ಗುಬ್ಬಿ | ದಲಿತರಿಗೆ ಕ್ಷೌರ ಮಾಡುವುದಿಲ್ಲವೆಂಬ ಅಸ್ಪೃಶ್ಯತೆ ಆಚರಣೆ; ತೆರೆ ಎಳೆದ ಗುಬ್ಬಿ ತಹಶೀಲ್ದಾರ್

Date:

Advertisements

ದಲಿತರಿಗೆ ಕ್ಷೌರ ಮಾಡುವುದಿಲ್ಲವೆಂಬ ವಿಚಾರ ಪೊಲೀಸರು ಮತ್ತು ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಚರ್ಚೆಯಾದ ಹಿನ್ನಲೆಯಲ್ಲಿ ತಹಶೀಲ್ದಾರ್ ಬಿ ಆರತಿ ಹಾಗೂ ಸಿಪಿಐ ಗೋಪಿನಾಥ್ ಸ್ಥಳಕ್ಕೆ ಧಾವಿಸಿ ಕ್ಷೌರಿಕರಿಗೆ ಬುದ್ಧಿ ಹೇಳಿ ಕೂಡಲೇ ಅಸ್ಪೃಶ್ಯತೆಯ ಮೌಢ್ಯವನ್ನು ಅಳಿಸಿದ್ದು, ದಲಿತರಿಗೆ ಕ್ಷೌರ ಮಾಡಿಸಿದ ಘಟನೆ ತಾಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ.

ಅಮ್ಮನಘಟ್ಟ ಗ್ರಾಮದಲ್ಲಿ ಕ್ಷೌರಿಕನೊಬ್ಬ ನಮ್ಮ ಪೂರ್ವಜರು ದಲಿತರಿಗೆ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡುತ್ತಿರಲಿಲ್ಲ. ಅದೇ ಪದ್ಧತಿ ಮುಂದುವರೆಸಿದ್ದ ಹಿನ್ನಲೆ ಈ ಬಗ್ಗೆ ದಲಿತರ ಸಭೆಯಲ್ಲಿ ಮುಖಂಡರು ಖಂಡಿಸಿ ಚರ್ಚಿಸಿದ್ದರು. ಎಷ್ಟು ಬಾರಿ ಹೇಳಿದ್ದರೂ ಹಟಕ್ಕೆ ಬಿದ್ದಂತೆ ದಲಿತರನ್ನು ಅಂಗಡಿಗೆ ಬಾರದಂತೆ ಮಾಡಿದ್ದ ಹಿನ್ನಲೆ ಸಭೆಯ ವಿಚಾರ ಗಂಭೀರ ಸ್ವರೂಪ ಪಡೆದು ತಹಶೀಲ್ದಾರ್ ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಬುದ್ಧಿವಾದ ಹೇಳಿ ಕಾನೂನು ಬಗ್ಗೆ ಅರಿವು ಮೂಡಿಸಿ ತಕ್ಷಣ ದಲಿತರಿಗೆ ಶೇವಿಂಗ್ ಮಾಡುವಂತೆ ಹೇಳಿ ಸ್ಥಳದಲ್ಲೇ ಎಲ್ಲಾ ಮೌಢ್ಯತೆಗೆ ತೆರೆ ಎಳೆದರು.

ಶಿರಾದಲ್ಲಿ ನಡೆದ ಡಿವೈಎಸ್ಪಿ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ
ಪ್ರಸ್ತಾಪವಾದ ಹಿನ್ನಲೆ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ತಂಡದಲ್ಲಿ ಕಂದಾಯ ನಿರೀಕ್ಷಕ ಕುಮಾರ್, ಪಿಎಸ್ಐ ಸುನೀಲ್ ಕುಮಾರ್ ಸೇರಿದಂತೆ ಗ್ರಾಮ ಲೆಕ್ಕಿಗರು ಇದ್ದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X