ಗುಬ್ಬಿ | ರಜೆಯಲ್ಲಿದ್ದ ಯೋಧ ವೇಣುಗೋಪಾಲ್ ಮರಳಿ ಗಡಿಯತ್ತ: ಆತ್ಮೀಯ ಬೀಳ್ಕೊಡುಗೆ ನೀಡಿದ ಗುಬ್ಬಿ ನಾಗರೀಕರು

Date:

Advertisements

ವರ್ಷಕೊಮ್ಮೆ ರಜೆ ಪಡೆದು ತಮ್ಮ ಮಕ್ಕಳ ಶಾಲಾಕಾಲೇಜು ದಾಖಲಾತಿ ಕೆಲಸ ಮಾಡುತ್ತಿದ್ದ ಬಿಎಸ್ಎಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಯನ್ನು ಆಲಿಸಿ ರಜೆಯನ್ನು ಮೊಟಕು ಗೊಳಿಸಿ ತಮ್ಮ ದೇಶ ಕಾಯುವ ಜವಾಬ್ದಾರಿಗೆ ಮರಳಿ ಗಡಿ ಭಾಗಕ್ಕೆ ಮರಳುವ ಸಮಯದಲ್ಲಿ ಗುಬ್ಬಿ ನಾಗರೀಕರು ಆತ್ಮೀಯ ಬೀಳ್ಕೊಡುಗೆ ನೀಡಿ ಯುದ್ಧ ಗೆದ್ದು ಬನ್ನಿ ಎಂದು ಆಶಿಸಿದರು.

ಗುಬ್ಬಿ ಪಟ್ಟಣದ 19 ನೇ ವಾರ್ಡ್ ಬಿಲ್ಲೇಪಾಳ್ಯ ಬಡಾವಣೆಯ ನಿವಾಸಿ ಯೋಧ ವೇಣುಗೋಪಾಲ್ ಪತ್ನಿ ಇಬ್ಬರು ಹೆಣ್ಣು ಮಕ್ಕಳ ಸುಂದರ ಸಂಸಾರ ಹೊಂದಿದ್ದಾರೆ. ದೇಶದ ಗಡಿ ಕಾಯುವ ಕಾಯಕ ನಿಷ್ಠೆಯಿಂದ ನಿರ್ವಹಿಸಿ ವರ್ಷಕೊಮ್ಮೆ ರಜೆ ಹಾಕಿ ತನ್ನ ಕುಟುಂಬದೊಂದಿಗೆ ಕಾಲ ಕಳೆಯುವ ಜೊತೆಗೆ ಮಕ್ಕಳ ಶಿಕ್ಷಣ ಪ್ರಗತಿಯ ಆಲೋಚನೆ ನಡೆಸಿ ಶಾಲಕಾಲೇಜು ದಾಖಲಾತಿ ನಡೆಸಿ ಕೆಲ ಕಾಲ ವಿಶ್ರಮಿಸುವ ಸಮಯದಲ್ಲೇ ಕರ್ತವ್ಯದ ಕರೆ ಬಂದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ವೇಣುಗೋಪಾಲ್ ಅವರು ಪಾಕಿಸ್ತಾನ ವಿರುದ್ಧ ಯುದ್ದಕ್ಕೆ ನಾವೆಲ್ಲಾ ಭಾಗವಹಿಸಿ ದೇಶ ಹಾಗೂ ನಾಗರೀಕರನ್ನು ಕಾಪಾಡುವ ಕರ್ತವ್ಯ ನಿಷ್ಠೆಯಿಂದ ಮಾಡಬೇಕಿದೆ ಎಂದು ಹೇಳಿ ಬೆಂಗಳೂರಿನ ವಿಮಾನ ನಿಲ್ದಾಣದತ್ತ ಸಾಗಿದರು.

ವಿಷಯ ತಿಳಿದ ತಕ್ಷಣ ಯೋಧರ ಮನೆಗೆ ಧಾವಿಸಿದ ಗುಬ್ಬಿ ನಾಗರೀಕರ ತಂಡವೊಂದು ವೇಣು ಗೋಪಾಲ್ ಅವರಿಗೆ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು. ಶತ್ರು ಪಾಕಿಸ್ತಾನದ ವಿರುದ್ಧ ಸೆಣಸಾಡಿ ವೀರ ಗೆಲುವು ನಮ್ಮದಾಗಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು.

Advertisements

ಈ ಸಂದರ್ಭದಲ್ಲಿ ಸಿ.ಆರ್.ಶಂಕರ್ ಕುಮಾರ್, ಕುಮಾರ್, ರಮೇಶಗೌಡ, ಲೋಕೇಶ್, ಚಿಕ್ಕೇಗೌಡ, ಬ್ಯಾಟರಾಯಪ್ಪ, ವಿನಯ್, ಮಧು, ಶ್ರೀರಾಮು, ಸತೀಶ್, ಧೀರಜ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯ 500ಮೀ ವಾಪ್ತಿಯಲ್ಲಿ ಆ.22ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ

ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025ಕ್ಕೆ ಸಂಬಂಧಿಸಿದಂತೆ ಸಕ್ರಿಯ ಹಿಂದೂ...

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

Download Eedina App Android / iOS

X