ಗುಬ್ಬಿ | ರೈತರ ಸಂಕಷ್ಟ ನೀಗಿಸಲು ಸಂಘಟನೆಯ ಬಲವರ್ಧನೆ ಅಗತ್ಯ: ಎ ಗೋವಿಂದರಾಜು

Date:

Advertisements

ದಿನದ 16 ಗಂಟೆ ದುಡಿಯುವ ರೈತ ವರ್ಗಕ್ಕೆ ಈಗಲೂ ಸೂಕ್ತ ಅನುಕೂಲ ಮಾಡಲು ಯಾವ ಸರ್ಕಾರಗಳೂ ಬದ್ಧವಾಗಿಲ್ಲ. ರೈತರ ಸಂಕಷ್ಟ ನೀಗಿಸಲು ಸಂಘಟನೆ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರೈತರು ಒಗ್ಗೂಡಿ ಹೋರಾಟ ನಡೆಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.

ತಾಲೂಕಿನ ಚೆನ್ನಯ್ಯನಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ರೈತ ಸಂಘ ಉದ್ಘಾಟಿಸಿ ಮಾತನಾಡಿದ ಅವರು, “ದಿನದ ಎಂಟು ಗಂಟೆ ದುಡಿಯುವ ವರ್ಗಕ್ಕೆ ಎಲ್ಲಾ ಅನುಕೂಲ ಕೊಡುವ ಸರ್ಕಾರ ದೇಶದ ಶೇಕಡಾ 70ರಷ್ಟು ಇರುವ ರೈತರಿಗೆ ವಿದ್ಯುತ್ ಇಲ್ಲ, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲ, ಬೀಜ ಗೊಬ್ಬರವಿಲ್ಲ. ಕೊಟ್ಟರೂ ಕೊಡದಂತೆ ರೈತ ವರ್ಗವನ್ನು ಕಡೆಗಣಿಸಿದ್ದಾರೆ” ಎಂದರು.

WhatsApp Image 2025 03 23 at 12.28.47 PM

“ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ ರೈತರು ಪ್ರತಿ 24 ನಿಮಿಷಕ್ಕೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ 3.50 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ವ್ಯಯ ಮಾಡಿ ಡ್ಯಾಂ ಕಟ್ಟುವ ಸರ್ಕಾರ ಕೃಷಿಗೆ ಉತ್ತೇಜನ ನೀಡುವ ಮುನ್ನ ರೈತರು ತಮ್ಮ ಬಂಡವಾಳದಲ್ಲಿ ಬೋರ್ ವೆಲ್ ಕೊರೆಸಿ ದೇಶಕ್ಕೆ ಅನ್ನ ನೀಡಿದ್ದಾರೆ. ರಾಜ್ಯ ಸರ್ಕಾರ 4.05 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಆದರೆ ರೈತರಿಗೆ ಕೇವಲ ಶೇಕಡಾ 16 ರಷ್ಟು ಮೀಸಲಿಟ್ಟಿದೆ. ವಾಸ್ತವದಲ್ಲಿ ರೈತರ ಸಂಖ್ಯಾನುಗುಣವಾಗಿ ಶೇಕಡಾ 60 ಮೀಸಲಿಸುವುದು ಸರಿ ಎನಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisements

ಇದನ್ನೂ ಓದಿ: ಗುಬ್ಬಿ | ಕಿಡಿಗೇಡಿಗಳಿಂದ ಸುರಿಗೇನಹಳ್ಳಿ ಕಾಡಿಗೆ ಬೆಂಕಿ : ಕಂಗಾಲಾದ ಮರಗಿಡಗಳಲ್ಲಿನ ಪಕ್ಷಿ ಸಂಕುಲ

ತಾಲೂಕಿನ ಆರು ಗ್ರಾಮಗಳ ಶಾಖೆಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

WhatsApp Image 2025 03 23 at 12.28.48 PM 1

ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಚನ್ನಬಸವಣ್ಣ, ಕುಮಾರಸ್ವಾಮಿ, ಸತ್ತಿಗಪ್ಪ, ನಾಗರಾಜು, ಕತ್ತಿಗಪ್ಪ, ಯತೀಶ್, ಪ್ರಕಾಶ್, ಈಶಣ್ಣ, ಮಹದೇವಣ್ಣ, ಜಗದೀಶಯ್ಯ, ಗಂಗಣ್ಣ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X