ಗದಗ | ಮನರೇಗಾ ಸಹಾಯಧನ; ಕೈ ಹಿಡಿದ ಕರಿಬೇವು

Date:

Advertisements

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರದೂರ ಗ್ರಾಮದ ರೈತ ಮೈಲೆಪ್ಪ ತಳಗೇರಿ ಅವರು ಕರಿಬೇವು ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ.

ಈ ಮೊದಲು, ಮೈಲೆಪ್ಪ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಜೋಳ, ಹೆಸರು ಕಾರು ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಮನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಒದಗಿಸಲಾಗುವ ಸೌಲಭ್ಯಗಳ ಅರಿತು, ಕರಿಬೇವು ಬೆಳೆಯಲು ನಿರ್ಧರಿಸಿದ್ದರು. 2023-24ನೇ ಸಾಲಿನಲ್ಲಿ 1.20 ಲಕ್ಷ ಸಹಾಯಧನ ಪಡೆದು 800 ಕರಿಬೇವು ಸಸಿ ತಂದು ನೆಟ್ಟಿದ್ದರು.

ಕೆಲವೇ ತಿಂಗಳುಗಳಲ್ಲಿ ಕರಿಬೇವು ಆದಾಯ ನೀಡುತ್ತಿದ್ದು, ಈಗ ಮೈಲೆಪ್ಪ ವಾರ್ಷಿಕವಾಗಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಕರಿಬೇವು ಸಸಿ ಬೆಳೆದಂತೆ ಇಳುವರಿಯು ಅಧಿಕವಾಗಲಿದ್ದು, ಆದಾಯ ಕೂಡ ಹೆಚ್ಚಾಗಲಿದೆ. ಇದರೊಂದಿಗೆ ವಾಣಿಜ್ಯ ಬೆಳೆಗಳ ಆದಾಯ ಸಹ ಪ್ರತ್ಯೇಕವಾಗಿ ಕೈ ಸೇರಲಿದೆ ಎಂದು ಮೈಲೆಪ್ಪ ಹೇಳುತ್ತಾರೆ.

Advertisements

ಮನರೇಗಾ ಯೋಜನೆಯ ಸದ್ಬಳಕೆಯಿಂದ ಮಿಶ್ರ ಬೇಸಾಯದ ಮಹತ್ವವನ್ನು ರೈತ ಮೈಲೆಪ್ಪ ಎತ್ತಿ ಹಿಡಿದಿದ್ದಾರೆ. ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಾರುಕಟ್ಟೆಗೆ ಕರಿಬೇವನ್ನು ಪೂರೈಕೆ ಮಾಡುತ್ತಿದ್ದು, ಕೆ.ಜಿಗೆ 30 ರೂಪಾಯಿ ದರದಲ್ಲಿ ಮಾರಾಟವಾಗಿದೆ. ಸೀಸಸ್‌ಗೆ ತಕ್ಕಂತೆ ದರ ಏರುಮುಖ ಆಗುವುದರಿಂದ ಮುಂಬರುವ ದಿನಗಳಲ್ಲಿ ಉತ್ತಮ ಆದಾಯ ನಿರೀಕ್ಷೆ ಮಾಡಬಹುದು ಎಂದು ಮೈಲೆಪ್ಪ ಹೇಳಿದ್ದಾರೆ.

“ಮನರೇಗಾ ಯೋಜನೆ ಸದ್ಬಳಕೆ ಮೂಲಕ 2023-24ನೇ ಸಾಲಿನಲ್ಲಿ ಸಹಾಯಧನ ಪಡೆದು ರೈತ ಮೈಲೆಪ್ಪ ಉತ್ತಮ ಆದಾಯ ಕಂಡಿರುವುದು ಖುಷಿಯ ಸಂಗತಿ. ಇದು ನರೇಗಾ ಯೋಜನೆ ಸದುಪಯೋಗದ ಜೊತೆಗೆ ಮಿಶ್ರ ಬೇಸಾಯದ ಮಹತ್ವ ಸಾರುವ ಮೂಲಕ ರೈತರ ಉತ್ತಮ ಆರ್ಥಿಕತೆಗೆ ನಿದರ್ಶನವಾಗಿರುವುದು ಖುಷಿಯ ಸಂಗತಿ” ಎಂದು ಮುಂಡರಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X