಕ್ಕೂ ಅಧಿಕವಾಗಿ ಸಂಬಳ ನೀಡುತ್ತದೆ. ಇದರ ಜ್ಞಾನವೇ ಇಲ್ಲದೆ ಕೂಲಿ ಮಾಡುವ ಜನರ ಬಳಿ ಈ ರೀತಿ ಲಂಚದ ಮೂಲಕ ಹಣವನ್ನು ವಸೂಲಿ ಮಾಡುತ್ತಿರುವುದು ಭ್ರಷ್ಟಾಚಾರವಾಗಿದೆ” ಎಂದು ಮಾಗಡಿ ಜಯದೇವ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಮಾಣಪತ್ರ ಮಾಡಿಸಲು ಆಸ್ಪತ್ರೆಗೆ ಬಂದ ವ್ಯಕ್ತಿಯೋರ್ವರಿಂದ ಲಂಚ ಕೇಳಿದ್ದು, ಮಹಿಳಾ ರೋಗಿಗಳ ಬಳಿಯೂ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ರಾಮನಗರ ಜಿಲ್ಲಾ ಹಿರಿಯ ವೈದ್ಯಾಧಿಕಾರಿ ಡಾ ಬಿ ಜಿ ಕುಮಾರಸ್ವಾಮಿ ಮೇಲೆ ಸಾಮಾಜಿಕ ಹೋರಾಟಗಾರ ಸ್ವಾಮಿ ಎಚ್ ಎಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಇದನ್ನು ನೋಡಿದ್ದೀರಾ? ಸಮ್ಮೇಳನದಲ್ಲಿ ಬಾಡೂಟ: 5 ರೂಪಾಯಿ ಡಾಕ್ಟರ್ ಹೇಳೋದೇನು?

ಡಾ ಬಿ ಜಿ ಕುಮಾರಸ್ವಾಮಿ ರೋಗಿಗಳಿಂದ ಲಂಚ ಕೇಳುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಆಧರಿಸಿ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸ್ವಾಮಿ ದೂರು ಸಲ್ಲಿಸಿದ್ದಾರೆ.

“ಮಹಿಳಾ ರೋಗಿಗಳ ಜತೆಗೆ ಅನುಚಿತ ವರ್ತನೆ ತೋರುತ್ತಾನೆ. ಮುಜುಗರಕ್ಕೆ ಈಡಾಗುವಂತೆ ಅಸಭ್ಯವಾಗಿ ಮಾತನಾಡಿ ಚಿಕಿತ್ಸೆ ನೀಡುವುದು ಈತನ ಚಾಳಿಯಾಗಿದೆ. ಈ ದುರ್ನಡತೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಡಾ. ಬಿ ಜಿ ಕುಮಾರಸ್ವಾಮಿ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ರಾಮನಗರ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಶೀಘ್ರವೇ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯನಿಗೆ ಶಿಕ್ಷೆ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳಿಂದ ಯಾವುದೇ ರೀತಿಯ ತಪ್ಪುಗಳು ನಡೆಯದಂತೆ ,ಇತರರಿಗೆ ಮಾದರಿಯಾಗುವಂತೆ ತಪ್ಪಿತಸ್ಥನಿಗೆ ದಂಡನೆ ನೀಡಬೇಕು” ಎಂದು ಸ್ವಾಮಿ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X