ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಜೋಡಿಮಲ್ಲಪ್ಪನಳ್ಳಿ ಗ್ರಾಮದಲ್ಲಿ, ರೈತ ಫೈನಾನ್ಸ್ ಕಿರುಕುಳ ಹಾಗೂ ಸಾಲದ ಒತ್ತಡ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತ ವೆಂಕಟೇಗೌಡ (48), ವೆಂಕಟೇಗೌಡ ಫೈನಾನ್ಸ್ ಸಂಸ್ಥೆಯಿಂದ 3 ಲಕ್ಷ 70 ಸಾವಿರ, ಬ್ಯಾಂಕ್, ವ್ಯವಸಾಯ ಸಹಕಾರ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲ ಸೇರಿ 3 ಲಕ್ಷ 90 ಸಾವಿರ, ಒಟ್ಟು 7 ಲಕ್ಷ 60 ಸಾವಿರ ರೂ. ಸಾಲ ಮಾಡಿದ್ದರು.
ಇದನ್ನೂ ಓದಿದ್ದೀರಾ?ಹಾಸನ l ಆನೆ ದಾಳಿ; ಪ್ರಾಣಾಪಾಯದಿಂದ ಕಾರ್ಮಿಕ ಪಾರು
ಸಾಲದ ಹಣವನ್ನು ಪಾವತಿಸುವಂತೆ ಫೈನಾನ್ಸ್ ಸಂಸ್ಥೆಗಳಿಂದ ನಿರಂತರ ಕಿರುಕುಳಕ್ಕೆ ಒಳಗಾದರಿಂದ, ರೈತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
