ಗುಬ್ಬಿ | ಹಂದಿ ಜೋಗರ ಕಾಲೋನಿಗೆ ಉಪ ಲೋಕಾಯುಕ್ತರ ಭೇಟಿ : ಎಲ್ಲಾ ಸಂತ್ರಸ್ತ ಕುಟುಂಬಕ್ಕೆ ವಸತಿ ಕಲ್ಪಿಸುವ ಭರವಸೆ

Date:

Advertisements

ಗುಬ್ಬಿ ಪಟ್ಟಣದ ಹಂದಿ ಜೋಗರ ಕಾಲೋನಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅಲ್ಲಿನ ವಾಸ್ತವ ಚಿತ್ರಣ ಪರಿಶೀಲಿಸಿ ಪ್ರತಿ ಗುಡಿಸಲಿನ ಸಂತ್ರಸ್ತರ ಜೊತೆ ಚರ್ಚಿಸಿ ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ವಸತಿ ಕಲ್ಪಿಸುವ ಭರವಸೆ ನೀಡಿದರು.

ಗುಬ್ಬಿ ಪಟ್ಟಣದ ಪೊಲೀಸ್ ಠಾಣೆ ಹಿಂಬದಿಯ ಮಾರನಕಟ್ಟೆ ಕೆರೆಯ ಬದಿಯಲ್ಲಿ ವಾಸಿಸುವ ಅಲೆಮಾರಿ ಹಂದಿ ಜೋಗ ಸಮುದಾಯದ ಸುಮಾರು 45 ಕುಟುಂಬಗಳ ಅವ್ಯವಸ್ಥೆ ವೀಕ್ಷಣೆ ಮಾಡಿದ ಉಪ ಲೋಕಾಯುಕ್ತರು ನಿವಾಸಿಗಳ ಜೊತೆ ಮಾತನಾಡಿ ಮಳೆ ಬಂದಾಗ ಗುಡಿಸಲುಗಳು ಮುಳುಗಡೆಯಾಗುತ್ತದೆ. ಬದುಕು ಮೂರಾಬಟ್ಟೆ ಆಗಿರುವ ಬಗ್ಗೆ ತಿಳಿದುಕೊಂಡರು. ಕೆರೆಯ ದಡದಲ್ಲಿ ಎಲ್ಲಾ ಗುಡಿಸಲು, ಶೆಡ್ ಬಳಿ ತೆರಳಿ ಸಂತ್ರಸ್ತರನ್ನು ಖುದ್ದು ಮಾತನಾಡಿಸಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸುರಕ್ಷತೆ ಇಲ್ಲದ ಈ ಸ್ಥಳದಿಂದ ಕೂಡಲೇ ಶಿಫ್ಟ್ ಮಾಡಿ ಅವರಿಗೆ ವಸತಿ ಊಟದ ವ್ಯವಸ್ಥೆಗೆ ಸೂಚಿಸಲಾಗಿತ್ತು. ಈ ಕಾರ್ಯ ಎರಡು ದಿನದ ಹಿಂದೆ ನಡೆದಿದೆ. ಆದರೆ ಕೆರೆಯ ಈ ಜಾಗದಲ್ಲಿ ಇವರು ಇರುವುದು ಸೂಕ್ತವಲ್ಲ. ಅವರನ್ನು ಕೂಡಲೇ ಮೂಲಭೂತ ಸವಲತ್ತು ಜೊತೆಯಲ್ಲಿ ವಸತಿಯನ್ನು ನಿರ್ಮಿಸಿ ಸಾತೇನಹಳ್ಳಿ ಬಳಿಯ ನಿವೇಶನಗಳತ್ತ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಾಸ್ತವ ಚಿತ್ರಣ ಕಂಡು ಬಳಿಕ ಸಂತ್ರಸ್ಥರೊಂದಿಗೆ ಮಾತನಾಡಿ ಅಲೆಮಾರಿ ಕುಟುಂಬಗಳಿಗೆ ಮಂಜೂರಾದ ನಾಲ್ಕು ಎಕರೆ ಜಾಗದಲ್ಲಿ 72 ನಿವೇಶನ ಹಂಚಿಕೆ ಆಗಲಿದೆ. ಈ ಪೈಕಿ ಈಗಾಗಲೇ ಗುರುತಿಸಲಾದ 65 ಕುಟುಂಬಗಳನ್ನು ಅಲ್ಲಿಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 15 ಮಂದಿಗೆ ಹಕ್ಕುಪತ್ರ ನೀಡಲಾಗಿದ್ದು, ಉಳಿದವರಿಗೂ ಹಕ್ಕುಪತ್ರ ಸಿಗಲಿದೆ. ಹಂತ ಹಂತವಾಗಿ ಎಲ್ಲಾ ಸಂತ್ರಸ್ತ ಕುಟುಂಬ ಶಿಫ್ಟ್ ಮಾಡಿ ಕೆರೆಯ ಜಾಗವನ್ನು ಕೆರೆಯಾಗಿ ಉಳಿಸುವುದಾಗಿ ತಿಳಿಸಿದ ಅವರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಚಿಂತಿಸಿ ಕೂಡಲೇ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಬೇಕು. ಇಲ್ಲಿನ ಮಕ್ಕಳಿಗೆ ವಸತಿ ಶಾಲೆಗೆ ಸೇರಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇವೆ ಎಂದರು.

Advertisements
1000567680

ಸಂತ್ರಸ್ತ ಹಂದಿ ಜೋಗರ ಕುಟುಂಬದ ಜೊತೆ ತೆಲುಗಿನಲ್ಲೇ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಎಲ್ಲರಿಗೂ ನಿವೇಶನ ಹಂಚಿ ವಸತಿ ಕಲ್ಪಿಸುವ ಭರವಸೆ ನೀಡಿ ನಂತರ ಸಂತ್ರಸ್ತರಿಗೆ ವಸತಿ ಊಟ ವ್ಯವಸ್ಥೆ ಮಾಡಿದ್ದ ಬಾಬು ಜಗಜೀವನ ರಾಂ ಭವನಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ನಂತರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ, ಉಗ್ರಾಣ, ವಾರ್ಡ್ ಗಳ ಸ್ಥಿತಿ, ವೈದ್ಯರು ಹಾಗೂ ರೋಗಿಗಳ ಜೊತೆ ಮಾತನಾಡಿ ಅಗತ್ಯ ಸೌಕರ್ಯ ಬಗ್ಗೆ ಚರ್ಚಿಸಿ ನೇರ ಸಾತೇನಹಳ್ಳಿ ಬಳಿಯ ಹಂದಿ ಜೋಗರಿಗೆ ಮೀಸಲಿಟ್ಟ ನಿವೇಶನಗಳ ಜಾಗಕ್ಕೆ ತೆರಳಿ ವ್ಯವಸ್ಥೆಯನ್ನು ಪರಿಶೀಲಿಸಿದರು.

1000567692 1

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಯಂತ್ ಕುಮಾರ್, ನೂರುನ್ನೀಸಾ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X