ಗದಗ | ದೇವರ ಹೆಸರಿನಲ್ಲಿ ಮೌಢ್ಯ, ಕಂದಾಚಾರ: ತಡೆಗಟ್ಟುವಂತೆ ಡಿಎಸ್ಎಸ್ ಮನವಿ

Date:

Advertisements

“ನರಗುಂದ ಪಟ್ಟಣದಲ್ಲಿ ದೇವರ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೌಡ್ಯತೆ ಮತ್ತು ಕಂದಾಚಾರಗಳನ್ನು ಬಿತ್ತುತ್ತಿದ್ದಾರೆ. ಇದರಿಂದ ಜನರು ಭಯ ಭೀತಿ ಒಳಗೊಳ್ಳುತ್ತಿದ್ದು, ಕೂಡಲೇ ದೇವರ ಹೆಸರಿನಲ್ಲಿ ಮೌಢ್ಯ, ಕಂದಾಚಾರ ತಡೆಗಟ್ಟುವಂತೆ ಡಿಎಸ್ಎಸ್ ಒತ್ತಾಯಿಸಿದರಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದೇವರ (ಭಾಗಮ್ಮ ದೇವಿ) ಹೆಸರಿನಲ್ಲಿ ಮಾಟ ಮಂತ್ರ ನಿಧಿ ಶೋಧನೆ ಪ್ರಾಣಿ ಬಲಿ, ವಾಮಾಚಾರ, ಭಯಾನಕವಾದ ಕಾಯಿಲೆಗಳಿಗೆ ಔಷಧಿ ನೀಡುತ್ತೇವೆ ಎಂದು ಹೇಳಿ ಜನರಲ್ಲಿ ಮೂಡನಂಬಿಕೆ ಬಿತ್ತುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪೊಲೀಸ್ ಠಾಣೆ ಸಿಪಿಐ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ, ಡಿ ಎಸ್ ಎಸ್ ತಾಲ್ಲೂಕು ಅಧ್ಯಕ್ಷ ದತ್ತಾತ್ರೇಯ ಜೋಗನ್ನವರ ಮಾತನಾಡಿ, “ನರಗುಂದ ಪಟ್ಟಣದ ಕೆಲವು ನಗರಗಳಲ್ಲಿ ದೇವರ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೌಡ್ಯತೆ ಮತ್ತು ಕಂದಾಚಾರಗಳನ್ನು ಬಿತ್ತುತ್ತಿದ್ದಾರೆ. ಅಲ್ಲದೆ ಹುಣ್ಣಿಮೆ ಅಮಾವಾಸ್ಯೆ ಗುರುವಾರ ಭಾನುವಾರದಂತ ವಾರಗಳಲ್ಲಿ ಭಯಾನಕ ಕಾಯಿಲೆಗಳನ್ನು ಒಳಕೊಂಡಂತ ಜನರು, ಮಾನಸಿಕ ಅಸ್ವಸ್ಥರು ಸಂಚರಿಸುವುದರಿಂದ ಓಣಿಯಲ್ಲಿನ ಜನರು ಭಯ ಬೀತಗೊಂಡು ಜೀವನ ನಡೆಸುತ್ತಿದ್ದಾರೆ. ಓಣಿಯಲ್ಲಿ ಸಣ್ಣ ಪುಟ್ಟ ಮಕ್ಕಳು ಮಹಿಳೆಯರು ವಯೋವೃದ್ಧರು ಇದ್ದಾರೆ. ವಾಮಾಚಾರ ಮಾಟ ಮಂತ್ರ ಮಾಡತಕ್ಕಂಥ ವ್ಯಕ್ತಿಗಳಿಗೆ ಪ್ರಶ್ನೆ ಮಾಡಿದರೆ, ಎಲ್ಲಿ ನಮಗೆ ಮಾಟ ಮಂತ್ರ ಮತ್ತು ನಾವು ಸಾಕಿದ ಪ್ರಾಣಿ ಪಕ್ಷಿಗಳಿಗೆ ಎಲ್ಲಿ ಸಾವು ನೋವು ತರುತ್ತಾರೆಂಬ ಭಯದ ವಾತಾವರಣವಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಿಲ್ಲಾದ್ಯಂತ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ್ ಅದಾಲತ್

Advertisements

“ಹಾಗಾಗಿ ಇಂತಹವುಗಳನ್ನು ತಡೆಗಟ್ಟಿ ಸಾರ್ವಜನಿಕರಿಗೆ ನಿರ್ಭೀತಿಯಿಂದ ಜೀವನವನ್ನು ನಡೆಸಲು ಅನುವು ಮಾಡಿಕೊಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣು ಚಲವಾದಿ, ಮುತ್ತು ಸುರಕೋಡ, ವಿಜಯ ಬಡಿಗೇರ, ಸುಭಾಷ್ ಜೋಗನವರ, ಮಹಾಂತೇಶ ಪೂಜಾರ, ವಿಠ್ಠಲ್ ಸೋಮಣ್ಣವರ, ನವೀನ್ ಜೋಗನ್ನವರ, ಗುರುನಾಥ ಕೆಂಗಾರಕರ, ಇನ್ನೂ ಅನೇಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X