ಹೃದಯಾಘಾತದಿಂದ ಕರ್ತವ್ಯದಲ್ಲಿದ್ದಾಗಲೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಳಂದ ತಾಲ್ಲೂಕಿನ ಮದಗುಣಕಿ ಗ್ರಾಮದ ಶರಣಬಸಪ್ಪ ರಾಚಪ್ಪ ವಾಲಿ(45) ಮೃತರು. ಕಲಬುರಗಿಯಿಂದ ಪುಣೆಗೆ ತೆರಳಿದ ಸಂದರ್ಭದಲ್ಲಿ ಹೃದಯಾಘಾತ ದಿಂದ ಮೃತಪಟ್ಟರು.
ಶರಣಬಸಪ್ಪ ಅವರು 2010ರಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಯ ಸೇವೆಗೆ ಸೇರಿದ್ದರು. ಕಲಬುರಗಿ ಘಟಕ–1ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಕಲಬುರಗಿ–ಪುಣೆ ಸಂಚಾರ ಸೇವೆಯಲ್ಲಿ ತೆರಳಿದ್ದರು. ಬೆಳಿಗ್ಗೆ ಬಸ್ ಪುಣೆಯ ನಿಲ್ದಾಣಕ್ಕೆ ತಲುಪಿದ್ದಾಗ ಎದೆನೋವಿನಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಗುಡುಗು, ಸಿಡಿಲಿನ ಅಪಾಯದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿವೆ ಸಲಹೆ
ಮೃತರಿಗೆ ಗರ್ಭಿಣಿ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಕಲಬುರಗಿ ಬಸ್ ಘಟಕದ ಅಧಿಕಾರಿಗಳು ಆಂಬುಲೆನ್ಸ್ನಲ್ಲಿ ಪಾರ್ಥಿವ ಶರೀರವನ್ನು ಬುಧವಾರ ತರುವ ವ್ಯವಸ್ಥೆ ಮಾಡಿದ್ದರು. ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಜರುಗಿತು