ಹಾವೇರಿ | ಬಂಜಾರ ಸಮುದಾಯದ ಕಲೆ ಬೆಳಸಬೇಕು : ಸೈನಾ ಭಗತ್ ಮಹಾರಾಜ

Date:

Advertisements

“ತಮ್ಮ ಉಡುಪು ಮತ್ತು ನೃತ್ಯದ ಮೂಲಕ ಈಗಲೂ ಅನನ್ಯತೆಯನ್ನು ಉಳಿಸಿಕೊಂಡಿರುವ ಲಂಬಾಣಿ ಜನಾಂಗ ಸದಾ ಕಷ್ಟ ಜೀವಿಗಳು. ಇಂಥಹ ಸಣ್ಣ ಸಮುದಾಯದ ಕಲೆ ಸಂಸ್ಕೃತಿಯನ್ನು ಬಹು ಸಂಖ್ಯಾತ ಸಮಾಜದವರು. ಪ್ರೀತಿ ವಿಶ್ವಾಸದಿಂದ  ಬಂಜಾರ ಸಮುದಾಯದ ಕಲೆ ಬೆಳೆಸಬೇಕು” ಎಂದು ಬಂಜಾರ ಸಮುದಾಯದ ಸಾಲೂರಮಠದ ಸೈನಾ ಭಗತ್ ಮಹಾರಾಜರು ಹೇಳಿದರು.

ಹಾವೇರಿ ಪಟ್ಟಣದ ಗುರುಭವನದಲ್ಲಿ ಪೂರ್ವಿಕ ಬಂಜಾರ ಸಾಂಸ್ಕೃತಿಕ ಕಲಾ ಸಂಸ್ಥೆಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಶೀರ್ವಚನವನ್ನು ನೀಡಿದ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, “ಕಲೆ ಕಲಾವಿದನಿಗೆ ಸಮಾಜದಲ್ಲಿ ಬೆಲೆ ತರುತ್ತವೆ. ಬಂಜಾರುಗಳು ಉತ್ತಮ ಹಾಡುಗಾರರು ಮತ್ತು ನೃತ್ಯ ಪಟುಗಳು. ಅವರ ಕಲೆ ಒಟ್ಟು ಸಮಾಜದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇಂತಹ ಸಮಾಜದ ಪ್ರತಿನಿಧಿಯಾಗಿ ಗೀತಾಬಾಯಿ ಲಮಾಣಿ ತಮ್ಮ ಪೂರ್ವಿಕಾ ಕಲಾ ಸಂಸ್ಥೆಯ ಮೂಲಕ ಘನತೆ ಹೆಚ್ಚಿಸಿದ್ದಾರೆ” ಎಂದರು.

ಸಮಾರಂಭವನ್ನು ಉದ್ದೇಶಿಸಿ ಆರ್.ಬಿ. ಪಾಟೀಲ, ಪ್ರಭಾಕರ ತಳವಾರ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಶ್ರೀಮತಿ ಪರಿಮಳಾ ಜೈನ್, ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಬಸವರಾಜ ಸಾವಕ್ಕನವರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಬಡವೆಪ್ಪ ಆನವಟ್ಟಿ, ದಲಿತ ನಾಯಕರು ಸಂಜಯಗಾಂಧಿ ಸಂಜೀವಣ್ಣನವರ, ಚೇತನರಾಜ ಎನ್ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಝಿ ಟಿ.ವ್ಹಿ ಸರಿಗಮ ರನ್ನರ್ ಅಪ್ ರಮೇಶ ಲಮಾಣಿ ಆಕರ್ಷಣಿಯಾಗಿದ್ದರು. ಗೌತಮ ಸಾವಕ್ಕನವನರವರ ಸ್ಯಾಕ್ಸೊಫೋನ್, ರೇಣುಕಾ ಗೋರಿಮಟ್ಟಿ ಅವರ ಸೋಬಾನಿ ಪದ, ಆರುಂಧತಿ ಅವರ ಜೋಗತಿ ನೃತ್ಯ, ಎಸ್. ಕುಶಾಲ ಚಿತ್ರಗಾರರ ಭಕ್ತಿಗೀತೆ, ಜ್ಯೋತಿ ಅರ್ಕಸಾಲಿ ಅವರ ಕೋಲಾಟ, ರಕ್ಷಿತಾ ಬಂಜಾರ, ಮೇಘಾ ಲಂಬಾಣಿ ಅವರುಗಳ ಲಂಬಾಣಿ ನೃತ್ಯ ಪ್ರದರ್ಶನವಾದವು.

ಈ ಸುದ್ದಿ ಓದಿದ್ದೀರಾ? ಗದಗ | ಅವಳಿ ನಗರಕ್ಕೆ ಸಮರ್ಪಕ ನೀರಿನ ಪೂರೈಕೆಗೆ ಆದ್ಯತೆ ಇರಲಿ : ಸಚಿವ ಎಚ್ ಕೆ ಪಾಟೀಲ

ಗಣ್ಯರಾದ ರಾಜಾಸಾಹೇಬ ಮಾನೇಗಾರ, ಪ್ರದೀಪಗೌಡ್ರ, ನಾಗರಾಜ ಲಮಾಣಿ, ಶಾಂತಪ್ಪ ಲಮಾಣಿ, ಶೇಖಪ್ಪ ದೇವಪ್ಪ ಲಮಾಣಿ, ಹಾಲೇಶ ಗೋಪಿನಾಯಕ್, ಸುನೀಲ್ ಲಮಾಣಿ, ಯೂಸುಫ್ ಸೈಕಲ್‌ಗಾರ, ಶಿವಯೋಗಿ ಗುರ್ಜನವರ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ನಾಗರಾಜ ನಡುವಿನಮಠ ಸ್ವಾಗತಿಸಿದರು. ಪೂರ್ವಿಕಾ ಬಂಜಾರು ಕಲಾಸಂಸ್ಥೆಯ ಮುಖ್ಯಸ್ಥರಾದ ಗೀತಾಬಾಯಿ ಲಮಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಅನಿತ ಹರನಗಿರಿ ಮತ್ತು ಕುಬೇರ ನಾಯ್ಕ ನಿರೂಪಿಸಿದರು. ಕೊನೆಯಲ್ಲಿ ಶಿವಪ್ಪ ಲಮಾಣಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X