ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಆದರ್ಶ ಗ್ರಾಮ ಸಮಿತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
“ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮ ಪಂಚಾಯತಿಯ ಎಲ್ಲ ಗ್ರಾಮಗಳಲ್ಲಿ ಇರುವ ಬೋರ್ವೆಲ್ಗಳು ಇಲ್ಲದಂತ ಪರಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಗ್ರಾಮಗಳಲ್ಲಿ ಇಂತಹದ್ದೆ ಸ್ಥಿತಿ ಇದ್ದು, ಬಾವಿಗಳು ಒಣಗಿವೆ. ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯಲು ಒಂದು ಹನಿ ನೀರು ಇಲ್ಲದಂತಾಗಿದೆ” ಎಂದು ಹೇಳಿದರು.
“ಕೂಡಲೇ ನೀರಿನ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ನೀರಿನ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಚಿಗರಹಳ್ಳಿ ಮುಖ್ಯರಸ್ತೆ ತಡೆದು ಪ್ರತಿಭಟನೆ ಮಾಡುಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಡಿಸ್ಟಿಲರಿ ಘಟಕಕ್ಕೆ ವಿರೋಧ: ನಿಮ್ಮ ಅಭಿಪ್ರಾಯವನ್ನೇ ವರದಿ ಸಲ್ಲಿಸುವೆ; ಡಿಸಿ ಭರವಸೆ
ಈ ಸಂದರ್ಭದಲ್ಲಿ ಆದರ್ಶ ಗ್ರಾಮ ಸಮಿತಿ ಯಾಳವಾರ ಅಧ್ಯಕ್ಷ ಇಬ್ರಾಹಿಂ ಪಟೇಲ್, ರಾಜಾಪಟೇಲ ಪೋಲಿಸ್ ಯಾಳವಾರ, ನಾಗರಾಜ ಸಜ್ಜನ, ನಜೀರ ಪಟೇಲ, ದೇವು ದೊರೆ ಯಾಳವಾರ, ಶರಣಪ್ಪ ದೊಡ್ಡಮನಿ, ನಿಂಗಪ್ಪ ಪೂಜಾರಿ ಯಾಳವಾರ ಇದ್ದರು.