ಗದಗ | ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ರೈಲ್ವೆ ಪೊಲೀಸರಿಂದ ಪ್ರಕಟಣೆ

Date:

Advertisements

ಕೊಪ್ಪಳ ರೈಲ್ವೆ ನಿಲ್ದಾಣದ ರೈಲ್ವೆ ಯಾರ್ಡ್‌ನ ರೈಲ್ವೆ ಕಿ.ಮಿ ನಂ-115/000ರಲ್ಲಿ ಅಕ್ಟೋಬರ್ 02‌ರಂದು ಸುಮಾರು 35-40 ವರ್ಷದ ಅಪರಿಚಿತ ಪುರುಷನ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಈ ಸಂಬಂಧವಾಗಿ ಗದಗ ರೈಲ್ವೆ ಪೊಲೀಸ್ ಠಾಣೆ‌ ಮೃತನ ವಾರಸುದಾರರ ಪತ್ತೆಗೆ ಆತನ ವಿವರಗಳನ್ನು ನೀಡಿ ಪ್ರಕಟಣೆ ಹೊರಡಿಸಿದೆ.

ಗದಗ ರೈಲ್ವೆ ಪೊಲೀಸ್ ಠಾಣೆ‌ ಯುಡಿಆರ್ ನಂಬರ್‌ 52/2024 ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಮೃತನ ವಾರಸುದಾರರು ಆತನ ವಿವರಗಳನ್ನು ಪರಿಶೀಲಿಸಿ ಒಂದು ವೇಳೆ ಸದರಿ ಮೃತನು ಪತ್ತೆ ಆದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು” ಎಂದು ತಿಳಿಸಿದೆ.

ಮೃತನ ಚಹರೆ ಪಟ್ಟಿಯ ವಿವರ

Advertisements

ವಯಸ್ಸು: ಸುಮಾರು 35-40 ವರ್ಷ, ಗೋಧಿಗೆಂಪು ಮೈಬಣ್ಣ, ದುಂಡು ಮುಖ, ದಪ್ಪನೆ ಮೈಕಟ್ಟು, ತಲೆಯಲ್ಲಿ ಸುಮಾರು 1-2 ಇಂಚು ಕಪ್ಪು ಕೂದಲು, 1/4 ಇಂಚಿನಷ್ಟು ಕಪ್ಪು ದಾಡಿ ಮತ್ತು ಮೀಸೆ ಬಿಟ್ಟಿದ್ದಾನೆ.

1001906158 1

ಬಟ್ಟೆ ಬರೆಗಳ ವಿವರ : ಮೃತನ ಮೈಮೇಲೆ ಒಂದು ಕಪ್ಪು ಬಣ್ಣದ ರೆಡಿಮೇಡ್ ಪುಲ್ ಶರ್ಟ್‌, ಒಂದು ಕಡುನೀಲಿ ಬಣ್ಣದ ಅಂಡರ್‌ವೇರ್, ಒಂದು ಚಾಕ್ಲೇಟ್ ಬಣ್ಣದ ಪುಲ್ ಪ್ಯಾಂಟ್, ಬಲಗೈಯಲ್ಲಿ ಕಪ್ಪು ಕಾಸಿದಾರ, ಕಾಲಿನಲ್ಲಿ ಪ್ಯಾರಾಗಾನ್‌ ಕಂಪನಿಯ ಚಪ್ಪಲಿ ಧರಿಸಿರುತ್ತಾನೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಾಂಧಿ ಜಯಂತಿ ಆಚರಣೆ

ಸಂಬಂಧಪಟ್ಟವರು ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ 08372-278744 ಅಥವಾ ಮೊಬೈಲ್‌ ನಂಬರ್ 9480802128‌, Email: gadagrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080- 22871291ಕ್ಕೆ ಕರೆಮಾಡಿ ತಿಳಿಸಬೇಕೆಂದು ಕೋರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

ಮಂಗಳೂರು | ಅಲ್‌ ವಫಾ ಟ್ರಸ್ಟ್‌ನಿಂದ 15 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ

ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 15 ಜೋಡಿಗಳ ಸರಳ...

ಚಿಕ್ಕಮಗಳೂರು l ಶೋ ರೂಮ್ ಸಿಬ್ಬಂದಿಯಿಂದಲೇ ಡೀಸೆಲ್ ಕಳ್ಳತನ

ಶೋ ರೂಂ ಸಿಬ್ಬಂದಿಯೇ ಹೊಸ ವಾಹನದ ಡೀಸೆಲ್‌ ಕಳ್ಳತನ ಮಾಡಿದ ಘಟನೆ...

ಗದಗ | ಒಳಮೀಸಲಾತಿ ಜಾರಿ, ಬಹುದಿನಗಳ ಕನಸು ನನಸು ಮಾಡಿದ ಎಲ್ಲರಿಗೂ ಅಭಿನಂದನೆ: ಎಸ್. ಎನ್. ಬಳ್ಳಾರಿ

ಪರಿಶಿಷ್ಟ ಜಾತಿಗಳ ಮೂರು ದಶಕಗಳ ಒಳಮೀಸಲಾತಿ ಹೋರಾಟವನ್ನು ಮಾನ್ಯ ಸುಪ್ರೀಂ ಕೋರ್ಟ್...

Download Eedina App Android / iOS

X