ಗುಬ್ಬಿ | ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ರೀತಿ ಸರಿಯಿಲ್ಲ : ತಾಲೂಕು ಕಚೇರಿ ಸಭೆಯಲ್ಲಿ ಸಾರ್ವಜನಿಕರ ಆರೋಪ

Date:

Advertisements

ಮೈಕ್ರೋ ಫೈನಾನ್ಸ್ ಸಾಲ ನೀಡಿ ನಂತರ ವಸೂಲಾತಿಗೆ ತೀವ್ರ ದುರ್ವರ್ತನೆ ತೋರುತ್ತಾರೆ. ಮನೆಯ ಬಳಿ ಸಾಲಗಾರರಿಗೆ ಅವಮಾನ ಮಾಡುವುದು, ಮನೆ ಸೀಜ್ ಮಾಡುವುದು ಜತೆಗೆ ಲಾಯರ್ ನೋಟೀಸ್, ಗೂಂಡಾವರ್ತನೆ ಮೂಲಕ ಬಡ್ಡಿ ವಸೂಲಿ, ನಾನಾ ಕಾರಣ ನೀಡಿ ಮೀಟರ್ ಬಡ್ಡಿ ವಸೂಲಿ ಹೀಗೆ ಹತ್ತು ಹಲವು ವಿಚಾರ ಪ್ರಸ್ತಾಪಿಸಿದ ಸ್ಥಳೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ವಸೂಲಾತಿ ರೀತಿ ಸರಿ ಪಡಿಸಿಕೊಂಡು ವ್ಯವಹರಿಸಲು ಆಗ್ರಹಿಸಿದರು.

ಗುಬ್ಬಿ ಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ಆರತಿ ಹಾಗೂ ಡಿವೈಎಸ್ಪಿ ಶೇಖರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಜರಿದ್ದು ಸರ್ಕಾರ ವಿಧಿಸಿರುವ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ನಿಯಮಗಳನ್ನು ಚರ್ಚಿಸಿದರು.

ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ರೋಸು ಹೋದ ಹಲವು ಪ್ರಕರಣಗಳನ್ನು ಸಭೆಯಲ್ಲಿ ಚರ್ಚಿಸಿದ ಮುಖಂಡರು ಸಾಲ ವಸೂಲಿ ಮಾಡುವ ಸಿಬ್ಬಂದಿಗಳೇ ಹಣ ಲಪಟಾಯಿಸಿದ ಪ್ರಕರಣ, ಸಾಲ ಪಡೆದಾತ ಮೃತಪಟ್ಟು ಒಂದು ವಾರದಲ್ಲೇ ಮನೆಯನ್ನು ಸೀಜ್ ಮಾಡುವುದು, ಮನೆ ಬಾಗಿಲಲ್ಲಿ ಅವಾಚ್ಯ ಶಬ್ದಗಳಿಂದ ಬೈದ ಘಟನೆ, ರಾತ್ರಿ ವೇಳೆ ಬಾಗಿಲು ತಟ್ಟುವ ಬಗ್ಗೆ ಕಿಡಿಕಾರಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯ ಹುಡುಗರಿಗೆ ಉದ್ಯೋಗ ನೀಡಿ ಅವರಿಂದಲೇ ಗ್ರಾಹಕರಿಗೆ ನಿಂದನೆ ಮಾಡಿಸುವ ಮೈಕ್ರೋ ಫೈನಾನ್ಸ್ ವ್ಯವಸ್ಥಿತ ಲೂಟಿಕೋರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

ಡಿವೈಎಸ್ಪಿ ಶೇಖರ್ ಮಾತನಾಡಿ ಸಾಲ ವಸೂಲಿಗೆ ಬರುವ ಸಿಬ್ಬಂದಿಗಳ ವರ್ತನೆ ಸರಿ ಇರಬೇಕು. ಫೈನಾನ್ಸ್ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವ ವೇಳೆ ಆತನ ಹಿನ್ನಲೆ ತಿಳಿಯಬೇಕು. ನಡತೆ ಬಗ್ಗೆ ಪೊಲೀಸ್ ಹಿನ್ನಲೆ ಕೂಡಾ ಪರಿಶೀಲಿಸಬೇಕು. ರೌಡಿ ಚಟುವಟಿಕೆಯ ವ್ಯಕ್ತಿಗಳಿಗೆ ಕೆಲಸ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಲ್ಲಿ ಫೈನಾನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಟಾರ್ಚರ್ ನೀಡಿದ ದೂರುಗಳು ಬರುತ್ತಿವೆ. ಸರ್ಕಾರ ಸೂಚಿಸಿದಂತೆ ಸಿಬ್ಬಂದಿಗಳ ವರ್ತನೆ ಬಗ್ಗೆ ದೂರು ಬಾರದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಬಗ್ಗೆ ಸರ್ಕಾರ ನಿಯಮಗಳನ್ನು ಸೂಚಿಸಿದೆ. ಅದರಂತೆ ನಡೆದುಕೊಂಡು ಸಾಲ ವಸೂಲಿ ಮಾಡಬೇಕಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರೊಳಗೆ ಮಾತ್ರ ವಸೂಲಿ ಕೆಲಸ ಮಾಡಬೇಕಿದೆ. ಗ್ರಾಹಕರ ಬಳಿ ಸರಿಯಾದ ವರ್ತನೆಯಲ್ಲಿ ಹಣ ಕೇಳಬೇಕಿದೆ. ಮನಬಂದಂತೆ ಮಾತುಗಳು, ಅವಾಚ್ಯ ಶಬ್ದಗಳಿಂದ ನಿಂದನೆ, ವಸ್ತುಗಳ ಸೀಜ್, ಹರಾಜು ಪ್ರಕ್ರಿಯೆ ಹೀಗೆ ಮಾನಸಿಕ ಹಿಂಸೆ ನೀಡಿದಲ್ಲಿ ಕಾನೂನು ಕ್ರಮಕ್ಕೆ ಸರ್ಕಾರ ಸೂಚಿಸಿದೆ ಎಂದು ನಿಯಮಾವಳಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್, ಸಿಪಿಐ ಗೋಪಿನಾಥ್, ಗುಬ್ಬಿ ಪಿಎಸ್ಐ ಸುನೀಲ್ ಕುಮಾರ್, ಸಿ.ಎಸ್.ಪುರ ಪಿಎಸ್ಐ ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಮುಖಂಡರಾದ ಎಚ್.ಟಿ.ಭೈರಪ್ಪ, ಸಿ.ಆರ್.ಶಂಕರ್ ಕುಮಾರ್, ಬಿ.ಲೋಕೇಶ್, ಜಿ.ಆರ್.ರಮೇಶ, ಡಿ.ರಘು, ಜಿ.ವಿ.ಮಂಜುನಾಥ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X