ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಹದಿನೇಳು ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.
ಕೋರ್ಲಗದ್ದೆ ಗ್ರಾಮದ ಕೆ ಬಿ ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಶುರುವಾಗಿದ್ದರಿಂದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ಜನರಿಗೆ ಸಿಡಿಲು ಬಡಿದಿದೆ.
ಈ ಸುದ್ದಿ ಓದಿದ್ದೀರಾ? ತಾಳಿಕೋಟೆ ತಾಲೂಕು ಆಸ್ಪತ್ರೆ ಮೂಲ ಸೌಕರ್ಯ ಕುಂಠಿತ; ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲರಿಗೆ ಮನವಿ
ಸಿಡಿಲು ಬಡಿದ ಅವಘಡದಲ್ಲಿ ಲತಾ(35) ಎಂಬುವವರ ಸ್ಥಿತಿ ಗಂಭೀರವಾಗಿದೆ. ರೇಣುಕಾ(49), ಸವಿತಾ(45), ಸುಮಿತ್ರ (51), ರೇಣುಕಮ್ಮಾ(55), ನೇತ್ರ(40), ನಿರ್ಮಲ(51), ವೀಣಾ(35), ಅನಿತಾ(55) ಮಂಜುಳ(45), ಪುಷ್ಪ(35), ಭಾಗ್ಯ(45), ಶಾರದಮ್ಮ(55), ಜಯಂತಿ(55) ಗಾಯಿತ್ರಮ್ಮ(45), ಮಂಜುಳಮ್ಮ(60) ಸೇರಿದಂತೆ ಹದಿನೇಳು ಮಂದಿಗೆ ಸಿಡಿಲು ಬಡಿದಿದ್ದು, ಎಲ್ಲರನ್ನೂ ಸಕಲೇಶಪುರ ತಾಲೂಕಿನ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.