ಗುಬ್ಬಿ | ಎರಡನೇ ಪತ್ನಿ, ಮಗುವಿಗೆ ವಿಷ ಪ್ರಾಷಣ : ಮೊದಲ ಪತ್ನಿ ಜೊತೆ ಜೈಲು ಸೇರಿದ ಪತಿರಾಯ

Date:

Advertisements

ತನ್ನ ಮಗುವಿಗೆ ವಿಷ ಉಣಿಸಿ ತಾನು ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಾಥಮಿಕ ವರದಿಯ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿರಾಯನೇ ಮೊದಲ ಪತ್ನಿಯ ಒತ್ತಾಯಕ್ಕೆ ಎರಡನೇ ಪತ್ನಿ ಹಾಗೂ ಆಕೆಯ ಪುಟ್ಟ ಮಗುವಿಗೆ ವಿಷವುಣಿಸಿ ಕೊಲೆ ನಡೆಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತ್ಯಾಗಟೂರು ಗೇಟ್ ಬಳಿಯಲ್ಲಿ ವಾಸವಾಗಿದ್ದ ಇಂದ್ರಮ್ಮ ಎಂಬ ಮಹಿಳೆಯ ಎರಡನೇ ಸಂಸಾರದ ಕತೆಗೆ ಆಕೆಯ 6 ವರ್ಷದ ಹೆಣ್ಣು ಮಗು ದೀಕ್ಷಿತ ಏನೂ ಅರಿಯದೆ ವಿಷ ತಿಂದು ಪ್ರಾಣ ಚೆಲ್ಲಿದೆ. ಈ ಜೊತೆಗೆ ಎರಡನೇ ಪತಿರಾಯ ಯತೀಶ್ ನನ್ನು ನಂಬಿ ಬಂದ ಮಹಿಳೆ ಇಂದ್ರಮ್ಮನಿಗೂ ವಿಷ ಪ್ರಾಷಣ ಮಾಡಿ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ಕಳೆದೆರೆಡು ದಿನದಿಂದ ರೋಚಕ ತಿರುವು ಪಡೆದುಕೊಂಡಿದೆ.

ಎರಡನೇ ಪತ್ನಿ ಇಂದ್ರಮ್ಮನ ಜೊತೆ ನಿಟ್ಟೂರು ಹೋಬಳಿಯ ಬೊಮ್ಮರಸನಹಳ್ಳಿ ಗ್ರಾಮದ ಯತೀಶ್ ಎಂಬಾತ ಎರಡನೇ ಸಂಬಂಧದ ಬಗ್ಗೆ ಧರ್ಮಪತ್ನಿ ವಿಜಯ ಅವರಿಗೂ ಗೊತ್ತಿದ್ದು, ಕಾಲಕ್ರಮೇಣ ಎರಡನೇ ಸಂಬಂಧವನ್ನು ಕಡಿತ ಮಾಡಿಕೊಳ್ಳಲು ಒತ್ತಾಯ ಬಂದಿತ್ತು. ಮೊದಲ ಪತ್ನಿ ವಿಜಯ ಚಿತಾವಣೆಗೆ ಯತೀಶ್ ಎರಡನೇ ಪತ್ನಿ ಹಾಗೂ ಮಗುವಿಗೆ ವಿಷ ಹಾಕಿ ತಾನು ವಿಷ ಸೇವಿಸಿದ ಹೈಡ್ರಾಮಾ ಸಂಚು ನಡೆದಿತ್ತು. ಆದರೆ ಗುಬ್ಬಿ ಪೊಲೀಸರ ತನಿಖೆಯಿಂದ ಇಡೀ ಸಂಚು ಬಯಲಿಗೆ ಬಂದಿದೆ.

Advertisements

ಕಳೆದ ಎರಡು ದಿನಗಳ ಹಿಂದೆ ಅತ್ತೆ ನರಸಮ್ಮ ತನ್ನ ಸೊಸೆ ಇಂದ್ರಮ್ಮ ಮೇಲೆ ನೀಡಿದ ದೂರಿನ ಮೇರೆಗೆ ಗುಬ್ಬಿ ಠಾಣೆಯಲ್ಲಿ ಕೊಲೆ ಆರೋಪದ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಿದ ಪೊಲೀಸರಿಗೆ ಬೇರೆಯೇ ಮಾಹಿತಿ ಸಿಕ್ಕಿ ಯತೀಶ ಮತ್ತು ಆತನ ಹೆಂಡತಿ ವಿಜಯ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ತಾಯಿ ಮಗು ಇಬ್ಬರನ್ನೂ ವ್ಯವಸ್ಥಿತವಾಗಿ ಕೊಲೆ ಮಾಡಿರುವ ಸತ್ಯಾಂಶ ಹೊರಗೆ ಬಂದಿದೆ.

ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X