ಗುಬ್ಬಿ | ದಲಿತ ಕುಟುಂಬ ಒಕ್ಕಲೆಬ್ಬಿಸುವ ಹುನ್ನಾರ : ತಾಲೂಕು ಆಡಳಿತಕ್ಕೆ ದೂರು ನೀಡಿದ ಹಿಂಡಿಸಿಗೆರೆ ಕಾಲೋನಿ ನಿವಾಸಿಗಳು

Date:

Advertisements

ಹಲವು ವರ್ಷಗಳಿಂದ ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವ ಪ್ರಭಾವಿಗಳ ಮಾತಿಗೆ ಮಣೆ ಹಾಕಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹತ್ತು ಕುಟುಂಬವನ್ನು ಬೀದಿಗೆ ತಂದಿದ್ದಾರೆ. ಈ ಜಮೀನು ನಂಬಿ ಬದುಕು ಕಟ್ಟಿಕೊಂಡ ದಲಿತ ಕುಟುಂಬಕ್ಕೆ ತಾಲ್ಲೂಕು ಆಡಳಿತ ನೆರವಾಗಿ ನಿಂತು ಸ್ಥಳ ಪರಿಶೀಲಿಸಿ ಜಮೀನು ಉಳಿಸಿಕೊಡಬೇಕು ಎಂದು ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಕಾಲೋನಿಯ ಸಂತ್ರಸ್ತ ದಲಿತ ಕುಟುಂಬ ಸದಸ್ಯರು ಅರ್ಜಿ ಮೂಲಕ ತಮ್ಮ ಅಳಲು ತೋಡಿಕೊಂಡರು.

ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಬಂದ ಹಿಂಡಿಸಿಗೆರೆ ದಲಿತ ಕುಟುಂಬದ ಸದಸ್ಯರು ತಮ್ಮ ಬದುಕಿಗೆ ಅತ್ಯಗತ್ಯ ಗೋಮಾಳ ಜಮೀನು ನಮಗೆ ನೀಡಿ ಜೀವನ ಕಟ್ಟಿಕೊಡಬೇಕು. ದುರುದ್ದೇಶದಿಂದ ಕೆಲ ಪ್ರಭಾವಿಗಳು ತಮ್ಮ ಜಮೀನಿಗೆ ರಸ್ತೆ ಮಾಡಿಕೊಳ್ಳಲು ಈ ದಲಿತರ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಮೂಲಕ ಉದ್ದೇಶವಾಗಿ ಆಶ್ರಯ ಯೋಜನೆಯಡಿ ಇದೇ ಜಮೀನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ದಲಿತ ಕುಟುಂಬವನ್ನು ಅಮಾನವೀಯವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ವಾಸ್ತವ ಚಿತ್ರಣ ಪರಿಶೀಲಿಸಿ ದಲಿತರನ್ನು ಉಳಿಸಿ ಎಂದು ಸಂತ್ರಸ್ತರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.

ಸರ್ವೇ ನಂಬರ್ 48 ರಲ್ಲಿನ 8.13 ಎಕರೆ ಗೋಮಾಳದಲ್ಲಿ ಐದು ದಶಕಗಳಿಂದ ಸುಮಾರು ಹತ್ತು ಕುಟುಂಬ ಬದುಕು ನಡೆಸಿದೆ. ತುಂಡು ಭೂಮಿಯಲ್ಲೇ ಕೃಷಿ ನಡೆಸುವ ಮುಗ್ಧ ದಲಿತ ಕುಟುಂಬದ ಮೇಲೆ ಇಲ್ಲಿನ ಸ್ಥಳೀಯ ಪ್ರಭಾವಿ ಮುಖಂಡರ ಕಣ್ಣು ಬಿದ್ದಿದೆ. ಪ್ರಭಾವಿಗಳ ಜಮೀನಿಗೆ ಸೂಕ್ತ ರಸ್ತೆ ಮಾಡಿಕೊಳ್ಳಲು ಈ ದಲಿತರ ಭೂಮಿ ಕಸಿದು ಆಶ್ರಯ ಹೆಸರಿನಲ್ಲಿ ಅವರ ತೋಟಕ್ಕೆ ರಸ್ತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ರಮ ಸಕ್ರಮ ಅರ್ಜಿ ಹಾಕಿ ತುಂಡು ಜಮೀನು ಉಳಿಸಿಕೊಳ್ಳುವ ಯತ್ನದಲ್ಲಿದ್ದ ಹತ್ತು ಕುಟುಂಬಕ್ಕೆ ಶಾಕ್ ನೀಡಿದ ಗ್ರಾಮ ಪಂಚಾಯಿತಿ ದಿಢೀರ್ ನಿವೇಶನ ಮಾಡಲು ಮುಂದಾಗಿರುವುದು ದಲಿತ ಕುಟುಂಬಕ್ಕೆ ಆತಂಕ ತಂದಿದೆ. ಈ ಹುನ್ನಾರಕ್ಕೆ ದಲಿತರು ಬಲಿಯಾಗದಂತೆ ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು. ಈ ಗೋಮಾಳದಲ್ಲಿ ಮೂವರು ದಲಿತರಿಗೆ ಮಾತ್ರ ಸುಮಾರು ಒಂದು ಎಕರೆಯಷ್ಟು ಮಾತ್ರ ಪಹಣಿ ಆಗಿದ್ದು ದುರಸ್ಥಿ ಕಾರ್ಯ ಆಗಿಲ್ಲ. ಈ ಜಮೀನಲ್ಲಿ ಹಿರಿಯರ ಅಂತ್ಯ ಸಂಸ್ಕಾರ ಕೂಡಾ ನಡೆಸಲಾಗಿದೆ ಎಂದು ದಲಿತ ಮುಖಂಡ ಮಂಜುನಾಥ್ ವಾಸ್ತವಾಂಶ ತಿಳಿಸಿದರು.

Advertisements

ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್ ಅವರಿಗೂ ಮನವಿ ಸಲ್ಲಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿ ದಲಿತ ಕುಟುಂಬವನ್ನು ಉಳಿಸುವಂತೆ ಮನವಿ ಮಾಡಿದರು.

ಮೂಡಲಗಿರಿ, ವೆಂಕಟೇಶಯ್ಯ, ಮಂಜುನಾಥ್, ತಿಮ್ಮಯ್ಯ, ದೊಡ್ಡಮ್ಮ, ಶಿವಕುಮಾರ್, ಸಿದ್ದಯ್ಯ, ಜಯಲಕ್ಷ್ಮಮ್ಮ, ಮಂಗಳಮ್ಮ, ಕೆಂಪಮ್ಮ, ಲಕ್ಷ್ಮಮ್ಮ, ಸ್ವಾಮಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X