ರಾಮನಗರ | ಸಜ್ಜನಿಕೆಯ ರಾಜಕಾರಣ ಎಸ್.ಎಂ.ಕೃಷ್ಣ ಸಾವಿನೊಂದಿಗೆ ಕೊನೆಯಾಗಿದೆ: ಡಾ. ಎಂ.ಬೈರೇಗೌಡ

Date:

Advertisements

ಸಜ್ಜನಿಕೆಯ ರಾಜಕಾರಣ ಎಸ್.ಎಂ.ಕೃಷ್ಣ ಸಾವಿನೊಂದಿಗೆ ಕೊನೆಯಾಗಿದೆ. ಹಲವು ತೊಂದರೆ ತೊಡಕುಗಳನ್ನು ನಿವಾರಿಸಿಕೊಂಡು ದಿಟ್ಟತನದ ಆಡಳಿತ ನೀಡಿದ ಸಜ್ಜನ ರಾಜಕಾರಣಿಗಳಲ್ಲಿ ಇವರು ಅಗ್ರಗಣ್ಯರು. ಅಸ್ಖಲಿತ ಕನ್ನಡ, ಇಂಗ್ಲೀಷ್ ಭಾಷೆ, ನಗು ಮೊಗ, ಉತ್ತಮ ವಸ್ತ್ರಗಳನ್ನು ಧರಿಸುವುದು ಇವೆಲ್ಲವೂ ಅವರ ವ್ಯಕ್ತಿತ್ವದ ಭಾಗವಾಗಿದ್ದವು ಎಂದು ಸಾಹಿತಿ ಡಾ ಎಂ.ಬೈರೇಗೌಡ ನುಡಿದರು.

IMG 20241217 WA0034

ಅವರು ರಾಮನಗರ ಜಿಲ್ಲಾ ಕಸಾಪ ಕಛೇರಿಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ರಾಜ್ಯಪಾಲರುಗಳಾದ ಎಸ್.ಎಂ. ಕೃಷ್ಣ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಕರ್ನಾಟಕವನ್ನು ಮರೆತ ಮುಖ್ಯಮಂತ್ರಿ ಎಂಬ ಆರೋಪ ಮಾಡುವವರಿಗೆ ಅರ್ಥ ಆಗಬೇಕು. ಕರ್ನಾಟಕದ ಹಳ್ಳಿಗಾಡಿನ ಮಕ್ಕಳು ಐಟಿ ಬಿಟಿ ಹೆಸರಿನಲ್ಲಿ ಪ್ರಪಂಚ ಪರ್ಯಟನೆ ಮಾಡಲು ಎಸ್.ಎಂ.ಕೃಷ್ಣ ಅನುವು ಮಾಡಿಕೊಟ್ಟರು. ಬರಗಾಲ, ವರನಟ ರಾಜಕುಮಾರ್ ಅಪಹರಣ ಇತ್ಯಾದಿ ಸವಾಲುಗಳನ್ನು ಎದುರಿಸಿದ ರೀತಿ ಗಮನಾರ್ಹ ಎಂದರು.

Advertisements

ನಿವೃತ್ತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವನರಾಜ್ ಮಾತನಾಡಿ, ಬಿಸಿಯೂಟದ ಯೋಜನೆ, ಸ್ತ್ರೀಶಕ್ತಿ ಸಂಘದ ಸ್ಥಾಪನೆಯಂಥ ಹತ್ತು ಹಲವು ಸಾಧನೆಯ ಮೈಲಿಗಲ್ಲು ಅವರ ಹೆಸರಿನಲ್ಲಿ ಇವೆ ಎಂಬ ವಿಚಾರಗಳನ್ನು ನುಡಿದರು.

ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ; ಸ್ಪಷ್ಟ ನಿಲುವು ತಿಳಿಸದ ಸಚಿವ

ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಜನ್ಮದಿನವನ್ನು ಐಟಿ ಬಿಟಿ ದಿನವನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್ ಸಮಗ್ರ ಅಭಿವೃದ್ಧಿಯ ಹರಿಕಾರ. ಇಡೀ ದೇಶವೇ ಮೆಚ್ಚುವ ರಾಜಕಾರಣಿ ಎಸ್.ಎಂ.ಕೃಷ್ಣ ಎಂದು ಶ್ಲಾಘಿಸಿದರು.

ಇದೆ ಸಂದರ್ಭದಲ್ಲಿ ನಮ್ಮನಗಲಿದ ನೀರಾವರಿ ತಜ್ಞ ವೆಂಕಟೇಗೌಡ, ನಾಡು ನುಡಿ ಹೋರಾಟಗಾರ ಲಿಂಗೇಗೌಡ, ವೃಕ್ಷ ಮಾತೆ ತುಳಸಿಗೌಡ ರವರುಗಳಿಗೂ ನುಡಿ ನಮನ ಸಲ್ಲಿಸಲಾಯಿತು.

ಇದನ್ನು ನೋಡಿದ್ದೀರಾ? ತುಮಕೂರು | ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು!

ಹಿರಿಯ ಸಮಾಜ ಸೇವಕ ವೆಂಕಟೇಶ್, ಕನ್ನಡ ಸಮದ್, ತಾಲೂಕು ಕಸಾಪ ಸಂಚಾಲಕ ಬಿ.ಟಿ ರಾಜೇಂದ್ರ, ಚಕ್ರಬಾವಿ ಸುರೇಶ್, ಕವಿ ಕಿರಣ್ ರಾಜ್ ತುಂಬೇನಹಳ್ಳಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕಿರಣ್, ಗೌರವ ಕೋಶಾಧ್ಯಕ್ಷ ನಂಜುಂಡಿ ಬಾನಂದೂರು ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಕರಿಯಪ್ಪ, ಅಬ್ದುಲ್ ಝಬಿ, ಕೂಟಗಲ್ಲು ಹೋಬಳಿ ಘಟಕದ ಅಧ್ಯಕ್ಷ ಕ್ಯಾಸಾಪುರ ದೇವರಾಜ್, ಡಾ.ಹೇಮಂತ್ ಗೌಡ, ಪ್ರಕಾಶ್, ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X