ಗುಬ್ಬಿ | ಶೀತ, ಕೆಮ್ಮು, ಜ್ವರ ಹೆಚ್ಚಳ ತಂದ ಆತಂಕ : ಹೊರ ರೋಗಿಗಳ ಸಂಖ್ಯೆ ಹೆಚ್ಚಳ

Date:

Advertisements

ಕಳೆದ ಹದಿನೈದು ದಿನದಿಂದ ಶೀತ ಜ್ವರ ನಂತರ ದೀರ್ಘಾವಧಿ ಕೆಮ್ಮುವ ರೋಗಿಗಳ ಸಂಖ್ಯೆ ಉಲ್ಬಣವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಂದೆ ಸಾಲು ಸರದಿಯಲ್ಲಿ ಕುಳಿತ ರೋಗಿಗಳ ಸಂಖ್ಯೆ ಕೂಡಾ ಅಧಿಕವಾಗಿ ವೈದ್ಯರು ಪುರುಸೊತ್ತಿಲ್ಲದೆ ಚಿಕಿತ್ಸೆಯಲ್ಲಿ ತೊಡಗಿರುವ ದೃಶ್ಯ ಕಾಣುತ್ತಿದೆ.

ವಾತಾವರಣ ಬದಲಾವಣೆ ಒಮ್ಮೆ ಮಳೆ, ಬಿಸಿಲು ಕಾಣಿಸುವ ಈ ಹವಾಮಾನದಲ್ಲಿ ಕಾಣುವ ಈ ವೈರಲ್ ಫೀವರ್ ಬಹುಬೇಗ ಹರಡುತ್ತದೆ. ನೆಗಡಿಯಿಂದ ಆರಂಭವಾಗಿ ಕಫ, ಜ್ವರ, ಮೈಕೈ ನೋವು ಹೆಚ್ಚಾಗಿ ಮೂರರಿಂದ ಐದು ದಿನಗಳ ಕಾಲ ಮಲಗಿಸುತ್ತಿದೆ. ಈ ಸಾಂಕ್ರಾಮಿಕ ವೈರಾಣು ಶೀತ ಸೀನುವಿಕೆಯಿಂದ ಬೇಗ ಹರಡುತ್ತದೆ. ಕೋವಿಡ್ ಭೀತಿ ಇರುವ ಈ ಸಮಯದಲ್ಲಿ ವೈರಲ್ ಫೀವರ್ ಮತ್ತಷ್ಟು ಭಯ ತಂದಿರುವುದಂತೂ ಸತ್ಯ.

ಗುಬ್ಬಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ ನಿತ್ಯ ಇರುತ್ತಿದ್ದ ಹೊರ ರೋಗಿಗಳ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಸಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈರಲ್ ಫೀವರ್ ಹೆಸರಿಗೆ ತಕ್ಕಂತೆ ಬೇಗ ಹರಡುತ್ತಿರುವ ಈ ಸಮಯದಲ್ಲಿ ರೋಗಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ. ಮಾಸ್ಕ್ ಬಳಕೆ, ಶೀತ ಕಾಣಿಸಿಕೊಂಡ ತಕ್ಷಣ ತಾವೇ ವೈದ್ಯಕೀಯ ನಡೆಸದೆ ನೇರ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸುದೀರ್ಘ ಕಾಲ ಕಾಣುವ ಕೆಮ್ಮು ಬಗ್ಗೆ ಎಚ್ಚರವಹಿಸಬೇಕು. ಒಣ ಕೆಮ್ಮು ಇದ್ದಲ್ಲಿ ಸೂಕ್ತ ಔಶಧೋಪಚಾರ ಅಗತ್ಯ. ಬಿಸಿ ನೀರು ಕುಡಿಯುವುದು, ಶೀತ ಪದಾರ್ಥ ಸೇವಿಸದೆ ಬಿಸಿ ಆಹಾರ ತಿನ್ನುವುದು ಇದಕ್ಕೆ ಮದ್ದು. ಕೆಮ್ಮು ಜೊತೆ ಕಫ ಇದ್ದಲ್ಲಿ ಖಂಡಿತಾ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಸೂಚಿಸುತ್ತಿದೆ.

Advertisements

“ಮಳೆಗಾಲದ ಈ ಸಂದರ್ಭದಲ್ಲಿ ವೈರಲ್ ಫೀವರ್ ಹರಡುವಿಕೆ ಕಾಣಸಿಗುತ್ತದೆ. ನೆಗಡಿಯಿಂದ ಆರಂಭವಾಗಿ ಜ್ವರ ಬರುತ್ತದೆ. ಜ್ವರ ಬಿಟ್ಟರೂ ಕೆಮ್ಮು ನಿರಂತರ ಕಾಣುತ್ತದೆ. ವೈರಾಣು ಕಾಟಕ್ಕೆ ನಿತ್ಯ ಹೊರ ರೋಗಿಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಅಲರ್ಜಿ ಮೂಲಕ ಹರಡುವ ಈ ವೈರಾಣು ಗಾಳಿ, ನೀರು ಹಾಗೂ ಧೂಳು ಅಲರ್ಜಿ ಎನಿಸುತ್ತದೆ. ಸಾಂಕ್ರಾಮಿಕ ವೈರಾಣು ಹರದಂತೆ ಎಚ್ಚರಿಕೆ ಕ್ರಮ ಮಾಸ್ಕ್ ಬಳಕೆ ಉತ್ತಮ ಹಾಗೂ ಸೂಕ್ತ ಚಿಕಿತ್ಸೆ, ಬಿಸಿ ಆಹಾರ, ನೀರು ಬಳಕೆ, ನಿರಂತರ ಕೆಮ್ಮು ಇದ್ದಲ್ಲಿ ವೈದ್ಯರ ಭೇಟಿ ಉತ್ತಮ” ಎಂದು ಗುಬ್ಬಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ತಿಳಿಸಿದ್ದಾರೆ.


ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X