ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಆಶಯ ಈಡೇರಿಸುವ ಹಾಗೂ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ 70ರ ದಶಕದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹುಟ್ಟುಹಾಕಿದ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನವನ್ನು ‘ಸಂಘರ್ಷ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಗದಗ ಸಮಿತಿಯ ಜಿಲ್ಲಾ ಸಂಚಾಲಕ ಬಾಲರಾಜ ಅರಬರ ಹೇಳಿದರು.
ಗದಗ ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮುಂಡರಗಿ ತಾಲೂಕು ಸಂಚಾಲಕ ಹನಮಂತ ಪೂಜಾರ ಮಾತನಾಡಿ, “ಪ್ರೊ. ಕೃಷ್ಣಪ್ಪ ಅವರಂತಹ ಅಪ್ರತಿಮ ನಾಯಕ, ಚಿಂತಕ, ಹೋರಾಟಗಾರನ ಜನ್ಮದಿನವನ್ನು ‘ಸಂಘರ್ಷ ದಿನ’ವನ್ನಾಗಿ ಆಚರಿಸಲಾಗುವುದು. ಜೂ.9 ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಪುರಭವನದಲ್ಲಿ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು
ತಿಳಿಸಿದರು.
“ಬಾಲ್ಯದಲ್ಲಿ ಅಸ್ಪೃಶ್ಯತೆಯ ಅವಮಾನ, ಶೋಷಣೆ ಅನುಭವಿಸಿದ ಇವರು ಕರ್ನಾಟಕದಲ್ಲಿ ಪ್ರತ್ಯೇಕ ದಲಿತ ಚಳವಳಿ ಪ್ರಾರಂಭಿಸಿದರು. ಪ್ರೊ. ಬಿ. ಕೃಷ್ಣಪ್ಪ- ಹಬ್ಬನವರು ದಲಿತ ಹೋರಾಟಗಾರರಾಗಿ ಅಷ್ಟೇ ಅಲ್ಲದೇ ಪತ್ರಕರ್ತರಾಗಿ, ಲೇಖಕರಾಗಿ ಮತ್ತು ಅಂಬೇಡ್ಕರ್ ವಾದದ ಕಣೋಟದಿಂದ ಸಾಹಿತ್ಯ, ಸಮಾಜ, ರಾಜಕಾರಣವನ್ನು/ ಗ್ರಹಿಸಲು ಪ್ರಯತ್ನಿಸಿದ ಅಪೂರ್ವ ಚಿಂತಕರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪ್ರಜಾಪ್ರಭುತ್ವ, ಸಂವಿಧಾನ, ಜನಜೀವನದ ಮೇಲಿನ ದಾಳಿಗೆ ಜನತಾ ತೀರ್ಪು ದೊರಕಿದೆ: ಸಿಪಿಐ(ಎಂ)
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಗೋಕಾವಿ, ರೋಣ ತಾಲೂಕು ಸಂಚಾಲಕ ಹನಮಂತ ಚಲವಾದಿ, ರಮೇಶ ಚಲವಾದಿ, ಕೆಂಚಪ್ಪ ಮ್ಯಾಗೇರಿ, ಮಾಂತೇಶ ನಡಗಲಿ, ಪ್ರಕಾಶ ಕಮಡೊಳ್ಳಿ, ಪ್ರಕಾಶ ಭಜಂತ್ರಿ, ಹೊನ್ನಪ್ಪ ಸಾಕಿ, ಶ್ರೀಧರ ಕಲಾಲ, ಪ್ರಕಾಶ ಗಡ್ಡದವರ, ಪೂಜಾ ಬೇವೂರ, ಸಂತೋಷ ಜಾಲನ್ನವರ, ಮಾರುತಿ ಅಂಗಡಿ ಇದ್ದರು.
