ಗುಬ್ಬಿ | ಗ್ರಾಹಕರಿಗೆ ಸ್ಪಂದಿಸದ ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು : ದಿಢೀರ್ ಪ್ರತಿಭಟನೆ ನಡೆಸಿದ ಕನ್ನಡ ವಿಜಯಸೇನೆ

Date:

Advertisements

ಗ್ರಾಹಕರ ಬಳಕೆಗೆ ಬಾರದ ಎಟಿಎಂ ಯಂತ್ರ ನಿರ್ವಹಣೆ ಬಗ್ಗೆ ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು ಅಸಡ್ಡೆ ಉತ್ತರ ನೀಡಿ ಗ್ರಾಹಕರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳಲ್ಲಿ ಬಹುತೇಕ ಕನ್ನಡ ಬಾರದ ಸಿಬ್ಬಂದಿಗಳಿದ್ದು ಗ್ರಾಮೀಣ ಗ್ರಾಹಕರಿಗೆ ಸರಿಯಾದ ಉತ್ತರ ಸಿಗದೆ ಬೇಸರ ವ್ಯಕ್ತಪಡಿಸುತ್ತಿರುವ ಘಟನೆ ಸೇರಿದಂತೆ ಬಹಳ ವಿಚಾರದಲ್ಲಿ ರೋಸಿಹೋದ ಗ್ರಾಹಕರ ಪರವಾಗಿ ಕನ್ನಡ ವಿಜಯಸೇನೆ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಬ್ಯಾಂಕ್ ಮುಂದೆ ಜಮಾಯಿಸಿದ ವಿಜಯಸೇನೆ ಕಾರ್ಯಕರ್ತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಮೇಲಾಧಿಕಾರಿ ಎಜಿಎಂ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಧರಣಿ ಮುಂದುವರೆಸಿದರು. ಗುಬ್ಬಿ ಪಟ್ಟಣದಲ್ಲಿ ಎರಡು ಎಸ್ ಬಿಐ ಬ್ಯಾಂಕ್ ಶಾಖೆಗಳಿದ್ದು ಪೊಲೀಸ್ ಠಾಣೆ ಪಕ್ಕದಲ್ಲಿ ಹೊಸ ಶಾಖೆ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಇಲ್ಲಿನ ಎಟಿಎಂ ದಿನ ಪೂರ್ತಿ ಕೆಲಸ ಮಾಡಿಲ್ಲ. ವಾರಾಂತ್ಯದ ರಜೆ ಹಾಗೂ ಹಬ್ಬಗಳ ರಜೆಯಲ್ಲಿ ಎಟಿಎಂ ಸಂಪೂರ್ಣ ಬಾಗಿಲು ಮುಚ್ಚಲಾಗುತ್ತಿದೆ. ಡಿಜಿಟಲ್ ಯುಗದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಮಾಡುವ ಮಾತುಗಳನ್ನು ಹೇಳುವ ಬ್ಯಾಂಕ್ ಅಧಿಕಾರಿಗಳು ಅವರ ಎಟಿಎಂ ಬಾಗಿಲು ಹಾಕುತ್ತಿರುವುದು ವಿಷಾದನೀಯ. ಈ ಹಿನ್ನಲೆ ಬ್ಯಾಂಕ್ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಹಕರ ಕಷ್ಟ ಆಲಿಸಬೇಕು ಎಂದು ಕನ್ನಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ವಿನಯ್ ಆಗ್ರಹಿಸಿದರು.

ಎಟಿಎಂ ಯಂತ್ರಗಳಲ್ಲಿ ಹಣದ ವ್ಯವಹಾರ ಮಾಡಲಾಗದೆ ಸ್ಥಳೀಯರು ಸಾಕಷ್ಟು ಪರದಾಡಿದ್ದಾರೆ. ಆಸ್ಪತ್ರೆಯ ವೆಚ್ಚಕ್ಕೆ ಡಿಪಾಸಿಟ್ ಮಾಡಲು ಹಲವು ಮಂದಿ ಎಟಿಎಂ ಹುಡುಕಿ ಅಲೆದಾಡಿದ್ದು ಪ್ರತಿ ವಾರದ ಅಂತ್ಯದಲ್ಲಿ ಮಾಮೂಲಿಯಾಗಿ ಕಾಣುತ್ತಿದೆ. ಡಿಜಿಟಲ್ ವ್ಯವಹಾರ ಎಂದು ಹೇಳುವ ಬ್ಯಾಂಕ್ ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ಎಟಿಎಂ ನಿರ್ವಹಣೆ ಮಾಡುವ ಏಜೆನ್ಸಿ ಹೆಸರು ಹೇಳಿ ಜಾಣ ಮೌನ ವಹಿಸುತ್ತಾರೆ. ಯಂತ್ರಗಳು ಕೆಟ್ಟು ನಿಂತರೆ ಕೂಡಲೇ ದುರಸ್ಥಿ ಮಾಡದ ಏಜೆನ್ಸಿ ಗ್ರಾಹಕರಿಂದ ದೂರು ಬಂದ ಮೇಲೂ ಇತ್ತ ಕಡೆ ಗಮನಹರಿಸುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ಏಜೆನ್ಸಿಗೆ ಕೂಡಲೇ ದುರಸ್ಥಿಗೆ ಕರೆಯುವ ಜವಾಬ್ದಾರಿ ಹೊರಬೇಕಿದೆ ಎಂದು ವಿಜಯಸೇನೆ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜುನಾಥ್ ಒತ್ತಾಯಿಸಿದರು.

Advertisements

ಪ್ರತಿಭಟನೆ ವಿಚಾರ ತಿಳಿದ ಬಳಿಕ ಎಚ್ಚೆತ್ತ ಅಧಿಕಾರಿಗಳಿಂದ ಎಟಿಎಂ ದುರಸ್ಥಿ ಕೆಲಸ ಆರಂಭಿಸಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ವಾಗ್ದಾನ ಬಳಿಕ ವಿಜಯಸೇನೆ ಪ್ರತಿಭಟನೆ ಸ್ಥಗಿತ ಗೊಳಿಸಿದರು.

ಪ್ರತಿಭಟನೆಯಲ್ಲಿ ವಿಜಯಸೇನೆ ಯುವ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಅರಸ್ ಗೌಡ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸುರಿಗೇನಹಳ್ಳಿ ರಂಗನಾಥ್, ಸೇನೆಯ ಸದಸ್ಯರಾದ ರಮೇಶ್ ಜಿಡ್ರಾ, ತೇಜಸ್, ಸಜ್ಜು, ಶ್ರೀಧರ್, ಗೌತಮ್, ಯಶಸ್ಸು, ಮದನ್, ಕುಶಲ್, ಮಹಮದ್ ಗೌಸ್,

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X