ಗುಬ್ಬಿ | ಆಗಸ್ಟ್ 8 ರಂದು ನೂರು ರೈತ ಮಿತ್ರರಿಗೆ ಅಭಿನಂದನಾ ಕಾರ್ಯಕ್ರಮ : ಮಂಜುನಾಥ್

Date:

Advertisements

ವಾಣಿಜ್ಯ ಅಡಕೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಡಕೆಕಾಯಿ ಮತ್ತು ಗೋಟು ಸುಲಿಯುವ ನವ ನವೀನ ಯಂತ್ರಗಳನ್ನು ನಮ್ಮಲ್ಲಿ ಆವಿಷ್ಕಾರ ಮಾಡಲಾಗಿದೆ. ಈ ವರ್ಷದ ಮೊದಲ ನೂರು ಮಂದಿ ಗ್ರಾಹಕ ರೈತ ಮಿತ್ರರಿಗೆ ವರ ಮಹಾಲಕ್ಷ್ಮೀ ಹಬ್ಬ ಆಗಸ್ಟ್ 8 ರಂದು ಅಭಿನಂದಿಸುವ ಕಾರ್ಯಕ್ರಮ ವಿನೂತನವಾಗಿ ಆಯೋಜಿಸಲಾಗಿದೆ ಎಂದು ತುಳಸಿ ರಂಗನಾಥ ಟ್ರೇಡರ್ ಮಾಲೀಕ ಎಲ್.ಎನ್.ಮಂಜುನಾಥ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ತುಳಸಿ ರಂಗನಾಥ ಟ್ರೇಡರ್ ಮಳಿಗೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಚೇಳೂರು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವು ಭಾಗದಿಂದ ಮಾದರಿ ರೈತರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಅಡಕೆ ಬೆಳೆಗೆ ಉತ್ತಮ ಮಾರುಕಟ್ಟೆ ಸಿಗುವ ಈ ಸಮಯದಲ್ಲಿ ಅಡಕೆಕಾಯಿ ಮತ್ತು ಗೋಟು ಸುಲಿಯಲು ಸಾಕಷ್ಟು ಪರದಾಡುವ ರೈತರ ಪಾಡು ಕಣ್ಮುಂದೆ ನೋಡಿದ ನಾನು ಕೂಡ ರೈತನಾಗಿ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ನವೀನ ಯಂತ್ರಗಳ ನಮ್ಮಲ್ಲೇ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಉತ್ತಮ ಸ್ಪಂದನೆ ದೊರೆತ ಹಿನ್ನಲೆ ಚೇಳೂರು, ಗುಬ್ಬಿಯಲ್ಲಿ ಘಟಕ ಆರಂಭಿಸಿ ರೈತರಿಗೆ ಯಂತ್ರಗಳ ಬಳಕೆ ಹಾಗೂ ರಿಪೇರಿ ಮಾಡಿಕೊಳ್ಳುವ ಹಾಗೂ ಬಿಡಿ ಭಾಗಗಳ ಮಾರಾಟ ನಡೆಸಿದ್ದೇವೆ. ಯಂತ್ರ ಖರೀದಿಸುವ ವರ್ಷದ ಎಲ್ಲಾ ರೈತರಿಗೆ ಆತ್ಮೀಯ ಅಭಿನಂದನೆ ಸಲ್ಲಿಸಲು ವರ ಮಹಾಲಕ್ಷ್ಮೀ ಹಬ್ಬದಂದು ಆಯ್ಕೆ ಮಾಡಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಿ ರೈತರಿಗೆ ಕೃಷಿ ನಡೆಸಲು ಉತ್ತೇಜನ ನೀಡಲಾಗುತ್ತಿದೆ ಎಂದ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಸಮ್ಮುಖದಲ್ಲಿ ನೂರು ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

Advertisements

ಯುವ ರೈತ ಮಂಜುನಾಥ್ ಅವರ ಕೃಷಿ ಆಸಕ್ತಿ ಹಾಗೂ ಹೊಸ ತಂತ್ರಜ್ಞಾನ ಬಳಸಿ ಯಂತ್ರಗಳ ತಯಾರಿಕೆ ಯುವ ಪೀಳಿಗೆಗೆ ಮಾದರಿ ಎನಿಸಿದ್ದಾರೆ. ವಾಣಿಜ್ಯ ಅಡಕೆ ಬೆಳೆ ಹೆಚ್ಚಾದಂತೆ ಈ ಯಂತ್ರಗಳ ಬಳಕೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಯಂತ್ರಗಳ ಬಳಕೆಗೆ ಸ್ಫೂರ್ತಿ ತುಂಬಲು ಜಿಲ್ಲೆಯ ರೈತರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

ವಿಜಯನಗರ | ಅಲೆಮಾರಿ ಸಮುದಾಯಗಳ ಅಭಿವೃದ್ಧಿಯೇ ನಿಗಮದ ಮುಖ್ಯ ಧ್ಯೇಯ: ಪಲ್ಲವಿ

ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ...

Download Eedina App Android / iOS

X