“ಬಿ.ಎಲ್.ಓ ಕೆಲಸಗಳಿಗೆ ನಮ್ಮನ್ನು ನೇಮಿಸುವುದು ಸರಿಯಲ್ಲಾ. ಐಸಿಡಿಯಸ್ ಅಲ್ಲದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ” ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷರು ನೀಲಮ್ಮ ಹಿರೇಮಠ ಎಂದು ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿರಸ್ತೆದಾರರ ಮೂಲಕ ಮಾನ್ಯ ತಹಶಿಲ್ದಾರರಗೆ ಮನವಿ ಸಲ್ಲಿಸಿ ಮಾತನಾದರು.
“ಬಿ.ಎಲ್.ಓ ಅಧಿಕಾರಿಗಳು ನಮಗೆ ಅನಧಿಕೃತವಾಗಿ ಕೆಲಸಗಳನ್ನು ಹಚ್ಚುತ್ತಿದ್ದಾರೆ. ನಾವು ಅಂಗನವಾಡಿ ಕಾರ್ಯಕರ್ತರು ಐಸಿಡಿಎಸ್ ಯೋಜನೆಯ ಜಾರಿಗಾಗಿ ಸುಮಾರು 24-25 ಹಂತದ ಕಾರ್ಯಕ್ರಮಗಳನ್ನು ನಿಭಾಯಿಸಿದರೂ ಸಮಯ ಸಿಗುತ್ತಿಲ್ಲ” ಎಂದರು.
ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರು ಗಣೇಶ್ ರಾಥೋಡ್ ಮಾತನಾಡಿ, “ಐಸಿಡಿಎಸ್ ಯೋಜನೆ, ಅದರ ಉದ್ದೇಶ ತಾಯಿ ಮತ್ತು ಮಗುವಿನ ಆರೈಕೆ ಕೆಲಸ. ಅದನ್ನು ಬಿಟ್ಟು ಐಸಿಡಿಎಸ್ ಅಲ್ಲದ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತರನ್ನ ನೇಮಿಸುತ್ತಿರುವುದು ಅವೈಜ್ಞಾನಿಕ ನಿಯಮವಾಗಿದ್ದು, ಯಾವುದೇ ಕಾರಣಕ್ಕೂ ಐಸಿಡಿಎಸ್ ಅಲ್ಲದ ಕೆಲಸಗಳಿಗೆ ನೇಮಿಸಬಾರದು” ಎಂದರು.
“ಮಹಿಳೆಯರ ಮತ್ತು ಮಗುವಿನ ಆರೈಕೆ, ಪೌಷ್ಟಿಕಾಂಶ, ಘೋಷಣೆ ಯೋಜನೆಗಳ ಜಾರಿ ಹೀಗೆ ಈಗಾಗಲೇ ಅನೇಕ ಕೆಲಸಗಳಿಗೆ ಸಮಯದ ಅಭಾವವಿದೆ. ಇದಾಗ್ಯೂ ಕೆಲಸ ಬಾಕಿ ಉಳಿಯುತ್ತಿದ್ದು, ಅವುಗಳನ್ನು ಸರಿದೂಗಿಸಲು ಐಸಿಡಿಎಸ್ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ತರಬೇತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕು. ಬೇರೆ ಬೇರೆ ಕೆಲಸಗಳಿಗೆ ನೇಮಿಸುವುದು ಸರಿಯಲ್ಲ. ಐಸಿಡಿಯಸ್ ಯೋಜನೆಗೆ ಮಾಡುವ ಮೋಸ ಆಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾಲ್ತುಳಿತ | ಆರ್ಸಿಬಿ ಮತ್ತು ಡಿಎನ್ಎ ಪದಾಧಿಕಾರಿಗಳಿಗೆ ಮಧ್ಯಂತರ ಜಾಮೀನು
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಸಿಐಟಿಯು ಜಿಲ್ಲಾ ಮುಖಂಡರಾದ ಮೈಬು ಹವಾಲ್ದಾರ್, ಅಂಗನವಾಡಿ ಮುಖಂಡರಾದ ಸುಮ್ನೆ ಮಾತಾಡಬೇಡ ಸುನಿತಾ, ಪವಿತ್ರ, ಸವಿತಾ ರಾಠೋಡ, ರಂಜಿತಾ ಕುಲಕರ್ಣಿ, ರತ್ನಾ ವಾಲಿ, ದೀಪಾ ಬಡಿಗೇರ್, ಸುನೀತಾ ಅಜಮೀರ್, ಶಂಕ್ರಮ್ಮ ಸಿಂಹಾಸನದ, ಗೀತಾ ಕಡಬಲಕಟ್ಟಿ, ಖಾಜಾಬಿ ಕುಸುಗಲ್, ದಾನಮ್ಮ ಹಿರೇಮಠ್, ವಿಜಯಲಕ್ಷ್ಮಿ ಪತ್ತಾರ್, ರಾಚಮ್ಮ ಗದಗಿನಮಠ, ಮಲ್ಲಮ್ಮ ವಿಭೂತಿ, ಮಹಾದೇವಿ, ಕಸ್ತೂರಿ ಹುಬ್ಬಳಿ, ಸಾವಿತ್ರಿ ಸುಬೇದಾರ್, ಮಂಜುಳಾ ಹಡಪದ, ಸಿದ್ರಾಮವ್ವ ಹಿರೇಮಠ, ಶಾಂತ ಸೋಬಾನದ್, ಲಕ್ಷ್ಮಿಬಾಯಿ ರಾಠೋಡ, ಶಾವಕ್ಕ ಗುರಿಕಾರ್, ಲಕ್ಷ್ಮಿ ಬಂಕದ್, ಪರವಿನ ಬಾನು ಮದಗಾರ, ಶಾರದಾ ಮಂತಾ, ಲಲಿತಾ ಮಾರನಬಸರಿ, ಪವಿತ್ರ ಚಳಗೇರಿ, ಶಾಂತ ಸೋಬಾನದ ಹಾಗೂ ಇತರರು ಹಾಜರಿದ್ದರು.
