ಗುಬ್ಬಿ | ಕಾಲೇಜು ಹುಡುಗರ ಹೊಡೆದಾಟ : ಪುಂಡಾಟಿಕೆಗೆ ಬೀಳಲಿದೆಯೇ ಬ್ರೇಕ್

Date:

Advertisements

ಕ್ಷುಲ್ಲಕ ಕಾರಣಕ್ಕೆ ಕಾಲೇಜು ಹುಡುಗರ ಎರಡು ಗುಂಪು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ರಂಗಮಂದಿರ ಹಿಂಭಾಗ ನಡೆದಿದೆ.

ಕಾಲೇಜು ಮುಗಿದ ಬಳಿಕ ಮೈದಾನ ಸೇರಿದ ವಿದ್ಯಾರ್ಥಿಗಳು ಮಾತಿನ ಚಕಮಕಿಗೆ ನಡೆಸಿದ್ದಾರೆ. ನಂತರ ಕೈ ಮಿಲಾಯಿಸಿ ಹೊಡೆದಾಟ ಸಹ ನಡೆಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇತ್ತೀಚಿಗೆ ಮೈದಾನದಲ್ಲಿ ಹುಡುಗರ ಗುಂಪು ಠಿಕಾಣಿ ಹೂಡಿ ಕೆಲ ವಿದ್ಯಾರ್ಥಿಗಳ ಬೆದರಿಸುವ ಘಟನೆ ನಡೆಯುತ್ತವೆ ಎಂದು ಇದೇ ಸಂದರ್ಭದಲ್ಲಿ ಕೆಲ ಹಿರಿಯ ನಾಗರೀಕರು ಅಭಿಪ್ರಾಯ ತಿಳಿಸಿದ್ದಾರೆ.

ಕಾಲೇಜು, ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಈ ಮೈದಾನದಲ್ಲಿ ಓಡಾಡುತ್ತಾರೆ. ಕಾಲೇಜು ವಿದ್ಯಾರ್ಥಿಗಳ ಗುಂಪುಗಾರಿಕೆ, ಹೊಡೆದಾಟ, ಬೆದರಿಕೆ ಅವಾಜ್ ಗಳು ಇವೆಲ್ಲಾ ನಡವಳಿಕೆಗೆ ಹೈಸ್ಕೂಲ್ ಪ್ರಾಥಮಿಕ ಮಕ್ಕಳನ್ನು ಭಯಭೀತರನ್ನಾಗಿಸಿದೆ. ಶಿಕ್ಷಕರು, ಉಪನ್ಯಾಸಕರ ಭಯ ಇಲ್ಲದ ಪುಂಡರ ಗುಂಪು ಕಡಿವಾಣಕ್ಕೆ ಪೊಲೀಸರ ಕಾರ್ಯಾಚರಣೆ ಅಗತ್ಯವಿದೆ.

Advertisements

ಮದ್ಯಾಹ್ನ ವೇಳೆಯಲ್ಲಿ ನಿರ್ಜನ ವಾತಾವರಣ ಇರುವ ಮೈದಾನದಲ್ಲಿ ಅಲ್ಲಲ್ಲೇ ಗುಂಪು ಕಾಣ ಸಿಗುತ್ತವೆ. ಈ ಹುಡುಗರು ಕಾಲೇಜು ಹೊರತಾದ ಚಟುವಟಿಕೆಯಲ್ಲಿ ಕಾಣಸಿಗುತ್ತಾರೆ. ಚಕ್ಕರ್ ಹೊಡೆದು ತಿರುಗುವ ವಿದ್ಯಾರ್ಥಿಗಳ ನಿಯಂತ್ರಣ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಪೊಲೀಸ್ ಇಲಾಖೆ. ಶಾಲಾ ಕಾಲೇಜು ಅವರಣದಿಂದ ಹೊರ ನಡೆಯುವ ಘಟನೆಗೆ ಜವಾಬ್ದಾರಿ ತೆಗೆದುಕೊಳ್ಳದ ಅಧ್ಯಾಪಕ ವರ್ಗ ಪೋಷಕರಿಗೆ ಮಾಹಿತಿ ರವಾನಿಸುತ್ತಾರೆ. ಆದರೆ ಗುಂಪುಗಾರಿಕೆ, ಹೊಡೆದಾಟ, ಬಡಿದಾಟ ಕಡಿವಾಣಕ್ಕೆ ಪೊಲೀಸರ ವಾಹನ ನಿತ್ಯ ಬೀಟ್ ಮಾಡುವ ಅಗತ್ಯವಿದೆ. ಕಾಲೇಜು ಆರಂಭ ಹಾಗೂ ಅಂತ್ಯ ಈ ವೇಳೆಯಲ್ಲಿ ಪೊಲೀಸರ ದರ್ಶನ ಮಾತ್ರ ಪುಂಡು ಹುಡುಗರ ಚಟುವಟಿಕೆಗೆ ಬ್ರೇಕ್ ಬೀಳಲಿದೆ.

ಶಾಲಾ ಕಾಲೇಜು ಮುಗಿದ ಬಳಿಕ ಪುಂಡಾಟಿಕೆಯ ವರಸೆ ಬಸ್ ನಿಲ್ದಾಣಕ್ಕೆ ವರ್ಗಾವಣೆ ಆಗಲಿದೆ. ಸರ್ಕಾರಿ ಬಸ್ಸಿಗಾಗಿ ಕಾದು ಕುಳಿತ ವಿದ್ಯಾರ್ಥಿಗಳ ಜೊತೆಯಲ್ಲೇ ಪುಂಡು ಪೋಕರಿಗಳ ಹಾವಳಿ ಆರಂಭವಾಗುತ್ತದೆ. ಹೆಣ್ಣು ಮಕ್ಕಳು ಬಸ್ಸಿಗಾಗಿ ಕಾದು ಕುಳಿತ ಸಮಯ ಸಾಕಷ್ಟು ಕಿರಿಕಿರಿಗೆ ಒಳಗಾಗಿದ್ದಾರೆ. ಇಲ್ಲೂ ಗುಂಪುಗಳ ಜಗಳ ಮುಂದುವರೆದು ಪ್ರಯಾಣಿಕರಿಗೆ ಭಯವನ್ನೇ ಹುಟ್ಟಿಸಿದೆ. ಈ ಬಗ್ಗೆ ಸಾರ್ವಜನಿಕರ ಶಾಂತಿ ಸಭೆಯಲ್ಲೂ ಸಾರ್ವಜನಿಕರು ಚರ್ಚೆ ನಡೆಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X