ಗುಬ್ಬಿ | ಮನರೇಗಾ ಕಾಮಗಾರಿಯಲ್ಲಿ ಅಕ್ರಮ ಆರೋಪ: ಕೆಲಸ ಮಾಡದೆ ಹಣ ಪಡೆದಿರುವುದಾಗಿ ಗ್ರಾಮಸ್ಥರಿಂದ ದೂರು

Date:

Advertisements

ಮಹತ್ವಾಕಾಂಕ್ಷೆಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ನಾಲ್ಕು ಲಕ್ಷದ ಕಾಮಗಾರಿಯನ್ನು ನಿರ್ವಹಿಸದೆ, ಬಿಡುಗಡೆಯಾದ ಹಣ ಗುಳುಂ ಮಾಡಿರುವ ಪ್ರಕರಣ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

2023-24 ನೇ ಸಾಲಿನ ಮನರೇಗಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು ಆರು ಲಕ್ಷದ ಅಂದಾಜು ಪಟ್ಟಿ ಸಿದ್ಧಪಡಿಸಿ ಅದರಲ್ಲಿ ಮಂಜೂರಾದ ನಾಲ್ಕು ಲಕ್ಷದ ಕಾಮಗಾರಿಗೆ ಎಂಎಂಎಸ್, ಜಿಪಿಎಸ್ ಮಾಡಿಲ್ಲ, ಸ್ಥಳೀಯ ಗ್ರಾಪಂ ಸದಸ್ಯರಿಗೆ ತಿಳಿದಿಲ್ಲ, ಪಿಡಿಓ ಸ್ಥಳಕ್ಕೆ ಬಂದಿಲ್ಲ, ಸಂಬಂಧಪಟ್ಟ ಇಂಜಿನಿಯರ್ ಸ್ಥಳಕ್ಕೆ ಬಂದೇ ಇಲ್ಲ, ಅಂದಾಜು ಪಟ್ಟಿಗೆ ಅಧಿಕಾರಿಗಳ ಸಹಿ ಆಗಿಲ್ಲ ಇಷ್ಟೆಲ್ಲದರ ಮಧ್ಯೆ ಕೆಲಸವೇ ನಡೆಯದೇ ಜಾಬ್ ಕಾರ್ಡ್ ದಾರರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಗುಳುಂ ಮಾಡಿದ ಪ್ರಕರಣ ಹಾರನಹಳ್ಳಿ ಗ್ರಾಮಸ್ಥರಿಗೆ ಆಕ್ರೋಶ ಮೂಡಿಸಿದೆ.

ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲಾಭಿವೃದ್ಧಿ ಅತ್ಯಗತ್ಯ ಆಗಬೇಕಿದೆ. ಈ ಹಿನ್ನಲೆ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದ ಶಾಲೆಗೆ ಆಟದ ಮೈದಾನ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಯೋಜನೆಯ ಎಲ್ಲಾ ದಾಖಲೆ ಪ್ರಕ್ರಿಯೆ ಮುಗಿಸಿ ರಜೆ ದಿನ ಶಾಲೆಯ ಆವರಣದಲ್ಲಿ ಗೋಡೆ ಬರಹವನ್ನು ಬಣ್ಣ ಬಣ್ಣವಾಗಿ ಬರೆದು ಕಾಮಗಾರಿ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ಈ ಗೋಡೆ ಬರಹವನ್ನು ಕಂಡ ಶಾಲಾ ಶಿಕ್ಷಕರಿಗೂ ಅಚ್ಚರಿ ತಂದಿದೆ.

