ದೇಶದ ಪ್ರಥಮ ಮಹಿಳಾ ಶಿಕ್ಷಕಿ, ಅಕ್ಷರದವ್ವ “ಸಾವಿತ್ರಿ ಬಾ ಫುಲೆ ಪ್ರಶಸ್ತಿ” ಗೌರವಕ್ಕೆ ಹಳ್ಳಿರಂಗ ಶಾಲೆ ಆಯ್ಕೆಯಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಹಳ್ಳಿರಂಗ ಶಾಲೆಯು “ಸಾವಿತ್ರಿ ಬಾ ಪುಲೆ” ಪ್ರಶಸ್ತಿಗೆ ಆಯ್ಕೆಯಾಗಿದೆ. ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ, ಸೇವಾ ಮನೋಭಾವ ಪರಿಗಣಿಸಿ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಡಿಸಿ ಅಕ್ರಂ ಪಾಷ ವಿರುದ್ಧ ಡಿಎಂಎಫ್ಟಿ ಹಣ ದುರ್ಬಳಕೆ ಆರೋಪ; ಸಮಗ್ರ ತನಿಖೆಗೆ ಡಾ.ಮಂಜುನಾಥ್ ಆಗ್ರಹ
ವಿದ್ಯಾವಂತ ನೌಕರರು ತಮ್ಮ ಬಿಡುವಿನ ಸಮಯವನ್ನು ಸಮಾಜಕ್ಕೆ ಮೀಸಲಿಡಬೇಕು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿಸಬೇಕೆಂಬ ಆಶಯ ಇಟ್ಟುಕೊಂಡು ಸ್ಥಾಪಿತವಾದ ಈ ಸಂಸ್ಥೆ ಕಳೆದ ಐದು ವರ್ಷಗಳಿಂದ ಕಾರ್ಯ ಚಟುವಟಿಕೆ ಮಾಡುತ್ತಿದೆ. ಈಗಾಗಲೇ ಈ ಪ್ರಮುಖ ಸೇವೆ ಪರಿಗಣಿಸಿ 2022ರ ಸಾಲಿನ ಪ್ರಜಾವಾಣಿ ವರ್ಷದ ಸಾಧಕ ಪ್ರಶಸ್ತಿ, ಫುಲೆ ಮಾರ್ಗಿ, ಈಗ ಅಕ್ಷರದವ್ವನ ಪ್ರಶಸ್ತಿಗೆ ಭಾಜನವಾಗಿರುವುದು ನಮ್ಮ ಖುಷಿ ಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಸಂಸ್ಥಾಪಕ, ಕವಿ, ರೈಲ್ವೆ ನೌಕರರೂ ಆಗಿರುವ ವೀರಪ್ಪ ಹ ತಾಳದವರ ಹಾಗೂ ಹಳ್ಳಿರಂಗ ಆಡಳಿತ ಮಂಡಳಿ ಹರ್ಷ ವ್ಯಕ್ತ ಪಡಿಸಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು 2025ರ ಜನವರಿ 03ರಂದು ವಿಜಯಪುರದಲ್ಲಿ ನಡೆಯಲಿದೆ.