“ಕನ್ನಡ ನಾಡು, ನುಡಿಗಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವದ ಗಟ್ಟಿ ಧ್ವನಿ ಡಾ. ಪಾಟೀಲ್ ಪುಟ್ಟಪ್ಪ. ನುಡಿದಂತೆ ನಡೆದ ಪಾಪು ಅವರ ಘರ್ಜನೆಗೆ ಭ್ರಷ್ಠ ಅಧಿಕಾರಿಗಳು ನಡಗುತ್ತಿದ್ದರು” ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ರವಿವಾರ ಪಾಪು ಅಭಿಮಾನಿಗಳ ಬಳಗದ ವತಿಯಿಂದ ನಡೆದ ಐದನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಪಾಪು ಅವರು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪ್ರಶ್ನೆಗಳನ್ನು ಎತ್ತಿ ಏರು ಧ್ವನಿಯಲ್ಲಿ ನಿರ್ಬಿಡೆಯಿಂದ ಪ್ರತಿರೋಧಿಸುತ್ತಿದ್ದರು. ಅತ್ಯಂತ ನಿಷ್ಠುರವಾಗಿದ್ದ ಅವರು ಎಂದೂ ನಿಷ್ಕರುಣಿಯಾಗಿರಲಿಲ್ಲ” ಎಂದು ಹೇಳಿದರು.
“ಕನ್ನಡ ಕಾವಲು ಸಮಿತಿ ಸದಸ್ಯರಿದ್ದಾಗ ಆಡಳಿತ ಭಾಷೆ ಕನ್ನಡವಾಗಲು ಸಾಕಷ್ಟು ಕೆಲಸ ಮಾಡಿದ್ದರು. ಅದಕ್ಕಾಗಿ ಆರು ಸಾವಿರ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಇವರ ಖಡಕ್ ವ್ಯಕ್ತಿತ್ವಕ್ಕೆ ರಾಜಕಾರಣಿಗಳು ಸಹ ಅಂಜುತ್ತಿದ್ದರು” ಎಂದು ಹೇಳಿದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, “ಕನ್ನಡ ಕಟ್ಟುವ ಕೆಲಸಕ್ಕಾಗಿ ಪಾಪು ಅವರು ಅತ್ಯಂತ ಬದ್ಧತೆಯಿಂದ ದುಡಿದರು. ನಾಡು ನುಡಿಯ ಏಳಿಗೆಗಾಗಿ ಕೆಲಸ ಮಾಡುವಾಗ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡಂತಹ ಮಹಾನ ವ್ಯಕ್ತಿತ್ವ ಹೊಂದಿದ್ದರು. ಅವರ ದೃಡತೆ, ಬದ್ಧತೆ ಹಾಗೂ ನಿರ್ಬಿಡೆ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿಕೊಳ್ಳಬೇಕು” ಎಂದು ಯುವಕರಿಗೆ ಸಲಹೆ ನೀಡಿದರು.
ಸತೀಶ ಎಂ.ಬಿ, ಪೃಥ್ವಿರಾಜ ಬೆಟಗೇರಿ ಹಾಗೂ ಸುಶೀಲಾ ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪಾಪು ಅವರ ಪ್ರತಿಮೆಗೆ ಪುಷ್ಪಾರ್ಪಣೆ ಸಲ್ಲಿಸಲಾಯ್ತು.
ಕಾರ್ಯಕ್ರಮದಲ್ಲಿ ಬಸವರಾಜ ಪೂಜಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಈ ಸುದ್ದಿ ಓದಿದ್ದೀರಾ? ರೋಣ ಸೀಮೆಯ ಕನ್ನಡ | ಬೇ ಯವ್ವಾ ಬಾರ್ಬೆ, ಅವ್ವಕ್ಕನ ಕರ್ಕಂಡ ಬಾ, ಚಿಗವನ್ನ ಕರ್ಕಂಡ ಬಾ, ಹೊತ್ತಾತ ಬಾರ್ಬೆ ಕಡ್ಲಿ ಕೀಳಾಕ..
ಪಾಪು ಅಭಿಮಾನಿ ಬಳಗದ ಪರಿಮಳ ಜೈನ, ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ ನಾಯ್ಕ, ಸಿ.ಆರ್ ಮಾಳಗಿ, ರೇಣುಕಾ ಗುಡಿಮನಿ, ಬಸವರಾಜ ಎಸ್, ಎಸ್.ಆರ್ ಹಿರೇಮಠ, ರಮೇಶ ತಳವಾರ, ವಿಠ್ಠಲ ಗೌಳಿ, ಬಸನಗೌಡ ಎನ್. ಭರಮಗೌಡ್ರ, ಎಂ.ಕೆ ಮಕಬುಲ್, ಮಧು ನೆಗಳೂರು, ಖಲಂದರ್ ಅಲ್ಲಿಗೌಡ್ರ, ರೇಷ್ಮಾ ಅಲ್ಲಿಗೌಡ್ರ, ರಾಜೇಂದ್ರ ಹೆಗಡೆ, ಕೆ.ಆರ್ ಹಿರೇಮಠ, ಶಿಲ್ಪಾ ಎಚ್. ಗದಿಗೇರ, ತಿಪ್ಪೇಸ್ವಾಮಿ ಹೊಸಮನಿ, ಸಂಜಯಗಾಂಧಿ ಸಂಜೀವಣ್ಣನವರ, ಎಸ್.ಜಿ ಹೊನ್ನಪ್ಪನವರ, ಶಶಿಕಲಾ ಅಕ್ಕಿ, ಬಸವರಾಜ ಸಾವಕ್ಕನವರ ಇದ್ದರು. ರಾಧಾ ಎಚ್.ಎಂ ವಂದಿಸಿದರು.
