ಗುಬ್ಬಿ | ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಸವ ಬಲಿ : ಗ್ರೌಂಡಿಂಗ್ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ನಾಗರೀಕರು

Date:

Advertisements

ವಿದ್ಯುತ್ ಕಂಬ ಬಳಿ ಗ್ರೌಂಡಿಂಗ್ ಮೂಲಕ ವಿದ್ಯುತ್ ನೆಲದಲ್ಲಿ ಹರಿದಾಡಿ ಅಲ್ಲೇ ನಡೆದು ಹೊರಟಿದ್ದ ಭದ್ರ ಹೆಸರಿನ ಬಸವ ಹಠಾತ್ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮುಂಜಾನೆಯಿಂದ ಸುರಿಯುತ್ತಿದ್ದ ಮಳೆಯಿಂದ ವಿದ್ಯುತ್ ಕಂಬಗಳಲ್ಲಿ ವೈರ್ ಗಳಿಂದ ವಿದ್ಯುತ್ ನೆಲದಲ್ಲಿ ಹರಿದಾಡಿದೆ. ಎಡಬಿಡದೆ ಸುರಿದ ಮಳೆಯಿಂದ ಬಸ್ ಸ್ಟ್ಯಾಂಡ್ ಮುಂದಿನ ಅಂಗಡಿ ಸಾಲಿನ ಬಳಿ ಗ್ರೌಂಡಿಂಗ್ ಆಗಿ ಕಂಬದ ಸುತ್ತಲಿನಲ್ಲಿ ವಿದ್ಯುತ್ ಹರಿದಿದೆ. ತನ್ನಷ್ಟಕ್ಕೆ ತಾನು ನಡೆದ ಬಸವ ಕ್ಷಣಾರ್ಧದಲ್ಲಿ ಬಲಿಯಾಗಿದೆ.

ಶ್ರೀ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಅವರಿಗೆ ವಿಧಿವಿಧಾನದಲ್ಲಿ ಬಿಟ್ಟ ಭದ್ರ ಹೆಸರಿನ ಬಸವ ಊರಿನಲ್ಲಿ ದೈವ ಸ್ವರೂಪವಾಗಿ ಓಡಾಡಿಕೊಂಡಿತ್ತು. ಇಂದು ಬೆಳಿಗ್ಗೆ ನಡೆದ ಘಟನೆಗೆ ಬೇಸರ ವ್ಯಕ್ತಪಡಿಸಿದ ಭಕ್ತವೃಂದ ವಿದ್ಯುತ್ ಕಂಬ ನಿರ್ವಹಣೆ ಬಗ್ಗೆ ಬೆಸ್ಕಾಂ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಈಗಾಗಲೇ ಮೂಕ ಪ್ರಾಣಿಗಳು ಬಲಿಯಾದ ಘಟನೆ ನಡೆದಿದೆ. ಮಹಾಲಕ್ಷ್ಮಿ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ವಿದ್ಯುತ್ ಕಂಬ ಬಳಿ ವಿದ್ಯುತ್ ಹರಿದು ಹಸುವೊಂದು ಬಲಿಯಾಗಿದೆ. ಕೆಎಂಎಫ್ ಪಶು ಆಹಾರ ಘಟಕ ಬಳಿಯ ಕಂಬದ ಬಳಿ ಮೇಕೆಗಳ ಹಿಂಡು ಕೊದಲೆಳೆಯಲ್ಲಿ ಪಾರಾಗಿದ್ದವು

Advertisements

“ಗುಬ್ಬಿ ಪಟ್ಟಣದ ಹಲವು ಬಡಾವಣೆಯಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಕೆಲ ಭಾಗದಲ್ಲಿ ತಂತಿ ವೈರ್ ಗಳು ಸ್ಕಿನ್ ಓಪನ್ ಆಗಿ ಕರೆಂಟ್ ಹರಿದಾಡುತ್ತಿದೆ. ಮೂಕ ಪ್ರಾಣಿಗಳು ಈಗಾಗಲೇ ಬಲಿಯಾಗುತ್ತಿವೆ. ಮನುಷ್ಯರ ಜೀವದ ಚೆಲ್ಲಾಟ ಆಡುವ ಬೆಸ್ಕಾಂ ಅಧಿಕಾರಿಗಳು ಹಳೆಯ ತಂತಿ ಬದಲಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ಸ್ಥಳೀಯ ಪಟ್ಟಣ ಪಂಚಾಯಿತಿ ಸಹ ವಿದ್ಯುತ್ ತಂತಿಗಳ ಬಗ್ಗೆ ನಿಗಾವಹಿಸಿ ಕೂಡಲೇ ಸರಿ ಪಡಿಸಬೇಕು ” ಎಂದು ವಕೀಲ ಜಿ.ಎಂ.ಶಿವಾನಂದ್ ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X