ಗುಲ್ಬರ್ಗಾ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುವಂತಿದೆ. ಇದು ವಿಶ್ವವಿದ್ಯಾಲಯಕ್ಕೆ ಶೋಭೆಯಲ್ಲ ಬಡ ಕೂಲಿ ಕಾರ್ಮಿಕರ, ರೈತರ ಮಕ್ಕಳ ಭವಿಷ್ಯದ ಜೊತೆ ಆಟ ಆಡದಿರಿ ಎಂದು ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಮುಖಂಡ ಮಿಲಿಂದ ಸಾಗರ್ ಅಭಿಮತ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ಮೆರವಣಿಗೆ ತೆರಳಿ ಉಪ ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ, ಯುವ ಹೋರಾಟಗಾರ ಮಿಲಿಂದ ಸಾಗರ್ ಮಾತನಾಡಿ, “ಸದರಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮೂರು ವರ್ಷದ ವ್ಯಾಸಂಗ ಅವಧಿ ಮುಗಿಯುತ್ತಾ ಬಂದರೂ ಕೂಡಾ ಫಲಿತಾಂಶ ಪ್ರಕಟಿಸಿಲ್ಲ” ಎಂದು ಆರೋಪಿಸಿದರು.
“ಯುಯುಸಿಎಂಎಸ್ನಲ್ಲಿ ಪರೀಕ್ಷೆ ಮೊತ್ತ, ಕಾಲೇಜು ಮೊತ್ತ ಹಾಗೂ ಇತರೆ ಕೆಲಸಗಳಿಗೆ ಸರ್ವರ್ ಸಮಸ್ಯೆಯಿಂದ ಕಾಲೇಜು ಅವಧಿ ಮುಗಿದರೂ ಅಂಕಪಟ್ಟಿ ದೊರೆತಿಲ್ಲ. ಹತ್ತು ಹಲವು ಸಮಸ್ಯೆಗಳು ನಮ್ಮ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿಗಳಿಗೆ ಪ್ರಮೋಟ್ ಮಾಡಬೇಕು ಅಥವಾ ಮರುಪರಿಕ್ಷೇ ಬರೆಯಲು ಅನುಮತಿ ನೀಡಬೇಕು. 15 ದಿನಗಳಲ್ಲಿ ಈ ಪ್ರಕ್ರಿಯೆ ಜಾರಿ ಮಾಡದಿದ್ದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಗದಗ | ಅಕ್ರಮ ಗಣಿಗಾರಿಕೆಯಲ್ಲಿ ನಿರಂತರ ತೊಡಗಿದಲ್ಲಿ ಗಡಿಪಾರು ಶಿಕ್ಷೆ: ಜಿಲ್ಲಾಧಿಕಾರಿ ವೈಶಾಲಿ
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿ ಮಂಜುನಾಥ್ ಕೆ ಮಲ್ಲಾಬಾದ್, ಎಎಎಸ್ಎ ಮುಖಂಡ ಜೈ ಭೀಮ್ ಸಿಂಗ್ಗೆ. ವಿದ್ಯಾರ್ಥಿಗಳಾದ ಭಾಗಣ್ಣ ಎಂ ಮುತ್ತುಗೊಳ್. ರಾಜು ಜನಿವಾರ, ಆಕಾಶ್ ಬೆಳ್ವಾರ್, ಸುರೇಶ್ ಖಾದಾಪುರ್, ಭಾಗಣ್ಣ ವನಗುಂಟ, ಶಿವರಾಮ ಗುಡೂರ್, ಭೀಮಣ್ಣ, ಸಮೀರ್, ಸ್ವಾಮಿ, ಯಲಾಲಿಂಗ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
