ಗುಬ್ಬಿ | ವಸತಿ ರಹಿತರಿಗೆ ನಿವೇಶನ ಹಂಚಿಕೆ ವಿಳಂಬ : ತ್ಯಾಗಟೂರು ಪಂಚಾಯಿತಿ ಮುಂದೆ ಸಂತ್ರಸ್ತರ ಅಳಲು

Date:

Advertisements

ಜಿಲ್ಲಾಧಿಕಾರಿಗಳ ಹೆಸರಿನ ಮೀಸಲು ಜಮೀನಲ್ಲಿ ನಾಲ್ಕು ಎಕರೆ ಆಶ್ರಯ ಯೋಜನೆಗೆ ಒಳಪಡಿಸಿ ತ್ಯಾಗಟೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರೂ ವಸತಿ ಹೀನರಿಗೆ ನಿವೇಶನ ಹಂಚಿಕೆ ಮಾಡಲು ಯಾವುದೇ ಕ್ರಮ ವಹಿಸದ ಪಂಚಾಯಿತಿ ಆಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಸಾಮಾನ್ಯ ಸಭೆ ನಡೆಯುವ ವೇಳೆ ಕಚೇರಿ ಮುಂದೆ ಸಂತ್ರಸ್ತ ಅರ್ಜಿದಾರರು ತಮ್ಮ ಅಳಲು ತೋಡಿ ಕೊಂಡರು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಹ ಬೊಮ್ಮರಸನಹಳ್ಳಿಯ ಸರ್ವೇ ನಂಬರ್ 101/2 ಜಮೀನು ಜಿಲ್ಲಾಧಿಕಾರಿಗಳ ಹೆಸರಿನಲ್ಲಿದೆ. ಅಭಿವೃದ್ದಿ ಕೆಲಸಕ್ಕೆ ಮೀಸಲು ಇದ್ದ ಈ ಜಮೀನಲ್ಲಿ ನಾಲ್ಕು ಎಕರೆ ವಸತಿ ಹಿನರಿಗೆ ಹಂಚಿಕೆ ಮಾಡಲು ಸೂಚಿಸಿ ಹಸ್ತಾಂತರ ಮಾಡಿದರೂ ಬಡವರಿಗೆ ನಿವೇಶನ ನೀಡಲಾಗಿಲ್ಲ ಎಂಬ ವಿಚಾರ ಪ್ರಸ್ತಾಪವಾಗಿದೆ. ಈ ಬಗ್ಗೆ ಸೂಕ್ತ ಉತ್ತರಕ್ಕಾಗಿ ಅರ್ಜಿದಾರರು ಕಾದು ಕುಳಿತು ನಂತರ ಸುದ್ದಿಗಾರರ ಜತೆ ತಮ್ಮ ಅಳಲು ತೋಡಿಕೊಂಡರು.

ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ಹಲವು ವರ್ಷದಿಂದ ಅರ್ಜಿ ಹಾಕಿ ನಿವೇಶನಕ್ಕೆ ಕಾದು ಕುಳಿತಿದ್ದೇವೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮೀಸಲು ಜಮೀನು ಪರಿವರ್ತನೆ ಮಾಡಿ ನಿವೇಶನ ವಿಂಗಡನೆ ಮಾಡಲು ಮೀನಾ ಮೇಷ ಎಣಿಸಲು ಸೂಕ್ತ ಉತ್ತರ ನೀಡಬೇಕು. ಸರ್ಕಾರ ಜಮೀನು ನೀಡಿದರೂ ಸ್ಥಳೀಯ ಸಂಸ್ಥೆ ಪಂಚಾಯಿತಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

Advertisements

ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್ ಮಾತನಾಡಿ ಜಿಲ್ಲಾಧಿಕಾರಿಗಳು ಮೀಸಲು ಜಮೀನು ವಸತಿ ಯೋಜನೆಗೆ ಒಳಪಡಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸೂಚಿಸಲಾಗಿದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಹೇಳುತ್ತಿರುವುದು ನಮ್ಮಗಳ ವಿಪರ್ಯಾಸ ಎಂದು ಅಳಲು ತೋಡಿಕೊಂಡರು.

ಸಂತ್ರಸ್ತ ಅರ್ಜಿದಾರರು ಕೂಡಲೇ ನಿವೇಶನ ಹಂಚಿಕೆ ಮಾಡಿ ಬಡವರಿಗೆ ವಸತಿ ಕರುಣಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಒತ್ತಡ ಹೇರಿದರು.

ಸಂತ್ರಸ್ತರ ಅಳಲು ಆಲಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕಾರ ಪ್ರಸಾದ್ ಮಾತನಾಡಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೊಮ್ಮರಸನಹಳ್ಳಿ, ಸಾಗರನಹಳ್ಳಿ, ಕೋಡಿ ನಾಗೇನಹಳ್ಳಿ ಗ್ರಾಮದಲ್ಲಿ ನಿವೇಶನಕ್ಕೆ ಜಮೀನು ಮೀಸಲಿಟ್ಟು ಪಂಚಾಯಿತಿಗೆ ನೀಡಿದೆ. ಆದರೆ ಕೆಲ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಜೊತೆಗೆ ಸಂಪನ್ಮೂಲ ಕೊರತೆ ಹಿನ್ನಲೆ ತಡವಾಗಿದೆ. ಭೂ ಪರಿವರ್ತನೆ ಆಗಿ ನಿವೇಶನ ಹಂಚಿಕೆ ಆಗಬೇಕು. ಸರ್ಕಾರದ ಆದೇಶ ಬಂದು ಒಂದು ತಿಂಗಳು ಆಗಿದೆ. ನಿಯಮಾನುಸಾರ ಕ್ರಮವಾಗಿ ನಡೆಯಲು ಸಮಯ ಬೇಕಿದೆ. ನ್ಯಾಯಾಲಯ ಮೆಟ್ಟಿಲೇರಿರುವ ಜಮೀನಿನಲ್ಲಿ ನಾವು ನಿವೇಶನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X