ಬೀದರ್‌ | ಜಾನಪದ ಜನ ಬದುಕಿನ ಕನ್ನಡಿ : ಜಗನ್ನಾಥ ಹೆಬ್ಬಾಳೆ

Date:

Advertisements

ಜಾನಪದವು ಜನ ಬದುಕಿನ ಕನ್ನಡಿಯಾಗಿದೆ. ಜೀವನದ ಎಲ್ಲ ವಲಯವು ಜಾನಪದದಿಂದ ಆವೃತ್ತವಾಗಿದೆ. ಅದರ ಉಳಿವು ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಮಹಾವಿದ್ಯಾಲಯದಲಿ ಇತ್ತಿಚಿಗೆ ಹಮ್ಮಿಕೊಂಡಿದ್ದ ಶಾಲಾ-ಕಾಲೇಜಿಗೊಂದು ಜಾನಪದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ʼಪಾರಂಪರಿಕ ಕಲೆ, ಸಾಹಿತ್ಯ, ವೈದ್ಯ ವಿಜ್ಞಾನ ಆಧುನಿಕ ಕಾಲದಲ್ಲಿ ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ. ಮೌಖಿಕ ಸಂಸ್ಕೃತಿಯಲ್ಲಿ ಜೀವನದ ಹಲವು ಅನುಭವ ಅಡಕವಾಗಿವೆ, ಅದು ಬದುಕಿನ ಎಲ್ಲ ಮುಖಗಳನ್ನು ಒಳಗೊಂಡಿದೆ. ಜಾನಪದದ ಕುರಿತು ಹೊಸ ವಿದ್ಯಾರ್ಥಿಗಳು, ಯುವ ಸಂಶೋಧಕರು ಆಸಕ್ತಿಯಿಂದ ಅಧ್ಯಯನ ಮಾಡಬೇಕಿದೆʼ ಎಂದು ಸಲಹೆ ನೀಡಿದರು.

Advertisements

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಅವರು ‘ಜಾನಪದದಲ್ಲಿ ಮೌಲ್ಯಗಳು’ ಕುರಿತು ಮಾತನಾಡಿ, ʼಮನುಷ್ಯನ ಬದುಕಿನಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಿದ ಜಾನಪದವು ಪ್ರೀತಿ, ಪ್ರೇಮ, ಸೋದರತ್ವ, ಸೌಹಾರ್ದತೆ, ಸಾಮರಸ್ಯಕ್ಕೆ ಆದ್ಯತೆ ನೀಡಿದೆ. ಕೌಟುಂಬಿಕ ಮೌಲ್ಯಗಳಿಗೆ, ಕೂಡು ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುವ ಅಂಶಗಳು ಜಾನಪದದಲ್ಲಿ ಇವೆ. ಮನುಷ್ಯನ ಮೌಲ್ಯ ಎತ್ತಿ ಹಿಡಿಯುವ ತತ್ವ ಜಾನಪದದ ಜೀವಾಳವಾಗಿದೆ. ಜಾನಪದ ಹಾಡು, ಒಗಟು, ಗಾದೆ, ಒಡಪು, ಜನಪದ ರಂಗಭೂಮಿ, ಕಲೆಗಳ ಬಗೆಗೆ ಸಾಹಿತ್ಯದ ಮತ್ತು ಸಾಹಿತ್ಯೆತರ ವಿದ್ಯಾರ್ಥಿಗಳು ಅರಿಯಬೇಕುʼ ಎಂದು ಹೇಳಿದರು.

ಬಸವೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಆಧುನಿಕತೆ ಬೆಳೆದಂತೆ ಜಾನಪದ ನಶಿಸುವ ಸಾಧ್ಯತೆಯಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಾನಪದದ ದಾಖಲೀಕರಣ ಮೂಲಕ ಜಾನಪದ ಉಳಿಸಿಕೊಳ್ಳಬೇಕಾಗುತ್ತದೆ. ಜಾನಪದ ಜಗತ್ತಿನ ಕುರಿತು ಹೆಚ್ಚು ಹೊಸ ಸಂಶೋಧನೆ ನಡೆಯಬೇಕು. ದುಡಿಮೆ, ಜೀವನಾನುಭವ, ಲೋಕ ಗ್ರಹಿಕೆಗಳು ಮೇಳೈಸಿ ಜಾನಪದದಲ್ಲಿ ಸೃಜನಶೀಲತೆ ಹುಟ್ಟಿದೆʼ ಎಂದರು.

ಈ ಸುದ್ದಿ ಓದಿದ್ದೀರಾ? ವಯನಾಡ್ ಭೂಕುಸಿತ | ಮೃತರ ಸಂಖ್ಯೆ 84ಕ್ಕೆ ಏರಿಕೆ; ಕೇರಳದಲ್ಲಿ ಭಾರೀ ಮಳೆ

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಪ್ರಾಧ್ಯಾಪಕ ಡಾ. ಅಶೋಕ ಕೋರೆ, ಡಾ.ಶಿವಾಜಿ ಮೇತ್ರೆ, ದೇವೆಂದ್ರ ಬರಗಾಲೆ, ಲಕ್ಷ್ಮಿಬಾಯಿ ಪಾಟೀಲ, ಚನ್ನಬಸವ ಗೌರ, ಗಂಗಾಧರ ಸಾಲಿಮಠ ಮೊದಲಾದವರಿದ್ದರು. ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿದರು, ಬಸವರಾಜ ಗುಂಗೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X