ತುಮಕೂರು ಜಿಲ್ಲೆಯ ರೈತರ ಬಲಿಗೆ ಸಿದ್ಧವಾದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ : ರೈತ ಸಂಘ ಆಕ್ರೋಶ

Date:

Advertisements

ಹೇಮಾವತಿ ನೀರು ಜಿಲ್ಲೆಯ ಜೀವನಾಡಿಯಾಗಿದೆ. ಕೃಷಿಕರ ಬಾಳಿಗೆ ಬೆಳಕಾಗಿ ಬಂದ ನದಿ ನೀರನ್ನು ಮಾಗಡಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ನಡೆ ರೈತ ವಿರೋಧಿಯಾಗಿದೆ. ಯಾವುದೇ ಕಾನೂನು ಕ್ರಮ ಇಲ್ಲದ ಕಾಮಗಾರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಜರಾಯಿ ದೇವಾಲಯಕ್ಕೆ ಸಂಬಂಧಿಸಿದ ಜಮೀನನ್ನು ವಶಕ್ಕೆ ಪಡೆದು ಕೆಲಸ ಮಾಡಲಾಗುತ್ತಿದೆ. ಇದನ್ನು ತಡೆಯಬೇಕಾದ ತಾಲ್ಲೂಕು ಆಡಳಿತವೇ ಗುತ್ತಿಗೆದಾರರ ಪರ ನಿಂತು ಸ್ಥಳದಲ್ಲಿ ಹಾಜರಿದ್ದು ಕೆಲಸ ನಡೆಸಿದೆ. ಇದು ಅನ್ಯಾಯ ರೈತ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಸದಸ್ಯರು ದಿಢೀರ್ ರಸ್ತೆಗಿಳಿದು ಕೆಲ ಕಾಲ ಹೆದ್ದಾರಿ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತ ಸಂಘದ ಸದಸ್ಯರು ದಿಢೀರ್ ಬಸ್ ಸ್ಟ್ಯಾಂಡ್ ಬಳಿ ತೆರಳಿ ರಸ್ತೆಗಿಳಿದು ಪ್ರತಿಭಟಿಸಿದ ರೈತರನ್ನು ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಹೇಮಾವತಿ ಮುಖ್ಯನಾಲೆಯಿಂದ ಅಷ್ಟೇ ತೆಗೆದುಕೊಂಡು ಹೋಗಬೇಕು. ನೀರು ಹಂಚಿಕೆ ಆದೇಶದ ಬಳಿಕ ನೀರು ಹರಿಸುವ ಮುನ್ನ ಇಡೀ ಕಾಮಗಾರಿಯನ್ನು ಅಕ್ರಮವಾಗಿ ಆರಂಭಿಸಿ ಸಾವಿರ ಕೋಟಿ ರೂಗಳನ್ನು ಮಂಜೂರು ಮಾಡಿ ಉಪ ಮುಖ್ಯಮಂತ್ರಿಗಳು ತಮ್ಮ ಪ್ರಭಾವ ಬೀರಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಶಾಸಕರು, ಸಚಿವರು ಸುಮ್ಮನಿರುವುದು ವಿಪರ್ಯಾಸ. ಸರ್ಕಾರಿ ಜಾಗದಲ್ಲಿ ಕೆಲಸ ಮಾಡಲು ಇದುವರೆವಿಗೂ ಆದೇಶವಿಲ್ಲ. ಅಕ್ರಮವಾಗಿ ಕೆಲಸ ನಡೆಯಲು ಅಧಿಕಾರಿಗಳೇ ಮುಂದಾಳತ್ವ ವಹಿಸಿರುವುದು ರೈತರ ದೌರ್ಭಾಗ್ಯವೇ ಸರಿ. 12 ಅಡಿ ವ್ಯಾಸದ ಪೈಪ್ ಅಳವಡಿಕೆ ನಮ್ಮ ಪಾಲಿನ ಎಲ್ಲಾ ನೀರು ಸೆಳೆಯಲಿದೆ. ಈ ಬಗ್ಗೆ ನೀರಾವರಿ ತಜ್ಞರು ಸಹ ವಿರೋಧಿಸಿದ್ದಾರೆ. ಏನಾಗಲಿ ನೀರು ಹರಿಸುವ ಹಠಕ್ಕೆ ಬಿದ್ದ ಡಿಸಿಎಂ ಅವರ ದರ್ಪ ಈಗ ಪೊಲೀಸರ ಮೂಲಕ ಕಾಣುತ್ತಿದೆ. ರೈತರು ಯಾವುದಕ್ಕೂ ಜಗ್ಗವುದಿಲ್ಲ. ಕಾಮಗಾರಿ ನಡೆಯದಂತೆ ತಡೆಯಲು ಸಿದ್ದರಿದ್ದು ಉಗ್ರ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತವೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಹೇಮಾವತಿ ನೀರು ನಮ್ಮ ಹಕ್ಕು. ನಮ್ಮ ಪಾಲಿನ 24 ಟಿಎಂಸಿ ನೀರು ಜಿಲ್ಲೆಗೆ ಹರಿಸಬೇಕು. ಇದರಲ್ಲೇ ಕದ್ದು ಕೊಂಡೊಯ್ಯುವ ಕೆಲಸ ಸರ್ಕಾರ ಮಾಡುತ್ತಿದೆ. ಜಿಲ್ಲೆಯ ರೈತರು ಸರ್ಕಾರಕ್ಕೆ ಬೇಕಲ್ಲವೇ ಎಂಬುದು ತಿಳಿಯುತ್ತಿಲ್ಲ. ಅಕ್ರಮವಾಗಿ ಪೈಪ್ ಲೈನ್ ಮಾಡಿ ನೀರು ಹರಿಸುವುದು ಸರಿಯಲ್ಲ. ಇದರ ಬಗ್ಗೆ ಸಾವಿರಾರು ರೈತರು ವಿರೋಧ ತೋರಿ ಹೋರಾಟ ನಡೆಸಿದ್ದಾರೆ. ಆದರೆ ಸರ್ಕಾರಿ ಜಾಗ, ದೇವಸ್ಥಾನದ ಜಾಗವನ್ನು ಕಬಳಿಸಿ ಕೆಲಸ ಆರಂಭಿಸಿದ್ದು ಕಾನೂನು ಬಾಹಿರ. ಅಧಿಕಾರಿಗಳೇ ಈ ಅಕ್ರಮಕ್ಕೆ ಸಾಥ್ ನೀಡಿರುವುದು ಜನ ವಿರೋಧಿಯಾಗಿದೆ. ರೈತರನ್ನು ಒಂದು ಮಾತು ಕೇಳದೆ ಕೆಲಸ ಮಾಡಿದ್ದರ ಫಲ ರೈತರೇ ಸರ್ಕಾರಕ್ಕೆ ತೋರುತ್ತಾರೆ. ಹೋರಾಟ ಮುಂದುವರೆಸಿ ಬೃಹತ್ ಮಟ್ಟದಲ್ಲಿ ವಿರೋಧ ಮಾಡಲಿದ್ದೇವೆ. ಸಾವಿರಾರು ರೈತರು ಒಗ್ಗೂಡಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisements

ಈ ಸಂದರ್ಭದಲ್ಲಿ ರೈತಸಂಘದ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಗುರು ಚನ್ನಬಸವಯ್ಯ, ಯತೀಶ್, ಶಿವಕುಮಾರ್, ಸತ್ತಿಗಪ್ಪ, ಪ್ರಕಾಶ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X