Advertisements

ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗೆ ಶಾಕ್ ನೀಡಿದೆ. ಈ ಯೋಜನೆಯ ಫಲಕ ತಿಳಿಸಿದಂತೆ ಇದು ವ್ಯವಸ್ಥಿತ ರೀತಿ ಅಕ್ರಮ ಮಾಡಲಾಗಿದೆ. ಈ ಕಾಮಗಾರಿ ಬಗ್ಗೆ ಪಿಡಿಓ ಕವಿತಾ ಅವರನ್ನು ಕೇಳಿದಾಗ ಅನಿವಾರ್ಯ ನಡೆದಿದೆ ಬಿಡಿ ಎನ್ನುವ ಹಾರಿಕೆ ಉತ್ತರ ನೀಡಿದರು. ಸಂಬಂಧಪಟ್ಟ ಇಂಜಿನಿಯರ್ ಗೋವಿಂದರಾಜು ಅವರನ್ನು ವಿಚಾರಿಸಿದಾಗ ಅವರು ಸಹ ಕೆಲಸ ಮಾಡುತ್ತಾರೆ ಬಿಡಿ ಎನ್ನುವ ಉಡಾಫೆ ಮಾತು ಹೇಳಿದ್ದಾರೆ. ಈ ಹಣ ಹೊಡೆಯಲು ಅಧಿಕಾರಿಗಳೇ ಭ್ರಷ್ಟಾಚಾರವೆಸಗಿದ್ದಾರೆ ಎಂದು ಸ್ಥಳೀಯ ಗ್ರಾಪಂ ಸದಸ್ಯ ಪ್ರದೀಪ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಬದುಕಿಗೆ ಅಧಾರವಾಗಬೇಕು. ಆದರೆ ಅದನ್ನೇ ದುರುಪಯೋಗ ಮಾಡಿಕೊಂಡು ಅನುಷ್ಠಾನ ಮಾಡಬೇಕಾದ ಅಧಿಕಾರಿಗಳೇ ಹಣ ಗುಳುಂ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ಗ್ರಾಪಂ ಸದಸ್ಯರಾದ ಪ್ರದೀಪ್, ವೆಂಕಟೇಶ್, ಭೀಮೇಶ್, ಎನ್.ಬಿ.ರಾಜಶೇಖರ್, ಮುಖಂಡರಾದ ಮುನಿಯಪ್ಪ, ಓಂಕಾರ್ ಇತರರು ಪ್ರಶ್ನಿಸಿದ್ದಾರೆ.

WhatsApp Image 2024 08 30 at 6.34.58 PM 1

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಬದುಕು ಕಟ್ಟಿಕೊಡುವ ನರೇಗಾ ಯೋಜನೆಯ ಹಣವನ್ನು ನುಂಗುವುದು ಸರಿಯಲ್ಲ.
ಹಾರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಸ್ಥಳೀಯ ಯಾವುದೇ ಮುಖಂಡರ ಗಮನಕ್ಕೆ ಬಾರದೆ ಶಾಲಾಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಕೆಲಸ ಮಾಡದೆ ಹಣ ಹೊಡೆದಿರುವುದು ತಿಳಿದು ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರ ಅಸಹ್ಯ ಹುಟ್ಟಿಸಿದೆ. ಬೋಗಸ್ ಬಿಲ್ ಬೆಲವತ್ತ ಗ್ರಾಮ ಪಂಚಾಯಿತಿಗೆ ಅವಮಾನ ಉಂಟು ಮಾಡಿದೆ. ಕೆಲಸ ಮಾಡದೆ ಜಾಬ್ ಕಾರ್ಡ್ ದಾರರ ಖಾತೆಗೆ 88 ಸಾವಿರ ಹಣ ವರ್ಗಾವಣೆ ಆಗಿರುವುದು ಜೊತೆಗೆ ಇಂಜಿನಿಯರ್ ಪಿಡಿಓ ಒಗ್ಗೂಡಿ ಅವರಿಗೆ ಬೇಕಾದ ಚೇಳೂರು ಭಾಗದ ಗುತ್ತಿಗೆದಾರರೊಬ್ಬರಿಗೆ ಕೆಲಸ ನೀಡಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಹೇಳಿದ್ದಾರೆ.

ವರದಿ: ಎಸ್. ಕೆ. ರಾಘವೇಂದ್ರ ಗುಬ್ಬಿ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X