ಶ್ರೀನಿವಾಸ್ ಮಾನೆ ಶಾಸಕರು ಹಾನಗಲ್ಲ ಇವರ ವೈಯಕ್ತಿಕ ನೆರವು ಹಾಗೂ ಸಮುದಾಯದ ಸಹಭಾಗಿತ್ವದಡಿ ಹಾನಗಲ್ಲ ತಾಲೂಕಿನ ಹಸನಾಬಾದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೂ. 1 ಲಕ್ಷ 12 ಸ್ಲಾವಿರ ರೂ. ಮೌಲ್ಯದ ನಾನಾ ಸಾಮಗಿಗಳನ್ನು ವಿತರಿಸಲಾಯಿತು.
ಒಟ್ಟು ರೂ. 1 ಲಕ್ಷ 12 ಸಾವಿರ ರೂಗಳಲ್ಲಿ ರೂ 56 ಸಾವಿರ ರೂ. ಶಾಸಕರು. ವ್ಯಯಕ್ತಿಕವಾಗಿ ಭರಿಸಿದರೆ, ಇನ್ನುಳಿದ ರೂ 56 ಸಾವಿರ ರೂ.ಗಳನ್ನು ಗಾಮದ ದಾನಿಗಳು.. ಶಾಲೆಯ ಹಳೆಯ ವಿದ್ಯಾರ್ಥಿಗಳು ಭರಿಸಿದ್ದಾರೆ.
ಎಲ್.ಇ.ಡ್ರಿ. ಸ್ಟಾರ್ಟ್ ಟಿವಿ, ಚಾರ್ಪಬಲ್ ಬ್ಲೂಟೂತ್ ಸ್ಪೀಕರ್, ಮ್ಯಾಗ್ನೆಟಿಕ್, ಗ್ರೀನ್ ಬೋರ್ಡ್, ಬಣ್ಣ ಸೇರಿದಂತೆ ನಾನಾ ಸಾಮಗ್ರಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸರ್ಕಾರದ ಅನುದಾನದ ಅವಶ್ಯಕತೆ ಇಲ್ಲದೇ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ವಿನೂತನ ಪರಿಕಲ್ಲನೆ ಹಾನಗಲ್ಲ ತಾಲೂಕಿನಲ್ಲಿ ಕಂಡಿದೆ. ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ಸಮಾರಂಭದಲ್ಲಿ 50%-50% ಕಾರ್ಯಕ್ರಮ ಘೋಷಿಸಲಾಗಿತ್ತು. ಎಂದರು.
“ಇದಕ್ಕೆ ಉತ್ತಮ ಬೆಂಬಲ ಸಿಕ್ಕಿದ ಕಳೆದ ಎರಡು ವರ್ಷಗಳಲ್ಲಿ ರೂ. 3 ಕೋಟಿಗಿಂತ ಅಧಿಕ ವೆಚ್ಚದಲ್ಲಿ ನೂರಕ್ಕಿಂತ ಅಧಿಕ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹಾನಗಲ್ ತಾಲೂಕಿನ ಈ ಸಂಕಲ್ಪ ರಾಜ್ಯದ ಗಮನ ಸಹ ಸಳೆದಿದೆ. ಇದ್ದರಿಂದ ಪೇರಿತರಾಗಿ ಶಿಕ್ಷಣ ಇಲಾಖೆಯೇ “ಹಳ ಬೇರು. ಹೊಸ ಚಿಗುರು ಕಾರ್ಯಕ್ರಮ ರೂಪಿಸಿದ್ದ. ಸಮುದಾಯದ ಸಹಭಾಗಿತ್ವದಡಿ… ಶಾಲೆಗಳಿಗೆ ಸೌಲಭ್ಯ ಕಲ್ಲಿಸಲಾಗುತ್ತಿದೆ. ಕಲಿತ ಶಾಲೆಯ ಬೇಕಾ ಬೇಡಗಳಿಗೆ ಸ್ಪಂದಿಸುವುದು. ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಬಗ್ಗೆ ತಾಲೂಕಿನಲ್ಲಿ ಜಾಗೃತಿ ಮೂಡಿದೆ” ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಉಮೇಶ ದೊಡ್ಡಮ್ಮನಿ, ಪ್ರಭು ಬಿದ್ದರಕೊಪ್ಪ, ಮುಖ್ಯಶಿಕ್ಷಕಿ ಸಂಗೀತ್ಸಾ ಎಂ.ಎನ್, ರಾಜೋಲಿ ಮುಕ್ತಸೂರ, ಶೃದ್ದಾಲಿ ಮುಲ್ಲಾ, ಸುರ ಪಾಳಾ, ಬಸಣ್ಣ ಹೊಸಮನಿ, ಹಜರತ್ ರಾಾದ, ಭಾಷಾಸಾಬ ಕನವಳ್ಳಿ, ಚಂದ್ರಕಾಂತ ಚಿಕ್ಕೇರಿ. ಉಮೇಶ ಹೊಸಮನಿ, ಪ್ರದೀಪ ಹರಿಜನ, ರಾಜಕುಮಾರ ಶಿರಪಂತಿ ಸೇರಿದ್ದಂತೆ ಇನ್ನೂ ಹಲವರು ಇದ್ದರು.